ರಾಯಬಾಗ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ತಾಲೂಕಿನ ಮೊರಬ ಗ್ರಾಮದ ಎಸ್.ಆರ್.ಬಾನೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಲ್ಪನಾ ಕಪ್ಪಲಗುದ್ದಿ (ಶೇ.೯೮) ಇವಳನ್ನು ಸಂಸ್ಥೆ ಅಧ್ಯಕ್ಷ ಸಂಜೀವಕುಮಾರ ಬಾನೆಸರಕಾರ ಅವರು ಶನಿವಾರ ವಿದ್ಯಾರ್ಥಿನಿಯ ಸ್ವಗೃಹದಲ್ಲಿ ಸತ್ಕರಿಸಿ, ಸಿಹಿ ಹಂಚಿದರು. ಪ್ರಾಚಾರ್ಯ ರುದ್ರೇಶ ಅಸೋದೆ, ಸುಭಾಷ ಕಾಂಬಳೆ, ಮಾಯಪ್ಪ ಕಪ್ಪಲಗುದ್ದಿ, ಮಾಲಾಬಾಯಿ ಕಪ್ಪಲಗುದ್ದಿ, ವಿಜಯ ಕಾಂಬಳೆ, ಕರೆಪ್ಪ ಸಂತಿವೂರ, ಮಲ್ಲಪ್ಪ ಸಂತಿವೂರ, ಕಲ್ಲಪ್ಪ ಮುಂಜೆ ಸೇರಿ ಅನೇಕರು ಇದ್ದರು.


