ಸಿಂದಗಿ: ನಗರದ ಸಾಹಿತಿ, ಶಿಕ್ಷಕಿ, ಶಾಂತಾ ಎಂ. ಮೊಸಲಗಿ ಅವರು ಕರ್ನಾಟಕ ರಾಜ್ಯ ಸಾಹಿತಿಗಳ ಬಳಗ ಕೇಂದ್ರ ಘಟಕ ಕಲಬುರಗಿ (ರಿ) ಇವರ ವತಿಯಿಂದ ನಡೆದ ಚುಟುಕು ಸಾಹಿತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಬಳಗದ ಗೌರವಾಧ್ಯಕ್ಷ ಬಾಬುಮಿಯಾ ಫುಲಾರಿ, ಸಂಚಾಲಕರಾದ ಮಹಾನಂದಾ ಮುಗಳಿ, ವಿಮರ್ಶಕರಾದ ರಾಜಶ್ರೀ ಬಿದರಿ, ಪ್ರಧಾನ ಕಾರ್ಯದರ್ಶಿ ಕುದುರತ್ಅಲಿ ಭೂಸನೂರ ಅವರುಗಳು ಅಭಿನಂದಿಸಿದ್ದಾರೆ.


