ಈ ಬಾರಿ ಯೂರಿಯಾ ಖರೀದಿಗೆ ಆಧಾರ್ ಎಫ್ಐಡಿ ಕಡ್ಡಾಯ: ಸೋಮಸುಂದರ್

Pratibha Boi
ಈ ಬಾರಿ ಯೂರಿಯಾ ಖರೀದಿಗೆ ಆಧಾರ್ ಎಫ್ಐಡಿ ಕಡ್ಡಾಯ: ಸೋಮಸುಂದರ್
WhatsApp Group Join Now
Telegram Group Join Now
ಬಳ್ಳಾರಿ, ಏ.10: ಈ ಬಾರಿ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರನ್ನು ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕಲು. ವಿತರಣೆಯನ್ನು ವ್ಯವಸ್ಥಿತಗೊಳಿಸಲು ಕೃಷಿ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.
ಈ ನಿಟ್ಟಿನಲ್ಲಿ ನಿನ್ನೆ ಸಂಜೆ ನಗರದ ಬಿಡಿಎಎ ಸಭಾಂಗಣದಲ್ಲಿ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಸಭೆಯನ್ನು ಕೃಷಿ ಇಲಾಖೆ ಹಮ್ಮಿಕೊಂಡಿತ್ತು.
ಸಭೆಯಲ್ಲಿ ಮಾತನಾಡಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ್ ಕೆ.ಎಂ. ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರ ಖರೀದಿಸುವಾಗ ಆಧಾರ್ ಕಾರ್ಡ್ ಅಥವಾ ರೈತ ಗುರುತಿನ ಸಂಖ್ಯೆ (ಎಫ್ ಐ ಡಿ) ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಹೇಳಿದ್ದಾರೆ.
2026-27ನೇ ಸಾಲಿನಿಂದ ರಸಗೊಬ್ಬರ ಮಾರಾಟ ಪ್ರಕ್ರಿಯೆಯ ಮೇಲೆ ನಿಗಾ ಇರಿಸಲು ಇಲಾಖೆಯು ವಿಶೇಷ ಆಪ್ ಬಿಡುಗಡೆ ಮಾಡಿದೆ. ಚಿಲ್ಲರೆ ಗೊಬ್ಬರ ಮಾರಾಟಗಾರರು ಇನ್ನು ಮುಂದೆ ಈ ಆಪ್ ಮೂಲಕವೇ ರೈತರ ಆಧಾರ್ ಅಥವಾ ಎಫ್ ಐ ಡಿ ಸಂಖ್ಯೆಯನ್ನು ದಾಖಲಿಸಿ ಗೊಬ್ಬರ ವಿತರಿಸಬೇಕು. ಇದರಿಂದ ರಸಗೊಬ್ಬರ ದುರ್ಬಳಕೆಯಾಗುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.
ಸಭೆಯಲ್ಲಿ ಕೃಷಿ ಇಲಾಖೆಯ ಎಸ್. ಎನ್. ಮಂಜುನಾಥ, ವಿಚಕ್ಷಣ ವಿಭಾಗದ ಜಂಟಿ ನಿರ್ದೇಶಕ ಎಸ್.ಶಿವಕುಮಾರ್, ಉಪ ನಿರ್ದೇಶಕ ಮೃತ್ಯುಂಜಯ,
ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ತಿಮ್ಮನಗೌಡ ಸಿದ್ದಮ್ಮನಹಳ್ಳಿ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪಾಲಯ್ಯ, ವಿಜ್ಞಾನಿ ಮಂಜುನಾಥ, ವಿತರಕರ ಸಂಘದ ಕಾರ್ಯದರ್ಶಿ ಶ್ರೀನಿವಾಸರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article