ಹೊಸಪೇಟೆ : ( ವಿಜಯ ನಗರ): ವಿದ್ಯಾರ್ಥಿ ಗಳು ಓದಿ ಪದವಿ ಪಡೆದು, ಯಾವುದಾದರೂ ವಿಷಯದಲ್ಲಿ ಪರಿಣಿತಿ ಪಡೆದು ಉತ್ತಮ ನಾಗರೀಕರಾಗಿ , ಮೊದಲು ನಿಮ್ಮ ಮನೆಯ ಕುಟುಂಬಗಳನ್ನು ಚೆನ್ನಾಗಿ ನೋಡಿಕೊಳ್ಳಿ ನಂತರ ಶಾಲೆ ಹಾಗೂ ಕಾಲೇಜ್ಗೆ , ಊರಿಗೆ, ಮತ್ತು ರಾಜ್ಯಕ್ಕೆ ಹಾಗೂ ದೇಶಕ್ಕೆ ಏನಾದರು ಕೊಡುಗೆಯನ್ನು ನೀಡುವಂತವರಾಗಿ. ಎಂದು ಕನ್ನಡ ಚಲನಚಿತ್ರ ಖ್ಯಾತ ನಟ, ನಿರ್ಮಾಪಕ ” ಅಜೇಯ ರಾವ್” .
ತಾವು ವಿದ್ಯಾಭ್ಯಾಸ ಮಾಡಿದ ನಗರದ ವಿಜಯನಗರ ಮಹಾವಿದ್ಯಾಲಯಕ್ಕೆ ಬೇಟಿ ನೀಡಿ ಈ ಹಿಂದೆ ಕಾಲೇಜು ಓದುತ್ತಿರುವ ಸಂಧರ್ಭದಲ್ಲಿನ ವಿಷಯಗಳನ್ನ ಮೆಲುಕು ಹಾಕಿದರು ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಏನಾದರು ಆಗಿ ಯಾರಿಗೂ ತೊಂದರೆ ಕೊಡಬೇಡಿ, ಯುವಕ ಯುವತಿಯರು ಯಾರು ಹತ್ತಿರ ಕೂಡ ಜಗಳ ಮಾಡಿದೆ ಎಲ್ಲರ ಜೊತೆ ಉತ್ತಮ ಭಾಂದವ್ಯ ಇಟ್ಟು ಕೊಳ್ಳಿ, ಎಲ್ಲರಿಗೂ ಒಳ್ಳೆಯದನ್ನು ಮಾಡಿ ಎಂದು ವಿಧ್ಯಾರ್ಥಿನಿ – ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಾನು ಓದಿದ ಕಾಲೇಜು ನನಗೆ ಬಹಳಷ್ಟು ಉತ್ತಮ ವಿದ್ಯಾಭ್ಯಾಸ ಕೊಡುವುದರ ಜೊತೆಗೆ ಕಾಲೇಜು ನನಗೆ ಶಿಸ್ತುನ್ನು ಕಲಿಸಿ ಕೊಟ್ಟಿದೆ.
ಪ್ರಪಂಚದ ಯಾವುದೇ ದೇಶಕ್ಕೆ ಹೊದರು ಎಲ್ಲಾ ಕ್ಷೇತ್ರಗಳಲ್ಲೂ ವಿಜಯನಗರ ಕಾಲೇಜಿನ ವಿದ್ಯಾರ್ಥಿಗಳು ಸಿಗುತ್ತಾರೆ ಅದು ಹೆಮ್ಮೆಯ ವಿಷಯವಾಗಿದೆ ಎಂದರು.
ಈ ಸಂಧರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎನ್. ಮಲ್ಲಿಕಾರ್ಜುನ, ಕಾಲೇಜು ಪ್ರಾಂಶುಪಾಲ ಡಾ.ಪ್ರಭುಗೌಡ, ಪದವಿ ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ ಗೌಡ, ಹಳೇಯ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷ ಪಿ.ಎನ್. ಶ್ರೀಪಾದ, ಉಪಾಧ್ಯಕ್ಷರು ಗಳಾದ ಕೊರಿಶೆಟ್ಟ ಲಿಂಗಪ್ಪ, ಗೋಗ್ಗಾ ಚೆನ್ನಬಸಪ್ಪ, ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕಾರ್ಯದರ್ಶಿ ಓಪ್ಪತ್ತೆಪ್ಪ, ಮಹಾವೀರ ಜೈನ್, ಕಿರಣ್ ಕುಮಾರ್, ವೀರಭದ್ರ ಸ್ವಾಮಿ, ಸುನೀಲ್ ಮತ್ತಿತರರು ಇದ್ದರು