ಶ್ರೀ ಸತ್ಯಸಂಧ ತೀರ್ಥರ ಆರಾಧನೆ, ವಿಶೇಷ ಪೂಜೆ

Ravi Talawar
ಶ್ರೀ ಸತ್ಯಸಂಧ ತೀರ್ಥರ ಆರಾಧನೆ, ವಿಶೇಷ ಪೂಜೆ
WhatsApp Group Join Now
Telegram Group Join Now
ಬಳ್ಳಾರಿ: ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಶ್ರೀಮದುತ್ತರಾಧೀಮಠ ಶ್ರೀ ಸತ್ಯಸಂಧ ತೀರ್ಥರ ಮಧ್ಯರಾಧನೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶ್ರೀಮಠದ ಪ್ರಧಾನ ವ್ಯವಸ್ಥಾಪಕರಾದ ಪo.ನವೀನ್ ಆಚಾರ, ಪo.ಪ್ರವೀಣ ಆಚಾರ ಅವರ ನೇತೃತ್ವದಲ್ಲಿ ಬೆಳ್ಳಂ ಬೆಳಿಗ್ಗೆ ಶ್ರೀಮಠದಲ್ಲಿ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು. ಪಂಚವೃಂದಾವನಗಳಿಗೆ ವಿಶೇಷ ಪೂಜೆ, ಅಲಂಕಾರ, ನೈವೇದ್ಯ, ಮಹಾಮಂಗಳಾರತಿ, ಸೇರಿದಂತೆ ವಿವಿಧ ಪೂಜೆಗಳು ನಡೆದವು.
ಶ್ರೀ ಸತ್ಯಸಂಧ ತೀರ್ಥರ ಆರಾಧನೆ ನಿಮಿತ್ತ ಶ್ರೀಮಠದಲ್ಲಿ ಬೆಂಗಳೂರಿನ ಪo. ಆದ್ಯವರದಾಚಾರ್ಯ ಅವರಿಂದ ಜೂ.6 ರಿಂದ 8 ರ ವರೆಗೆ ಸಂಜೆ 6.30 ರಿಂದ 7.30 ರ ವರೆಗೆ ಶ್ರೀಮದ್ ಭಗವದ್ಗೀತಾ ಅಭಿಯಾನದ  12 ಹಾಗೂ 13 ನೇ ಅಧ್ಯಾಯ ಪ್ರವಚನ ನಡೆಯಿತು. ವಿವಿಧ ಭಜನಾ ಮoಡಳಿ ಸದಸ್ಯರಿಂದ ಸಾಮೂಹಿಕ ಭಜನೆ, ಸೇರಿದಂತೆ ನಗರ ಸೇರಿ ನಾನಾ ಕಡೆಯಿಂದ ಆಗಮಿಸಿದ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
WhatsApp Group Join Now
Telegram Group Join Now
Share This Article