‘ ವರ್ಷದ ಆದರ್ಶ ಮಹಿಳೆ’ ಡಾ, ಸ್ವಾತಿ ವೈದ್ಯ  ಅವರಿಗೆ  ಸನ್ಮಾನ.

MK HasiruKranti
‘ ವರ್ಷದ ಆದರ್ಶ ಮಹಿಳೆ’ ಡಾ, ಸ್ವಾತಿ ವೈದ್ಯ  ಅವರಿಗೆ  ಸನ್ಮಾನ.
WhatsApp Group Join Now
Telegram Group Join Now
ಘಟಪ್ರಭಾ. ವಿಜಯ ಕರ್ನಾಟಕ, ಡೆಕ್ಕನ್ ಹೆರಾಲ್ಡ್ ಬೆಂಗಳೂರು ಮಿರರ್ ಪತ್ರಿಕಾ ಸಮೂಹದ ಈ ವರ್ಷದ  ಆದರ್ಶ ಮಹಿಳಾ ಸಾಧಕಿ  ಪ್ರಶಸ್ತಿಗೆ ಭಾಜನರಾದ ಘಟಪ್ರಭಾ ಕೆ ಎಚ್ ಆಯ್ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಸ್ವಾತಿ ಘನಶ್ಯಾಮ ವೈದ್ಯ
ಅವರಿಗೆ ಶನಿವಾರ ದಿನಾಂಕ 02-04-2026 ರಂದು ಕೆ ಎಚ್ ಆಯ್ ಸಾಂಸ್ಕೃತಿಕ ಭವನದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ
 ಘಟಪ್ರಭಾದ ವಿವಿಧ ರಂಗಗಳಲ್ಲಿಯ ಪ್ರಮುಖರು ಆತ್ಮೀಯವಾಗಿ  ಸನ್ಮಾನಿಸಲಾಯಿತು.
      ಈ ಸಂದರ್ಭದಲ್ಲಿ    ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ಶಕುಂತಲಾ ಮತ್ತು ಶ್ರೀಕಾಂತ ಮಹಾಜನ ದಂಪತಿಗಳು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ವಂದನಾ ಮತ್ತು ರಾಮ ಕತ್ತಿ ದಂಪತಿಗಳು, ಮಲ್ಲಿಕಾರ್ಜುನ ಕಾರ್ತಿಕ ಸೇವಾ ಸಮಿತಿ, ಕೆ ಎಚ್ ಆಯ್ ಸಿಬ್ಬಂದಿಗಳು ಘಟಪ್ರಭಾ ವೈದ್ಯಕೀಯ ಸಂಘದ ಸದಸ್ಯರು, ಸೇರಿದಂತೆ ಹಲವಾರು ಗಣ್ಯರು ಸತ್ಕಾರ ಮಾಡಿದರು. ಮಾಜಿ ಸಚಿವ ಆರ್ ಎಮ್ ಪಾಟೀಲ, ರಾಮಣ್ಣ ಹುಕ್ಕೇರಿ,  ಡಾ ವಿಲಾಸ ನಾಯಿಕವಾಡಿ ಸುರೇಶ್ ಪಾಟೀಲ ಸೇರಿದಂತೆ ಹಲವಾರು ಗಣ್ಯರು ಮಾತನಾಡಿದರು, ಬಸವರಾಜ ಹಟ್ಟಿಗೌಡರ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸಾನಿಧ್ಯವನ್ನು ಗುಬ್ಬಲಗುಡ್ಡ  ಶ್ರೀ ಶ್ರೀ ಕೆಂಪಯ್ಯ ಸ್ವಾಮಿಗಳ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಘಟಪ್ರಭಾ ಹೊಸಮಠದ   ಶ್ರೀ  ವಿರೂಪಾಕ್ಷ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಗುರುಬಸಯ್ಯಾ ಕರ್ಪೂರಮಠ, ಸುಭಾಷ್ ದಡ್ಡೀಕರ,  ಸುಭಾಷ್ ಗಾಯಕವಾಡ ,ಭೂಪಾಲ್ ಖೆಮಲಾಪುರೆ, ರಾಜು ಬಬಲಾದಿ, ಮಲ್ಲಿಕಾರ್ಜುನ ಗೌರಾಣಿ,ನಾಗರಾಜ್ ಹುಡೇದಾರ, ಬಸವರಾಜ ಹೊಸೂರ, ಪ್ರಕಾಶ  ಗಾಯಕವಾಡ,  ಕೆ ಎಚ್ ಆಯ್ ಸಿಬ್ಬಂದಿ ಮತ್ತು ಹಿರಿಯ ನಾಗರೀಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article