ಬೆಳಗಾವಿ,ಎ,೧೩ : ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲಯ ಬೆಳಗಾವಿ ಎನ್.ಎಸ್.ಎಸ್. ಘಟಕ -೨೬ ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷ ವಾರ್ಷಿಕ ಶಿಬಿರವನ್ನು ದಿನಾಂಕ: ೧೦/೦೩/೨೦೨೬ ರಿಂದ ಅಗಸಗಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಅಂಗವಾಗಿ ಪ್ರತಿ ದಿನ ಸ್ವಚ್ಛತಾ ಕಾರ್ಯಕ್ರಮ ಹಾಗೂ ಧ್ವಜಾರೋಹಣ ಮತ್ತು ವಿಭಿನ್ನ ಚಟುವಟಿಕೆಗಳು, ಉಚಿತ ನೇತ್ರ ತಪಾಸಣಾ ಶಿಬಿರ, ಮಧುಮೇಹ ತಪಾಸಣಾ ಶಿಬಿರ, ಮುಟ್ಟಿನ ನೈರ್ಮಲ್ಯದ ಬಗ್ಗೆ ಅರಿವು ಕಾರ್ಯಕ್ರಮ ಮತ್ತು, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ಬಗೆಗಿನ ಕರಪತ್ರ ಹಂಚಿಕೆ, ಗ್ರಾಮಸ್ಥರಿಗಾಗಿ ಪ್ರಥಮ ಚಿಕಿತ್ಸೆ ಮತ್ತು ಹೃದಯ ರಕ್ತನಾಳದ ಪುನ:ರುಜ್ಜೀವನ ತರಬೇತಿ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಙತಿಹಾಸಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ಮತ್ತು ಪೌಷ್ಠಿಕಾಂಶದ ಮೌಲ್ಯಮಾಪನ ಮತ್ತು ಮಕ್ಕಳ ಬೆಳವಣಿಗೆಯ ಪರಿಶೀಲನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿ ದಿನ ಸಂಜೆ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರಿಗಾಗಿ ಕ್ರೀಡೆ ರಂಗೋಲಿ, ರಸಪ್ರಶ್ನೆ, ಪ್ರಬಂಧ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲಯ ಪ್ರಾಚಾರ್ಯರಾದ ಪ್ರೊ (ಡಾ).ವೀರೇಶಕುಮಾರ ನಂದಗಾವ, ಸಹ ಪ್ರಾಧ್ಯಾಪಕರಾದ ಡಾ.ಗುರುರಾಜ ಉಡಪಿ, ಶ್ರೀ. ಸಂಜೀವ ಬಡ್ಲಿ ಸಂಯೋಜನಾಧಿಕಾರಿಗಳು, ಶ್ರೀ ಅಮೃತ ಮುದ್ದಣ್ಣವರ ಗ್ರಾಮ ಪಂಚಾಯತ ಅಧ್ಯಕ್ಷರು, ಶ್ರೀ ಗುಂಡು ಕುರೇನ್ನವರ, ಗ್ರಾ.ಪ.ಸದಸ್ಯರು, ಶ್ರೀ ಶಿವಾನಂದ ಕ ಪಾಟೀಲ, ಎಸ್ಡಿಎಂಸಿ, ಅಧ್ಯಕ್ಷರು, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀ ಪಿ.ಆರ್.ಚವಾಣ, ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾದ ಶ್ರೀ ಪಿ.ಆರ್.ಚವಾಣ ಶ್ರೀಮತಿ ಮಾಲತಿ ಕಾಂಬಳೆ, ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಊರಿನ ನಾಗರಿಕರು ಶಿಬಿರದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


