ಮಿಶ್ರ ಬೆಳೆಗಳ ಜೊತೆಗೆ ಜೈವಿಕ ರಸಗೊಬ್ಬರಗಳ ಬಳಕೆ ಹೆಚ್ಚಾಗಬೇಕು : ಲಕ್ಕಣ್ಣ ಸವಸುದ್ದಿ

Chandrashekar Pattar
ಮಿಶ್ರ ಬೆಳೆಗಳ ಜೊತೆಗೆ ಜೈವಿಕ ರಸಗೊಬ್ಬರಗಳ ಬಳಕೆ ಹೆಚ್ಚಾಗಬೇಕು : ಲಕ್ಕಣ್ಣ ಸವಸುದ್ದಿ
Oplus_131072
WhatsApp Group Join Now
Telegram Group Join Now

ಮೂಡಲಗಿ: ಕೃಷಿ ಪ್ರಧಾನವಾದ ನಮ್ಮ ದೇಶಕ್ಕೆ ರೈತನೇ ಬೆನ್ನೆಲಬು, ಹೊಸ ಆವಿಷ್ಕಾರಗಳನ್ನು ಬಳಸಿಕೊಂಡು ಉತ್ತಮ ಕೃಷಿ ಪದ್ಧತಿಯನ್ನು ರೂಢಿಸಿಕೊಂಡಿದ್ದೆಯಾದರೆ ರೈತ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಅರಭಾವಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಹೇಳಿದರು.

ಸೋಮವಾರದಂದು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆ ಮೈದಾನದಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆ, ವಿಜ್ಞಾನ ಕೇಂದ್ರ ಬರ್ಡ್ಗ ತುಕ್ಕಾನಟ್ಟಿ, ಶ್ರೀ ಶಿವಬೋಧರಂಗ ಪಿಕೆಪಿಎಸ್ ಮೂಡಲಗಿ ಹಾಗೂ ನಿಸರ್ಗ ಫೌಂಡೇಶನ್ ಮೂಡಲಗಿ, ಇವುಗಳ ಸಹಯೋಗದೊಂದಿಗೆ ಆಯೋಜಿಸಲಾದ ಕೃಷಿ ಮೇಳದಲ್ಲಿ ಯಂತ್ರೋಪಕರಣಗಳ ಪ್ರದರ್ಶನ, ಸಾವಯವ ಕೃಷಿ, ಸಿರಿಧಾನ್ಯಗಳ ಉತ್ಪಾದನೆ. ಜೈವಿಕ ಗೊಬ್ಬರ ಹಾಗೂ ಪೀಡೆನಾಶಕ, ಜೇನು ಕೃಷಿ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಾದ ಆವಿಷ್ಕಾರಗಳು ಹಾಗೂ ಸಾವಯವ ಬೆಲ್ಲದಿಂದ ತಯಾರಿಸಿದ ಹೋಳಿಗೆ ಸ್ಪರ್ಧೆಯನ್ನು ವೀಕ್ಷಿಸಿದ ನಂತರ ಸುದ್ದಿಗಾರರನ್ನು ಕುರಿತು ಮಾತನಾಡಿದ ಅವರು, ಆಯೋಜಕರಿಗೆ ಅಭಿನಂದನೆಗಳನ್ನು ತಿಳಿಸುತ್ತ, ಕೃಷಿ ಮೇಳವನ್ನು ತುಂಬಾ ಅಚ್ಚುಕಟ್ಟಾಗಿ ಆಯೋಜಿಸಿ, ಈ ಭಾಗದ ರೈತರಲ್ಲಿ ಜಾಗೃತಿ ಮೂಡಿಸುವ ಸಕಲ ಪ್ರಯತ್ನವನ್ನು ಮಾಡಲಾಗಿದೆ ಎಂದರು.

 

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕೃಷಿಮೇಳಗಳಿಗೆ ಭೇಟಿ ನೀಡಿ ಪ್ರಯೋಜನ ಪಡೆಯುತ್ತಾ, ಕೃಷಿ ಕ್ಷೇತ್ರದಲ್ಲಾದ ವಿನೂತನ ಆವಿಷ್ಕಾರಗಳ ಮಾಹಿತಿ ಪಡೆದು, ಜೈವಿಕ ರಸಗೊಬ್ಬರಗಳನ್ನು ಬಳಸುತ್ತಾ ಮಿಶ್ರ ಬೆಳೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕು, ಕೃಷಿಯ ಜೊತೆಗೆ ಆಡು, ಕುರಿ, ಕೋಳಿ, ಜೇನು ಹಾಗೂ ಉತ್ತಮ ರಾಸುಗಳ ಜಾನುವಾರುಗಳ ಸಾಕಾಣಿಕೆಯಿಂದ ರೈತರು ಉತ್ತಮ ಬೆಳೆಗಳ ಇಳುವರಿಯೊಂದಿಗೆ ಒಳ್ಳೆಯ ಲಾಭವನ್ನು ಪಡೆಯಬಹುದು ಎಂದು ಕಿವಿಮಾತು ಹೇಳಿದರು.ಕೃಷಿಮೇಳದ ವೇದಿಕೆಯಲ್ಲಿ ಸಾವಯವ ಬೆಲ್ಲದಿಂದ ತಯಾರಿಸಿದ ಹೋಳಿಗೆ ಸ್ಪರ್ಧೆಯಲ್ಲಿ ಪಥಮರಾಗಿ ವಿಜೇತರಾದ ಭಾರತಿ ಚಾನಗಿ, ದ್ವಿತೀಯ ಜಯಶ್ರೀ ಹಡಪದ, ತೃತೀಯ ಗೀತಾ ಹಲಕರಣಿ, ಚತುರ್ಥರಾಗಿ ಆಯ್ಕೆಯಾದ ಸುನಂದಾ ತೇಲಗ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು ಹಾಗೂ ನವರಾತ್ರಿ ಉತ್ಸವ ಸಮೀತಿಯಿಂದ ಲಕ್ಕಣ್ಣ ಸವಸುದ್ದಿಯವರನ್ನು ಸತ್ಕರಿಸಲಾಯಿತು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹಾಲಿಂಗಯ್ಯ ನಂದಗಾಂವಮಠ, ಸುಭಾಸ್ ಲೋಕಣ್ಣವರ್, ಗುರುನಾಥ್ ಗಂಗಣ್ಣವರ, ಹಾಗೂ ನವರಾತ್ರಿ ಉತ್ಸವ ಸಮೀತಿಯ ಸದಸ್ಯರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article