ಭಗೀರಥ ಸಮುದಾಯದಿಂದ ಗಣೇಶ ಪೂಜಾರಿಗೆ ಸತ್ಕಾರ

Ravi Talawar
ಭಗೀರಥ ಸಮುದಾಯದಿಂದ ಗಣೇಶ ಪೂಜಾರಿಗೆ ಸತ್ಕಾರ
WhatsApp Group Join Now
Telegram Group Join Now

ರನ್ನ ಬೆಳಗಲಿ: ಅ.6: ಪಟ್ಟಣದ ಪಾದಗಟ್ಟಿಯಲ್ಲಿರುವ ಉಪ್ಪಾರ ಸಮಾಜ ಸೇವಾ ಭವನದಲ್ಲಿ ರವಿವಾರ ದಂದು ಉಪ್ಪಾರ ಸಮಾಜ ಸೇವಾ ಸಂಘ (ರಿ) ರನ್ನ ಬೆಳಗಲಿಯ ಆಶ್ರಯದಲ್ಲಿ ಇತ್ತೀಚಿಗೆ ತಾಲೂಕಿನ ಭಾರತೀಯ ಜನತಾ ಪಕ್ಷದ ಮುಧೋಳ ಗ್ರಾಮೀಣ ಮೋರ್ಚಾ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯದರ್ಶಿ ಯಾಗಿ ಆಯ್ಕೆಗೊಂಡ ಗಣೇಶ ಪೂಜಾರಿ ಅವರಿಗೆ ಸತ್ಕಾರ ಸಮಾರಂಭ ಜರಗಿತು.

ತಾಲೂಕ ಸಮಾಜದ ಮಾಜಿ ಅಧ್ಯಕ್ಷರಾದ ಅಶೋಕ ಸಿದ್ದಾಪುರ ಅವರು ನಮ್ಮ ಸಮಾಜದ ಯುವ ನೇತಾರರು ರಾಜಕೀಯ ಪ್ರತಿಯೊಂದು ಪಕ್ಷದಲ್ಲಿ ಮಹತ್ತರ ಜವಾಬ್ದಾರಿಗಳನ್ನು
ತೆಗೆದುಕೊಳ್ಳುವುದರ ಜೊತೆಗೆ ಸಮಾಜಕ್ಕೆ ಬೆಂಬಲ ನೀಡುತ್ತಾ ಸಮಾಜವನ್ನು ಮುನ್ನಡೆಸುವ ನೆತರರಾಗಿ ಹೊರಹೊಮ್ಮ ಬೇಕೆಂದು ಹಿರಿಯರು ಅನಿಸಿಕೆಯಾಗಿದೆ. ನಮ್ಮ ಸಮಾಜದಲ್ಲಿ ರಾಜಕೀಯವಾಗಿ ನಾವು ಬಹಳ ಹಿಂದಿದ್ದೇವೆ, ಆದ್ದರಿಂದ ಪ್ರತಿಪಕ್ಷಗಳು ನಮ್ಮ ಸಮಾಜ ಯುವಕರನ್ನು ಗುರುತಿಸುವಂತಾಗಲಿ ಜವಾಬ್ದಾರಿನ ಹೊತ್ತಿಕೊಂಡ ತಾವು ಪಕ್ಷಕ್ಕೆ ನಿಷ್ಠರಾಗಿ ಸಮಾಜಕ್ಕೆ ಋಣ ತೀರಿಸುವ ಕೆಲಸವನ್ನು ಮಾಡಬೇಕೆಂದು ತಿಳಿಸಿದರು.

ಈ ಸಮಯದಲ್ಲಿ ಅಧ್ಯಕ್ಷರಾದ ಮುದಕಪ್ಪ ದೋಬಸಿ, ಗೌರವ ಅಧ್ಯಕ್ಷರಾದ ಮಹಾದೇವ ಹಾದಿಮನಿ, ಶ್ರೀ ಸೂರ್ಯವಂಶ ಮಹರ್ಷಿ ಭಗೀರಥ ಸಹಕಾರಿ ಸಂಘದ ಅಧ್ಯಕ್ಷರಾದ ಮಹಾದೇವ
ಜಗದಾಳ,ಉಪಾಧ್ಯಕ್ಷರಾದ ದುಂಡಪ್ಪ ಪೂಜಾರಿ, ಪಿ.ಕೆ.ಪಿ.ಎಸ್ ಮಾಜಿ ಅಧ್ಯಕ್ಷರಾದ ಮುತ್ತಪ್ಪ ಸಿದ್ದಾಪುರ,ಮಾಜಿ ಸೈನಿಕರಾದ ಸಂಗಪ್ಪ ಹಿಪ್ಪಲಕರ,ಪ್ರಥಮ ದರ್ಜೆ ಗುತ್ತಿಗೆದಾರರಾದ ಜಟ್ಟು ಹಿಪ್ಪಲಕರ, ಬಸಪ್ಪ ಧರ್ಮಟ್ಟಿ, ರಮೇಶ್ ಜಮಖಂಡಿ, ವಿಠ್ಠಲ ಬಿರಾಜನವರ, ಶಿವಲಿಂಗ ಹೊನ್ನೂರ, ಲಕ್ಷ್ಮಣ ಹೊಸೂರ, ರಾಮಪ್ಪ ನೀಲನ್ನವರ, ಹನುಮಂತ ಬಿರಾಜನವರ, ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ಹಾಗೂ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

WhatsApp Group Join Now
Telegram Group Join Now
Share This Article