ಬಾಬಾಬುಡನ್ ಶಾವಲಿ ದರ್ಗಾ ಟ್ರಸ್ಟ್ ಕಮೀಟಿ ಜಮೀನಿನ ಕ್ಷೇತ್ರದ ತಿದ್ದುಪಡಿಮಾಡಿದ್ದು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

Pratibha Boi
ಬಾಬಾಬುಡನ್ ಶಾವಲಿ ದರ್ಗಾ ಟ್ರಸ್ಟ್ ಕಮೀಟಿ ಜಮೀನಿನ ಕ್ಷೇತ್ರದ ತಿದ್ದುಪಡಿಮಾಡಿದ್ದು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ
oplus_0
WhatsApp Group Join Now
Telegram Group Join Now

ಯರಗಟ್ಟಿ: ಪಟ್ಟಣದ ಹೃದಯ ಭಾಗದಲ್ಲಿರುವ ಬಾಬಾಬುಡನ್ ಶಾವಲಿ ದರ್ಗಾ ಟ್ರಸ್ಟ್ ಕಮೀಟಿ ಜಮೀನಿನ ಕ್ಷೇತ್ರದ ತಿದ್ದುಪಡಿಮಾಡಿದ್ದು ಹಿಂಪಡೆಯುವಂತೆ ಆಗ್ರಹಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸ್ಥಳೀಯ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನಾ ಸಮಾವೇಶ ನಡೆಯಿತು.

ಈ ವೇಳೆ ಮಾತನಾಡಿದ ಮುಸ್ಲಿಂ ಮುಖಂಡ ಅಮೀರ್ ದೇವಡಿ ನಮ್ಮ ಪೂರ್ವಜರ ಕಾಲದಿಂದಲೂ ಬಾಬಾಬುಡನ್ ಶಾವಲಿ ದರ್ಗಾ ಟ್ರಸ್ಟ್ ಜಾಗ ೮ ಗುಂಟೆ ಇದ್ದ ಜಮೀನನ್ನು ೫ ಗುಂಟೆ ಅಂತಾ ಕಾಣದ ಕೈಗಳು ತಿದ್ದುಪಡಿ ತಂದಿರುವುದು ಹಿಂದೂ ಮುಸ್ಲಿಮರ ಧಾರ್ಮಿಕ ಆಸ್ತಿ ಕಬಳಿಸುವ ತಂತ್ರವಾಗಿದೆ. ಕೂಡಲೇ ಈ ತಿದ್ದುಪಡಿ ರದ್ದು ಮಾಡಬೇಕು ಇಲ್ಲವೇ ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ದಿವಂಗತ ಸೋಮಲಿಂಗಪ್ಪ ಜಕಾತಿ ಅವರು ಬಾಬಾಬುಡನ್ ಶಾವಲಿ ದರ್ಗಾ ಹೆಸರಿನಲ್ಲಿ ಪೂರ್ವಜರಿಗೆ ಅರ್ಪಿಸಲಾದ ಆಸ್ತಿಯಾಗಿದೆ. ಸೂಫೀ ಸಂತರ ಕಾಲದಿಂದಲೂ ಹಾಗೂ ತಲ-ತಲಾಂತರದಿಂದ ಹಿಂದೂ ಮುಸ್ಲಿಂ ಸಮಾಜ ಬಾಂಧವರಿಂದ ಭಾವೈಕ್ಯತೆಯ ಸಂಕೇತವಾಗೀ ಬಾಬಾಬುಡನ್ ಶಾವಲಿ ದರ್ಗಾ ಉರುಸು(ಜಾತ್ರೆ) ಮಾಡಿಕೊಂಡು ನಿರ್ವಹಣೆ ಇದನ್ನು ಕಬಳಿಸಲು ಹುನ್ನಾರ ನಡೆಸುತ್ತಿದೆ’ ಎಂದು ದೂರಿದರು.

ನಂತರ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ ಮೂಲಕ ಬೈಲಹೊಂಗಲ ಉಪವಿಭಾಗಾಧಿಕಾರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಇಮಾಮಸಾಬ ಹುಸೇನಾಯ್ಕರ, ಕಾಶಿಮ ಹೊರಟ್ಟಿ, ಇಮಾಮಸಾಬ ಮನಿಯಾರ, ಹುಸೇನಸಾಬ ದಿಲಾವರನಾಯ್ಕ, ಪೈಗಂಬರ ನದಾಫ, ಸಲೀಂಬೇಗ ಜಮಾದಾರ, ಫಿರೋಜ್ ಖಾದ್ರಿ, ಗೋರೆಸಾಬ ಕರ್ನಾಚಿ, ಪುಟ್ಟು ನದಾಫ, ಮುಕ್ದರ ನದಾಫ, ಬಾಬುಲಾಲ ಶಿಕ್ಕಲಗಿ, ಇಮ್ತಿಯಾಜ್ ಖಾದ್ರಿ, ಮುನ್ನಾ ಶಾಬಾಜಖಾನ, ಆಸೀಫ್ ಗೋಕಾಕ, ದುದನಾನಾ ಪತ್ತುನಾಯ್ಕ, ಹುಸೇನ್ ಅನ್ಸಾರಿ, ಮಹ್ಮದ ಉಗರಗೋಳ, ಮಲೀಕ ಚಾಂದಖಾನ್ನವರ, ರಜಾಕ ದಿಲಾವರನಾಯ್ಕ, ಕಾಶೀಂ ಜಮಾದಾರ, ಜಾವೀದ ಮುಗಟಖಾನ, ಸಲೀಂ ಮನಿಯಾರ, ನಜೀರ ನದಾಫ, ಮಲೀಕಸಾಬ ಬಾಗವಾನ, ಎಂ. ಕೆ. ಜಮಾದಾರ, ಫಾರುಕ ಅತ್ತಾರ ಸೇರಿದಂತೆ ಅನೇಕರು ಮುಸ್ಲಿಂ ಸಮಾಜ ಬಾಂಧವರಿಗೆ ಇದ್ದರು.

ಹೇಳಿಕೆ : ಇದರ ಬಗ್ಗೆ ಸಮಾಜದ ಹಿರಿಯರ ಜೊತೆ ಚರ್ಚಮಾಡಿದ್ದನೆ ಕಂದಾಯ ಇಲಾಖೆ ದಾಖಲೆಗಳನ್ನು ಇನ್ನೊಂದು ಸಾರಿ ಪರಿಸಿಲನೆಮಾಡಿ ನ್ಯಾಯಸಮ್ಮತವಾದ ನಿರ್ಣಯಮಾಡುತ್ತೆನೆ.
ಎಂ. ವ್ಹಿ. ಗುಂಡಪ್ಪಗೊಳ ತಹಸಶೀಲ್ದಾರರು, ಯರಗಟ್ಟಿ

 

WhatsApp Group Join Now
Telegram Group Join Now
Share This Article