ರಾಯಬಾಗ,ಎ,೧೧: ಪಟ್ಟಣದ ಝೇಂಡಾ ಕಟ್ಟೆ ಹತ್ತಿರ ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಶನಿವಾರ ಆಚರಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ಕೋಟಿವಾಲೆ, ವಿದ್ಯಾಧರ ಕುಲಗುಡೆ, ನಾರಾಯಣ ಮೇತ್ರಿ, ಹರೀಶ ಕುಲಗುಡೆ, ಗೋವಿಂದ ಕುಲಗುಡೆ, ಮಹೇಶ ಹೊಸಮನಿ, ಅಜ್ಜಪ್ಪ ಕುಲಗುಡೆ, ಅಶೋಕ ಮೇತ್ರಿ, ಮಹಾಂತಪ್ಪ ಹಳ್ಳದಮನಿ, ಆನಂದ ಹೊಸಮನಿ, ಬಾಳು ಕಳಸೆ ಸೇರಿ ಅನೇಕರು ಇದ್ದರು.


