ಹನುಮಾನ ಓಕಳಿ ನಿಮಿತ್ಯ ವಿವಿಧ ಕಾರ್ಯಕ್ರಮಗಳು

Ravi Talawar
ಹನುಮಾನ ಓಕಳಿ ನಿಮಿತ್ಯ ವಿವಿಧ ಕಾರ್ಯಕ್ರಮಗಳು
WhatsApp Group Join Now
Telegram Group Join Now
ಮುಗಳಖೋಡ,29: ಪಟ್ಟಣದ ಆದಿ ದೈವಿ ಪುರುಷ ಹನುಮಾನ ಓಕಳಿ ನಿಮಿತ್ಯ ಶನಿವಾರ 1 ರಿಂದ ಮಂಗಳವಾರ 4 ರ ವರೆಗೆ  ಬೆಳಿಗ್ಗೆ ಶ್ರೀ ಹನುಮಾನ ಮೂರ್ತಿಗೆ ಪಂಚಾಮೃತ ಅಭಿಷೇಕ ಎಲಿ ಪೂಜೆ ಕಾರ್ಯಕ್ರಮ ನೇರವೇರುವುದು.
ದಿನಾಂಕ 1 ರಂದು ಸಾಯಂಕಾಲ 4 ಗಂಟೆಗೆ ಕೊಂಡ ಪೂಜೆ ರವಿವಾರ 2 ರಂದು 4 ಗಂಟೆಗೆ ನಡು ಓಕಳಿ ಸೋಮವಾರ 3 ರಂದು ಮದ್ಯಾಹ್ನ 1 ಕುಂಟೆಯಿಂದ ಅನ್ನ ದಾಸೋಹ ನಂತರ  ವಿಠ್ಠಲ ಮಂದಿರದಿಂದ ಶ್ರೀ ಸಿದ್ದರಾಮೇಶ್ವರ ವಾಹನ ಮಾಲೀಕರು, ಚಾಲಕರ, ಹಾಗೂ ಅಪ್ಪಾಜಿ ಹಮಾಲರ ಸಂಘದ ಸಹಯೋಗದಲ್ಲಿ ವಿಠ್ಠಲ ಮಂದಿರದಿಂದ ಹನುಮಾನ ಮಂದಿರ ವರೆಗೆ ಸಕಲ ವಾದ್ಯ ವೃಂದದೊಂದಿಗೆ ಆಂಜನೇಯ ಭಾವಚಿತ್ರದ ಭವ್ಯ ಮೆರವಣಿಗೆ.
ಸಾಯಂಕಾಲ 5 ಗಂಟೆಗೆ ಪಲ್ಲಕ್ಕಿ ಉತ್ಸವ ಕಡೆ ಓಕಳಿ, ಮಂಗಳವಾರ 4 ಸಾಯಂಕಾಲ 4 ಗಂಟೆಗೆ ಪೈಲ್ವಾನರುಗಳಾದ ಮುತ್ತಪ್ಪ ಬಾಳೋಜಿ, ಭೀಮಪ್ಪ ತಳವಾರ, ಪರಪ್ಪ ಖೆತಗೌಡರ, ಹಾಲಪ್ಪ ಶೇಗುಣಸಿ ವಸ್ತಾದರ ನಿರ್ಣಾಯಕತ್ವದಲ್ಲಿ ಜಂಗಿ ನಿಕಾಲಿ ಕುಸ್ತಿಗಳು ಜರಗುವವು,ಇದೆ ದಿನ ಮದ್ಯಾಹ್ನ 2.30 ಗಂಟೆಯ ಪೂರ್ವದಲ್ಲಿ ಪೈಲ್ವಾನರು ವ್ಯವಸ್ಥಾಪಕರಲ್ಲಿ ಹೆಸರು ನೊಂದಾಯಿಸಿ ಎಂದು ಭಕ್ತ ಸಮಿತಿ ತಿಳಿಸಿದೆ.
WhatsApp Group Join Now
Telegram Group Join Now
Share This Article