ಏನಡಿಎ ಮತ್ತು ಕಾಗೇರಿ ಜಯಭೇರಿ: ಕಿತ್ತೂರಿನಲ್ಲಿ ಬಿಜೆಪಿ ಭರ್ಜರಿ ಸಂಭ್ರಮ ಆಚರಣೆ.

Ravi Talawar
 ಏನಡಿಎ ಮತ್ತು ಕಾಗೇರಿ ಜಯಭೇರಿ: ಕಿತ್ತೂರಿನಲ್ಲಿ ಬಿಜೆಪಿ ಭರ್ಜರಿ ಸಂಭ್ರಮ ಆಚರಣೆ.
WhatsApp Group Join Now
Telegram Group Join Now
ಚ. ಕಿತ್ತೂರು. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ನೇತೃತ್ವದಲ್ಲಿ ಏನ್ ಡಿ ಎ ಒಕ್ಕೂಟ ಅಧಿಕ ಸ್ಥಾನಗಳನ್ನು ಪಡೆದು 3 ನೇ ಭಾರಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆ ಆಗುತ್ತಿರುವ ಮತ್ತು 3 ನೇ ಭಾರಿ ಪ್ರಧಾನಿ ನರೇಂದ್ರ ಮೋದಿಜಿ ಪ್ರಧಾನಿ ಆಗುವದು ಖಚಿತವಾದ ಹಿನ್ನೆಲೆ ಮತ್ತು ದಕ್ಷಿಣ ಕನ್ನಡ (ಕೆನರಾ ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಭರ್ಜರಿ ಜಯ ಗಳಿಸಿದ ಪ್ರಯುಕ್ತ  ಮಾಜಿ ಶಾಸಕ ಮತ್ತು ಬಿಡಿಸಿಸಿ ಬ್ಯಾಂಕ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ ಚನ್ನಮ್ಮನ  ಕಿತ್ತೂರು ಪಟ್ಟಣದಲ್ಲಿ ಗುಲಾಲ, ಪಟ್ಟಾಕಿ ಸಿಡಿಸಿ ಸಂಭ್ರಮ ಆಚರಣೆ ಮಾಡಿ ಚನ್ನಮ್ಮನ ವೃತಕ್ಕೆ ಆಗಮಿಸಿ ತಾಯಿ ಚನ್ನಮ ಪುತ್ತಳಿಯ ಮುಂದೆ ಸಂಭ್ರಮ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ದೇಶಕ್ಕೆ 3 ಭಾರಿ ಮೋದಿಜಿ ಪ್ರಧಾನಿ ಆಗಿ  ಅಧಿಕಾರ ವಹಿಸಿಕೊಳ್ಳುವದು ಸಂತಸ ತಂದಿದ್ದು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ  ಲಕ್ಷಾಂತರ ಮತಗಳಿಂದ ಜನ  ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ ಅವರಿಗೆ ನಾವು ಅಭಾರಿ ಎಂದರು.
    ಈ  ಸಂದರ್ಭದಲ್ಲಿ  ಶ್ರೀಮತಿ ಲಕ್ಷ್ಮೀ ಇನಾಮದರ, ಕಿತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಬಸವರಾಜ ಪರವಣ್ಣವರ, ಬಸನಗೌಡ ಸಿದ್ರಾಮನಿ, ಭಾಗದ ಬಿಜೆಪಿ ಮುಖಂಡರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article