ಮತಯಂತ್ರಗಳನ್ನು ನೆಲಕ್ಕೆ ಬಿಸಾಡಿ ಛಿದ್ರ ಮಾಡಿದ್ದ ವೈಎಸ್‌ಆರ್‌ಸಿಪಿ ಶಾಸಕ: ಕ್ರಮಕ್ಕೆ ಸೂಚಿಸಿದ ಚುನಾವಣಾ ಆಯೋಗ

Ravi Talawar
ಮತಯಂತ್ರಗಳನ್ನು ನೆಲಕ್ಕೆ ಬಿಸಾಡಿ ಛಿದ್ರ ಮಾಡಿದ್ದ ವೈಎಸ್‌ಆರ್‌ಸಿಪಿ ಶಾಸಕ: ಕ್ರಮಕ್ಕೆ ಸೂಚಿಸಿದ ಚುನಾವಣಾ ಆಯೋಗ
WhatsApp Group Join Now
Telegram Group Join Now

ಅಮರಾವತಿ,22: ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್‌ಸಿಪಿ ಹಾಲಿ ಶಾಸಕರೊಬ್ಬರು ಮಾರ್ಚ್​ 13 ರಂದು ನಡೆದ ಚುನಾವಣೆಯ ವೇಳೆ 7 ಮತಯಂತ್ರಗಳನ್ನು ನೆಲಕ್ಕೆ ಬಿಸಾಡಿ ಛಿದ್ರ ಮಾಡಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ರಾಜ್ಯ ಪೊಲೀಸ್​ ಮುಖ್ಯಸ್ಥರಿಗೆ ಸೂಚಿಸಿದೆ.

ವೈಎಸ್‌ಆರ್‌ಸಿಪಿ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ಈ ಕೃತ್ಯ ನಡೆಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚುನಾವಣೆಗೆ ಅಡ್ಡಿ ಮತ್ತು ಕಾನೂನು ಮೀರಿದ ಆರೋಪದ ಮೇಲೆ ಅವರ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಿ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗ ಹೇಳಿದೆ.

 ಮಾಚರ್ಲಾ ಕ್ಷೇತ್ರದ ಹಾಲಿ ಮತ್ತು ಮೂರು ಬಾರಿ ಶಾಸಕರಾಗಿರುವ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ರೆಂಟಚಿಂತಲ ಮಂಡಲದ ಪಲ್ವೊಯ್ಗೇಟ್ ಮತಗಟ್ಟೆ ಕೇಂದ್ರದ ಬೂತ್ 202 ರಲ್ಲಿ ನೇರವಾಗಿ ಬಂದು ವಿವಿ-ಪ್ಯಾಟ್​ ಯಂತ್ರವನ್ನು ಎತ್ತಿ ನೆಲಕ್ಕೆ ಕುಕ್ಕಿ ಛಿದ್ರ ಮಾಡಿದ್ದಾರೆ. ಪೊಲೀಸರು ಮತ್ತು ಬೂತ್​ ಚುನಾವಣಾಧಿಕಾರಿಗಳ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.

WhatsApp Group Join Now
Telegram Group Join Now
Share This Article