ಗದಗ,ಎ,೦೩ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ೧೦ ದಿನಗಳವರೆಗಿನ ಉಚಿತವಾದ ಬೇಸಿಗೆ ಶಿಬಿರವನ್ನು ೧೧ ರಿಂದ ೧೬ ವಷ೯ದ ಮಕ್ಕಳಿಗೆ ಸಂವಾದಾತ್ಮಾಕ ತರಗತಿಗಳು ? ರಚನಾತ್ಮಕ ಕಾಯ೯ಗಾರ ಏಪ೯ಡಿಸಲಾಗುತ್ತಿದೆ. ಇದರ ಕರಪತ್ರವನ್ನು ಡಿಡಿಪಿಐ ಕಚೇರಿಯ ಡಿವೈಪಿಸಿಯಾದ ಶ್ರೀ ರವಿಪ್ರಕಾಶ್ , ವಿಷಯ ಪರಿವೀಕ್ಷಕರಾದ ಶ್ರೀ ಹೆಚ್ ಬಿ ರೆಡ್ಡರ್ , ಗದಗ ಗ್ರಾಮೀಣದ ಶ್ರೀ ಜೆ. ಎ ಭಾವಿಕಟ್ಟಿ, ಗದಗ ನಗರದ ಬಿಆರ್ಸಿಯ ಶ್ರೀ ಎಸ್ ಪಿ ಪ್ರಭಯ್ಯಮಠ ಹಾಗೂ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರಿಂದ ಅನಾವರಣ ಮಾಡಿಲಾಯಿತು.
ಈ ಶಿಬಿರದಲ್ಲಿ ಮಕ್ಕಳಿಗಾಗಿ ನೈತಿಕ ಶಿಕ್ಷಣ ಮತ್ತು ಮೌಲ್ಯ ಶಿಕ್ಷಣ, ವತ೯ನೆಯ ಪರಿವತ೯ನೆ , ಅಧ್ಯಾತ್ಮ ಲೋಕದ ಅಧ್ಬುತ ರಹಸ್ಯ , ಆರೋಗ್ಯ ಜ್ಞಾನ, ಶ್ಲೋಕ , ವಚನ, ಜ್ಞಾನಯುಕ್ತ ಗೀತೆಗಳ ಪಠಣ, ರಾಜಯೋಗ ಮೆಡಿಟೇಶನ್, ಯೋಗಾಸನ ಪ್ರಾಣಾಯಾಮ, ಗುಡ್ ಮ್ಯಾನರ್ಸ್, ಕ್ರಾಫ್ಟ್, ಚಿತ್ರಕಲೆ, ಮೆಮೋರಿ ಮ್ಯಾನೆಜ್ ಮೆಂಟ್ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಲಾಗುವುದು .
ಇದೇ ತಿಂಗಳ ದಿನಾಂಕ ೦೮-೦೪-೨೦೨೬ ಬುಧವಾರ ದಿಂದ ೧೮-೦೪-೨೦೨೬ ರವರೆಗೆ ಪ್ರತಿದಿನ ಬೆಳಿಗ್ಗೆ ೧೦ ರಿಂದ ೧.೦೦ ಗಂಟೆಯವರೆಗೆ ಇರುವುದು .
ಗದಗ ನಗರದಲ್ಲಿ ಈ ಶಿಬಿರ ೩ ಸ್ಥಳಗಳಲ್ಲಿ ನಡೆಯಲಿದೆ
೧. ಬ್ರಹ್ಮಾಕುಮಾರೀಸ್, ಬಸವೇಶ್ವರ ನಗರ, ಗದಗ . ಮೊ : ೬೩೬೦೭೫೩೯೯೨
೨. ಬ್ರಹ್ಮಾಕುಮಾರೀಸ್, ಆಧ್ಯಾತ್ಮಿಕ ಸಂಸ್ಕ್ರತಿ ಭವನ ,ಡಂಬಳ ನಾಕಾ, ಸಿದ್ದರಾಮೇಶ್ವರ ನಗರ, ಗದಗ ಮೊ: ೮೧೪೭೨೪೧೭೫೦
೩. ಬ್ರಹ್ಮಾಕುಮಾರೀಸ್, ಹೊಸ್ಪೆಟ್ ಚೆಕ್, ಬೆಟಗೇರಿ. ಮೊ: ೯೬೩೨೭೬೯೯೫೦
ಶಿಬಿರದಲ್ಲಿ ಪಾಲ್ಗೊಳಲು ಆಸಕ್ತಿ ಇರುವಂತವರು ತಮ್ಮ ಹೆಸರು, ತರಗತಿ ಹಾಗೂ ಶಾಲೆಯ ವಿವರಗಳನ್ನು ತಾವು ಇಚ್ಛಿಸುವ ಶಿಬಿರ ನಡೆಯುವ ಕೇಂದ್ರದ ವಿಳಾಸದ ಕೆಳಗೆ ಜೊತೆಗೆ ನೀಡಿರುವ ಮೊಬೈಲ್ ಸಂಖ್ಯೆಗೆ ವಾಟ್ಸಪ್ ಮಾಡಬೇಕು.
ಶಿಬಿರಕ್ಕೆ ಪೂಣ೯ ಹಾಜರಾದವರಿಗೆ ಸಟಿ೯ಫಿಕೇಟ್ ಕೊಡಲಾಗುವುದು.
ಶಿಬಿರದಲ್ಲಿ ಭಾಗವಹಿಸುವ ಮಕ್ಕಳು ಪೆನ್, ಪುಸ್ತಕ, ಯೋಗಾಸನಕ್ಕೆ ಬೆಡಶೀಟ್, ನೀರಿನ ಬಾಟಲ ಅನ್ನು ಜೊತೆಗಿಟ್ಟುಕೊಳ್ಳಬೇಕು.
ಸೀಮಿತ ಸಂಖ್ಯೆಯಲ್ಲಿ ವಿದ್ಯಾಥಿ೯ಗಳಿಗೆ ಅವಕಾಶವಿರುತ್ತದೆ.
ಎಲ್ಲಾ ಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳಲು ಈ ಸುವಣಾ೯ವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕರಾಗಿರುವ ರಾಜಯೋಗಿನಿ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರು ಕರೆ ನೀಡಿದರು.
ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಮಕ್ಕಳಿಗಾಗಿ ಸರ್ವತೋಮುಖ ವ್ಯಕ್ತಿತ್ವ ವಿಕಾಸ ಶಿಬಿರ


