ಪೌರಕಾರ್ಮಿಕರಿಗೆ ರನ್ನ ಬೆಳಗಲಿ ಹಿರಿಯರಿಂದ ಗೌರವದ ಸತ್ಕಾರ

Ravi Talawar
ಪೌರಕಾರ್ಮಿಕರಿಗೆ ರನ್ನ ಬೆಳಗಲಿ ಹಿರಿಯರಿಂದ ಗೌರವದ ಸತ್ಕಾರ
WhatsApp Group Join Now
Telegram Group Join Now

ರನ್ನ ಬೆಳಗಲಿ: ಏ.15: ರನ್ನ ಬೆಳಗಲಿಯ ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ಮತ್ತು ಶ್ರೀ ಬಂದ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವವು ನಿರಂತರವಾಗಿ ಎಂಟು ದಿನಗಳ ಕಾಲ ನಡೆದು ಬಂದಿತು.

ಈ ಒಂದು ಸಮಯದಲ್ಲಿ ಲಕ್ಷಾಂತರ ಜನರು ಜಾತ್ರಾ ಮಹೋತ್ಸವ ಮತ್ತು ಕಾರ್ತಿಕೋತ್ಸವದಲ್ಲಿ ಭಾಗಿಯಾಗಿದ್ದರು, ಸಾವಿರಾರು ಸಾವಿರಾರು ಸಂಖ್ಯೆಯಲ್ಲಿ ನಿರಂತರ ಐದು ದಿನಗಳ ಕಾಲ ಬಂದ ಲಕ್ಷ್ಮೀ ದೇವಿಗೆ ದಂಡೋತ ನಮಸ್ಕಾರ ಹಾಕಿದ ಭಕ್ತ ವೃಂದದ ಬಿಟ್ಟು ಹೋದ ಬಟ್ಟೆಗಳ ರಾಶಿಗಳನ್ನು ತಕ್ಷಣವೇ ಸ್ವಚ್ಛಗೊಳಿಸಿ, ಊರಿನ ಪ್ರಮುಖ ಬೀದಿಗಳಲ್ಲಿ ಕಸದ ರಾಶಿ ಶೇಖರಣೆ ಆಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಅತಿ ಲಘು ಬೆಗೇನೆ ಸ್ವಚ್ಛ,

ಸ್ವಚ್ಛಗೊಳಿಸುವ ಕ್ರಮದಲ್ಲಿ ಹಗಲಿರುಳು ನಿರಂತರವಾಗಿ ಕಾರ್ಯೋನ್ಮುಖರಾಗಿ ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಹರಡದಂತೆ ಪಟ್ಟಣ ಪಂಚಾಯಿತಿಯ ಆಡಳಿತ ಅಧಿಕಾರಿ ವರ್ಗ ನೀಡಿದ ಸೊಳ್ಳೆ ನಿಯಂತ್ರಣದ ಔಷಧ ಸಿಂಪಡಣೆ, ಪಟ್ಟಣದ ಯಾವುದೇ ಬೀದಿಯಲ್ಲಿ ಯಾವ ಸಮಸ್ಯೆಗಳು ಆಗದಂತೆ ನೀರಿನ ಪೂರೈಕೆ, ಚರಂಡಿಗಳ ಸ್ವಚ್ಛತೆ, ರಸ್ತೆಗಳ ಸ್ವಚ್ಛತೆ, ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ ಮತ್ತು ನಿರ್ವಹಣೆ.

ಪ್ರಮುಖ ಪಾತ್ರವನ್ನು ವಹಿಸುವುದರೊಂದಿಗೆ ಜಾತ್ರಾ ಮಹೋತ್ಸವದ ಉತ್ತಮ ಪರಿಸರಕ್ಕೆ ಕಾರಣಿಕರ್ತರಾದ ಪುಂಡಲೀಕ ಹಿರಲಕ್ಕಿ, ವಿಠ್ಠಲ ಕಾಂಬಳೆ, ವಿಜಯಕುಮಾರ ಹಾದಿಮನಿ, ತಮ್ಮಣ್ಣ ಹಿರಲಕ್ಕಿ, ಶಿವಾನಂದ ಸುನ್ನಾಳ, ಶೈಲಾ ನಡುವಿನಮನಿ, ಸತ್ಯಪ್ಪ ಹನಗಂಡಿ, ಸಂಗಪ್ಪ ಕಾಂಬಳೆ, ಸಕ್ಕುಬಾಯಿ ಹೊಸಮನಿ,ರೇಣುಕಾ ಪೂಜಾರಿ,ರವಿ ರೊಡ್ಡಣ್ಣವರ, ಪುಟ್ಟು ದೊಡಮನಿ, ಪರಸಪ್ಪ ಗಸ್ತಿ, ನಾರಾಯಣ ಮೇತ್ರಿ, ಮೋಹನ ಮೇತ್ರಿ, ಮೀನಾಕ್ಷಿ ದೊಡಮನಿ, ಮಂಜುನಾಥ ಮಳ್ಳಿ, ಮಂಜುನಾಥ ಪೂಜಾರಿ, ಕೃಷ್ಣ ಮೇತ್ರಿ,ಗಿರೀಶ್ ಮೇತ್ರಿ, ಅನ್ನಪೂರ್ಣಾ ಕಾಂಬಳೆ, ಬಂದವ್ವ ಸರಮನಿ, ಕಾಶವ್ವ ಸರವಿ, ನಾಗವ್ವ ಜೋಗಪ್ಪಗೋಳ ಈ ಎಲ್ಲಾ ಪೌರಕಾರ್ಮಿಕರ ಜೊತೆಗೆ ಪಟ್ಟಣ ಪಂಚಾಯತ ಚಾಲಕರಾದ ರಾಮಣ್ಣ ಕಾನಟ್ಟಿ, ಅಲ್ಲಪ್ಪ ದೋಬಸಿ, ಜಗದೀಶ ಕಟ್ಟಿಕರ ರವರಿಗೆ ಊರಿನ ಜಾತ್ರೆಯ ಮಹೋತ್ಸವದ ಹಿರಿಯರು ಶ್ರೀ ಬಂದ ಲಕ್ಷ್ಮೀ ದೇವಿಯ ಭಾವಚಿತ್ರ ನೀಡಿ ಗೌರವಿಸಿ ಸತ್ಕರಿಸುವುದರ ಜೊತೆಗೆ

WhatsApp Group Join Now
Telegram Group Join Now
Share This Article