ಅಪಘಾತ ರಹಿತ ಬಸ್ ಚಾಲನೆ : ಬಸವಂತರಾವ ಹುದ್ದಾರ ಅವರಿಗೆ ಬೆಳ್ಳಿ ಪದಕ

Sandeep Malannavar
ಅಪಘಾತ ರಹಿತ ಬಸ್ ಚಾಲನೆ : ಬಸವಂತರಾವ ಹುದ್ದಾರ ಅವರಿಗೆ ಬೆಳ್ಳಿ ಪದಕ
WhatsApp Group Join Now
Telegram Group Join Now
ಬೈಲಹೊಂಗಲ. ಇಲ್ಲಿನ  ಕೆ ಎಸ್ ಆರ್ ಟಿ ಸಿ  ಘಟಕದ ಬಸ್ ಚಾಲಕರಾದ  ಬಸವಂತರಾವ ದಾದಾಸಾಹೇಬ ಹುದ್ದಾರ ಅವರು ಅಪಘಾತ ರಹಿತ ಬಸ್ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಬೆಳ್ಳಿ‌ ಪದಕಕ್ಕೆ ಭಾಜನರಾಗಿದ್ದಾರೆ.
ಬೈಲಹೊಂಗಲ ತಾಲ್ಲೂಕಿನ ಮೂಗಬಸವ ಗ್ರಾಮದ ಬಸವಂತರಾವ ಹುದ್ದಾರ ಕಳೆದ 18 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತಿಚೆಗೆ ಬೆಳಗಾವಿಯಲ್ಲಿ ನಡೆದ ವಾಕರಸಾ 28ನೇ ಸಂಸ್ಥಾಪನಾ ದಿನಾಚರಣೆ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಬೆಳ್ಳಿ ಪದಕ ಪ್ರದಾನ ಮಾಡಿ ಅವರಿಗೆ ಗೌರವಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಾಕರಸಾ ಅಧ್ಯಕ್ಷ ರಾಜು ಕಾಗೆ, ಶಾಸಕರಾದ ಬಾಬಾಸಾಹೇಬ ಪಾಟೀಲ, ಆಸೀಫ್ ಸೇಠ್ ಸೇರಿ ಮತ್ತಿತರರು ಇದ್ದರು.
WhatsApp Group Join Now
Telegram Group Join Now
Share This Article