ಪ್ರೀತಿ ನಿರಾಕರಿಸಿದ್ದಕ್ಕೆ 2 ತಿಂಗಳ ಹಸುಗೂಸನ್ನು ಕೊಂದ ಅಪ್ರಾಪ್ತೆ

Ravi Talawar
ಪ್ರೀತಿ ನಿರಾಕರಿಸಿದ್ದಕ್ಕೆ 2 ತಿಂಗಳ ಹಸುಗೂಸನ್ನು ಕೊಂದ ಅಪ್ರಾಪ್ತೆ
WhatsApp Group Join Now
Telegram Group Join Now

ಯಾದಗಿರಿ, ಜುಲೈ 08: ಎರಡು ತಿಂಗಳ ಹಸುಗೂಸನ್ನು  ಕೊಲೆ ಮಾಡಿದ ಅಪ್ರಾಪ್ತೆಯನ್ನು ಯಾದಗಿರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ  ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಾಗೇಶ್​, ಚಟ್ಟೆಮ್ಮ ಎಂಬ ದಂಪತಿ ವಾಸವಾಗಿದ್ದಾರೆ. ದಂಪತಿಯ ಮಗು ಮೀನಾಕ್ಷಿ ಮೃತ ಹಸುಗೂಸು. ಕೊಲೆ ಮಾಡಿದ ಅಪ್ರಾಪ್ತೆ ಪಕ್ಕದ ಮನೆಯಲ್ಲೇ ವಾಸವಾಗಿದ್ದಳು.

ಅಪ್ರಾಪ್ತೆ ಮೀನಾಕ್ಷಿಯು ಚಿಕ್ಕಪ್ಪ ನಾಗೇಶ್​ನನ್ನು ಪ್ರೀತಿಸುತ್ತಿದ್ದಳು. ಈ ವಿಚಾರವನ್ನು ಅಪ್ರಾಪ್ತೆ ಆತನಿಗೆ ಹೇಳಿದ್ದಳು. ಆದರೆ, ಮೀನಾಕ್ಷಿಯ ಚಿಕ್ಕಪ್ಪ ಅಪ್ರಾಪ್ತೆಯ ಪ್ರೀತಿಯನ್ನು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಅಪ್ರಾಪ್ತೆ ನಾಗೇಶ್​, ಚಟ್ಟೆಮ್ಮ ದಂಪತಿಯ ಎರಡು ತಿಂಗಳ ಮಗು ಮೀನಾಕ್ಷಿಯನ್ನು ಬಾವಿಯೊಳಗೆ ಹಾಕಿದ್ದಾಳೆ.

ಬಳಿಕ ಮೀನಾಕ್ಷಿಯನ್ನು ಆತನ ಚಿಕ್ಕಪ್ಪನೇ ಕೊಲೆ ಮಾಡಿದ್ದಾನೆಂದು ಬಿಂಬಿಸಲು ಯತ್ನಿಸಿದ್ದಾಳೆ. ಮಗು ಕಾಣದಿದ್ದಾಗ ಪೋಷಕರು ಮಗುವನ್ನು ಹುಡುಕಲು ಆರಂಭಿಸಿದ್ದಾರೆ. ಅವರೊಂದಿಗೆ, ಆರೋಪಿ ಕೂಡ ಮಗುವನ್ನು ಹುಡುಕುವ ನಾಟಕವಾಡಿದ್ದಾಳೆ. ಸ್ವಲ್ಪ ಹೊತ್ತಿನ ಬಳಿಕ ಬಾವಿಯಲ್ಲಿ ನೋಡೋಣ ಎಂದು ಪೋಷಕರಿಗೆ ಹೇಳಿದ್ದಾಳೆ. ಆಗ ಮಗುವಿನ ಪೋಷಕರು ಬಾವಿಯಲ್ಲಿ ನೋಡಿದಾಗ ಮಗುವಿನ ಶವ ಕಂಡಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

WhatsApp Group Join Now
Telegram Group Join Now
Share This Article