ಬಳ್ಳಾರಿ ಜುಲೈ 28. ಬಳ್ಳಾರಿಯಿಂದ ತೆಕ್ಕಲಕೋಟೆಗೆ ತೆರಳುವಾಗ ಬೈಕು ಮತ್ತು ಕಾರು ಆಕ್ಸಿಡೆಂಟ್ ಆಗಿ ರೋಡ್ ನಲ್ಲಿ ಕಾಲು ಕಟ್ಟಾಗಿ ಬಿದ್ದಿರುವುದನ್ನು ನೋಡಿ ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪನ ಪುತ್ರ, ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷರಾದ ಎಂ.ಎಸ್.ಸಿದ್ದಪ್ಪ ತಕ್ಷಣನೆ ಕಾರನ್ನು ನಿಲ್ಲಿಸಿ ತೆಕ್ಕಲಕೋಟೆ ನಿವಾಸಿಯಾದ ಈರಣ್ಣ ತಂದೆ ಬುಳ್ಳಪ್ಪ (ವಯಸ್ಸು 30) ಅವರನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳಿಸಿಕೊಡಲಾಯಿತು. ಇದನ್ನು ಕಂಡ ಜನತೆ ಸಿದ್ದಪ್ಪನ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.