ಬಳ್ಳಾರಿ. ಜೂ.05: ಗಂಭೀರವಾಗಿ ಗಾಯಗೊಂಡಿದ್ದ ಆಕಳು ಕರುಗೆ ತಡರಾತ್ರಿಯಲ್ಲೇ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡುವ ಮೂಲಕ ಜೈನ್ ಸಮುದಾಯದ ನಿರ್ವಹಣೆಯಲ್ಲಿರುವ ಗೋ ಸೇವಾ ಸಮಿತಿಯ ಪದಾಧಿಕಾರಿಗಳು ಆಕಳು ಕರವಿಗೆ ಚಿಕಿತ್ಸೆ ನೀಡಿ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ, ಇವರ ಈ ಮಾನವೀಯತೆಯನ್ನು ನಗರದ ನಾಗರಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ನಗರದ ಗಣೇಶ್ ಕಾಲೋನಿಯ ಉದ್ಯಾನವನದ ಬಳಿ ಆಕಳು ಕರುವೊಂದು ಯಾವುದೋ ಅಕಸ್ಮಿಕ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿರುವುದನ್ನು ಕಂಡು, ಹಿಂದೂ ಜಗರಣ ವೇದಿಕೆ ಜಿಲ್ಲಾ ಸಂಚಾಲಕ ಶ್ರೀರಾಮ್ ಅವರು ಸೇರಿದಂತೆ ಸ್ಥಳೀಯರು ಇಲ್ಲಿನ ಗೋ ಸೇವಾ ಸಮಿತಿ ಮುಖ್ಯಸ್ಥ ಧೀರಜ್ ಕುಮಾರ್ ಅವರ ನೇತೃತ್ವದ ತಂಡಕ್ಕೆ ಕರೆ ಮಾಡಿದ್ದಾರೆ, ಕೂಡಲೇ ಸ್ಥಳಕ್ಕೆ ತಮ್ಮದೇ ವಾಹನ ಮೂಲಕ ಆಗಮಿಸಿದ ತಂಡದ ಸದಸ್ಯರು ಗಾಯಗೊಂಡ ಕರುವನ್ನು ಸುರಕ್ಷಿತವಾಗಿ ಹಿಡಿದು, ವಾಹನದಲ್ಲಿ ಗೋ ಶಾಲೆಗೆ ಕರೆದೊಯ್ದು, ತಡರಾತ್ರಿಯಲ್ಲಿ ಅಗತ್ಯ ಚಿಕಿತ್ಸೆ ಕಲ್ಪಿಸುವ ಮೂಲಕ ಗೋ ಸೇವೆಯನ್ನು ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ್ ಕುಮಾರ್ ಅವರು ಸಮಸ್ಯೆ ಹೇಳಿಕೊಂಡು ಯಾರೇ ಎಷ್ಟೊತ್ತಿಗೆ ಕರೆ ಮಾಡಿದರೂ ಸ್ಪಂದಿಸುವ ಸ್ವಭಾವ ಇಟ್ಟುಕೊಂಡಿದ್ದು, ಎಲ್ಲರ ಮನೆ ಮಾತಾಗಿದ್ದಾರೆ. ಇವರ ತಂಡವು ಸ್ಥಳಕ್ಕೆ ಆಗಮಿಸಿ ಆಕಳು ಕರುವನ್ನು ಹಿಡಿದು ಸುರಕ್ಷಿತವಾಗಿ ಗೋಶಾಲೆಗೆ ಕಲಿಸುವಲ್ಲಿ ರಾತ್ರಿವೇಳೆ ಶ್ರಮಿಸಿ ಮಾನವೀಯತೆ ಮೆರೆದರು.
ಗೋವುಗಳ ಬಗ್ಗೆ ವಿಶೇಷ ಪ್ರೀತಿ, ಕಾಳಜಿ, ಗೌರವ ಇಟ್ಟುಕೊಂಡಿರುವ ಹಿಂದೂ ಜಾಗರಣವೇದಿಕೆ ಜಿಲ್ಲಾ ಸಂಚಾಲಕ ಶ್ರೀರಾಮ್ ಅವರು ಯಾರೇ ಎಸ್ಟೇ ಸಮಯದಲ್ಲೇ ಕರೆ ಮಾಡಿ ವಿಷಯ ತಿಳಿಸಿದರು ಕೂಡಲೇ ಸ್ಥಳಕ್ಕೆ ಆಗಮಿಸಿ ಗೋವುಗಳನ್ನು ರಕ್ಷಣೆ ಮಾಡುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಗೋ ಸೇವಾ ಸಮಿತಿಯ ಮುಖ್ಯಸ್ಥ ಧೀರಜ್ ಕುಮಾರ್ ಅವರು ಮಾತನಾಡಿ, ಗೋವುಗಳ ಸೇವೆ, ಆರೈಕೆ ಮಾಡುವುದೇ ಬಹುದೊಡ್ಡ ಪುಣ್ಯದ ಕೆಲಸ, ಇದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ, ಕಳೆದ ಸುಮಾರು ವರ್ಷಗಳಿಂದ ನಗರದ ಅಂದ್ರಾಳ ಪ್ರದೇಶದಲ್ಲಿನ ನಮ್ಮ ಗೋಶಾಲೆಯಲ್ಲಿ ನಮ್ಮ ಗೋ ಸೇವಾ ಸಮಿತಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಾನಾ ಕಾರಣಗಳಿಂದ ಗೋವುಗಳು ಅನಾರೋಗ್ಯಕ್ಕೀಡಾದರೆ, ನಾನಾ ಖಾಯಿಲೆಗೆ ತುತ್ತಾದರೆ, ಅಪಘಾತದಲ್ಲಿ ಗಾಯಗೊಂಡ ಕುರಿತು ಮಾಹಿತಿ ತಿಳಿದರೆ, ಅಥವಾ ಕರೆ ಮಾಡಿದರೆ ನಮ್ಮ ತಂಡ ನಾವು ಸ್ಥಳಕ್ಕೆ ಕ್ಷಣಾರ್ಧದಲ್ಲೇ ಸ್ಥಳಕ್ಕೆ ತೆರಳಲಿದ್ದೇವೆ. ರಸ್ತೆಯಲ್ಲಿ ಮಲಗಿದ ಗೋವುಗಳಿಗೆ ಬಣ್ಣದ ಬೆಲ್ಟ್ ಕಟ್ಟುವ ಮೂಲಕ ಎದುರಾಗುವ ಅಪಘಾತಗಳಿಂದ ರಕ್ಷಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಅದರಂತೆ ಬಳ್ಳಾರಿಯ ಗಣೇಶ್ ಕಾಲೋನಿಯಲ್ಲಿ ಆಕಳು ಕರು ಗಂಭೀರ ಗಾಯಗೊಂಡ ಕುರಿತು, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಶ್ರೀರಾಮ್ ಅವರು ಕರೆ ಮಾಡಿ ಮಾಹಿತಿ ತಿಳಿಸಿದರು, ಸುರಕ್ಷಿತವಾಗಿ ಕರುವನ್ನು ಕರೆದೊಯ್ದು ತಡರಾತ್ರಿಯಲ್ಲೇ ಪಶು ವೈದ್ಯರ ನೆರವಿನ ಮೂಲಕ ಅಗತ್ಯ ಚಿಕಿತ್ಸೆ ನೀಡಿದ್ದೇವೆ, ಕರು ಖಂಡಿತ ಗುಣಮುಖವಾಗಲಿದೆ ಎಂದರು. ಗೋ ಸೇವಾ ಸಮಿತಿ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2 Attachments • Scanned by Gmail