ಮೋದಿಗೆಯಿಂದ ಮಾತ್ರ ದೇಶದ ಅಭಿವೃಧ್ದಿ: ಬಿಜೆಪಿ ಅಭ್ಯರ್ಥಿ ಗದ್ದಿಗೌಡರ

Ravi Talawar
ಮೋದಿಗೆಯಿಂದ ಮಾತ್ರ ದೇಶದ ಅಭಿವೃಧ್ದಿ: ಬಿಜೆಪಿ ಅಭ್ಯರ್ಥಿ ಗದ್ದಿಗೌಡರ
WhatsApp Group Join Now
Telegram Group Join Now

ಬಾಗಲಕೋಟೆ,ಏಪ್ರಿಲ್16:: ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಸರ್ಕಾರ ಕ್ಕೂ ತುಂಬಾನೆ ವ್ಯತ್ಯಾಸವಿದೆ, ೭೫ ವರ್ಷ ಮಾಡದ ಅಭಿವೃದ್ಧಿ ಕಾರ್ಯವನ್ನು ಮೋದಿಯವರು ಕಳೆದ ೧೦ ವರ್ಷಗಳಲ್ಲಿ ಅಭಿವೃದ್ಧಿ ಮಾಡಿದ್ದು, ದೇಶದ ಅಭಿವೃದ್ಧಿ ಮೋದಿಯಿಂದ ಮಾತ್ರ
ಸಾದ್ಯ ಎಂದು ಹೇಳಿದರು.

ಅವರು ಮಂಗಳವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಭಾಗವಹಸಿ ಮತಯಾಚನೆ ಮಾಡಿ ಮಾತನಾಡಿದರು,

ಭಾರತ ಇಂದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿಶ್ವದಲ್ಲೆ ಗುರುತಿಸಿಕೊಂಡಿದೆ, ಸ್ವಾತಂತ್ರ್ಯ ನಂತರ ದೇಶದಲ್ಲಿ ಅಭಿವೃದ್ಧಿ ಪರ್ವ ಪ್ರಾರಭವಾಗಿದ್ದು ಬಿಜಿಪಿ ಸರ್ಕಾರ ಬಂದಮೇಲೆ, ಅಟಲ್ ಬಿಹಾರಿ ವಾಜಪೇಯಿಯರವರ ನಂತರ ಪ್ರಧಾನಿ ಮೋದಿಯವರು ಸಾಕಷ್ಟು ಅಬಿವೃದ್ಧಿಯ ಕೆಲಸಗಳ ಮೂಲಕ ವಿಶ್ವವೆ ಭಾರತವನ್ನು ಗುರುತಿಸುತ್ತಿದೆ, ಭಾರತದ ಉಜ್ವಲ ಭವಿಷ್ಯಕ್ಕಾಗಿ ಬಿಜೆಪಿ ಮತ ನೀಡಿ ಎಂದರು.
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮನೆ ಮನೆಗೆ ತೆರಳಿ ಮೋದಿ ಸರಕಾರ ಅಬಿವೃದ್ಧಿ ಪರ ಯೋಜನೆಗಳನ್ನು ಹಾಗೂ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ತಿಳಿಸಿ ಮತ ಯಾಚನೆ  ಮಾಡಿದರು.

ನಗರಸಭೆ ಸದಸ್ಯರಾದ ಶ್ರೀನಾಥ ಸಜ್ಜನ, ರಮೇಶ ಕೋಟಿ, ಸಂಗಪ್ಪ ಹಾದಿಮನಿ, ಕಾಂತು ಪತ್ತಾರ, ತಾನಾಜಿ ಜಮಖಂಡಿ, ಮಹಾವೀರ
ಹೊನ್ಯಾಳ,ಮಲ್ಲು ಶಹಾಪುರ,ನಿಲಪ್ಪ ಕಲ್ಮಠ, ಗುಂಡುರಾವ ಶಿಂಧೆ,ಅಶೋಕ ಪವಾರ,ರಾಜು ಮೊರೆ,ರಂಗನಾಥ ಜವಳಿ, ರವಿ
ಹನಮಶೆಟ್ಟಿ, ಯಲ್ಲಪ್ಪ ಅಂಬಿಗೇರ ಸೇರಿದಂತೆ ಬಿಜೆಪಿ ನಗರಸಭೆ ಸದಸ್ಯರು,ಬಿಜೆಪಿ ಪದಾಧಿಕಾರಿಗಳು.ಮುಖಂಡರುಗಳು,ಕಾರ್ಯಕರ್ತರು
ಭಾಗವಹಿಸಿದ್ದರು.

 

 

WhatsApp Group Join Now
Telegram Group Join Now
Share This Article