ಸಂಸದನಾದ ತಕ್ಷಣ  700 ಮದರಸಾಗಳನ್ನು ತೆರೆಯುತ್ತೇನೆ: ಬದ್ರುದ್ದೀನ್ ಅಜ್ಮಲ್

Ravi Talawar
ಸಂಸದನಾದ ತಕ್ಷಣ  700 ಮದರಸಾಗಳನ್ನು ತೆರೆಯುತ್ತೇನೆ:  ಬದ್ರುದ್ದೀನ್ ಅಜ್ಮಲ್
WhatsApp Group Join Now
Telegram Group Join Now

ನವದೆಹಲಿ,ಏಪ್ರಿಲ್​ 22:ನಾನು ಸಂಸದನಾದ ತಕ್ಷಣ  700 ಮದರಸಾಗಳನ್ನು ತೆರೆಯುತ್ತೇನೆ ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಹೇಳಿಕೆ ನೀಡಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸವಾಲೆಸೆದ ಬದ್ರುದ್ದೀನ್, ನಾವು ಅಸ್ಸಾಂನ ಕರೀಂಗಂಜ್ ಮತ್ತು ನಾಂಗಾಂವ್​ ಎಐಯುಡಿಎಫ್​ ಸಂಸದರೊಂದಿಗೆ 70 ಹೊಸ ಮದರಸಾಗಳನ್ನು ತೆರೆಯುತ್ತೇವೆ ಇದನ್ನು ನಿಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.

ಅಸ್ಸಾಂನ 14 ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ ಏಪ್ರಿಲ್ 19 ರಂದು ಐದು ಸ್ಥಾನಗಳಿಗೆ ಮತದಾನ ನಡೆದಿದೆ. ಮುಂದಿನ ಎರಡು ಹಂತಗಳಲ್ಲಿ ಉಳಿದ 9 ಸ್ಥಾನಗಳಿಗೆ ಮತದಾನ ನಡೆಯಲಿದೆ. ಉಳಿದ ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7 ರಂದು ಮತದಾನ ನಡೆಯಲಿದೆ.

ಇಲ್ಲಿ ಭಾರತ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಬದ್ರುದ್ದೀನ್ ಅಜ್ಮಲ್ ಗುರಿಯಾಗಿಸಿದ್ದಾರೆ. ಅವರು ಕಾಂಗ್ರೆಸ್ ನಾಯಕ ಪ್ರದ್ಯುತ್ ಬೋರ್ಡೊಲೊಯ್ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದರು ಮತ್ತು ಅವರನ್ನು ಸುಳ್ಳುಗಾರ ಎಂದು ಕರೆದಿದ್ದಾರೆ.

ಪ್ರದ್ಯುತ್​ ಅನೇಕ ಜನರಿಗೆ ಕೆಲಸ ಕೊಟ್ಟರು ಎಂದು ಅವರು ಹೇಳುತ್ತಾರೆ, ಆದರೆ ಇಲ್ಲಿಯವರೆಗೆ ಯಾವುದೇ ಮುಸಲ್ಮಾನರು ತನಗೆ ಒಂದೇ ಕೆಲಸ ಸಿಕ್ಕಿದೆ ಎಂದು ಒಪ್ಪಿಕೊಂಡಿಲ್ಲ ಎಂದಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ರಾಜ್ಯದ ಯುವಕರಿಗೆ ಉದ್ಯೋಗ ನೀಡುವಲ್ಲಿ ಅವರು ವಿಫಲರಾಗಿದ್ದಾರೆ. ಕಳೆದ ವರ್ಷ, ಅಸ್ಸಾಂನ ಶಾಲಾ ಶಿಕ್ಷಣ ಇಲಾಖೆಯು 13 ಡಿಸೆಂಬರ್ 2023 ರಂದು ರಾಜ್ಯದಲ್ಲಿ 1281 ಮದರಸಾ ಸಂಸ್ಥೆಗಳನ್ನು ಸಾಮಾನ್ಯ ಶಾಲೆಗಳಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿತ್ತು. ಪ್ರೌಢ ಶಿಕ್ಷಣ ಮಂಡಳಿಯು ಸರ್ಕಾರಿ ಮದರಸಾಗಳನ್ನು ಸಾಂಪ್ರದಾಯಿಕ ತರಗತಿಗಳಾಗಿ ಪರಿವರ್ತಿಸುವ ಉಸ್ತುವಾರಿ ವಹಿಸಿಕೊಂಡಿದೆ.

WhatsApp Group Join Now
Telegram Group Join Now
Share This Article