ಬಳ್ಳಾರಿ,ಏ.೦2: ರೈತ ನಾಯಕ ಪ್ರಕಾಶ್ ಮಲ್ಲಿಕ್ ಅವರನ್ನು ಬಂಧಿಸಿರುವ ಓಡಿಸ್ಸಾ ಸರ್ಕಾರದ ಕ್ರಮವನ್ನು ಎಐಕೆಕೆಎಂಎಸ್ ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶಂಕರ್ ಘೋಷ್ ಅವರು ಖಂಡಿಸಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಮಾರ್ಚ್ ೩೧ ಮತ್ತು ಏಪ್ರಿಲ್ ೦೧, ೨೦೨೬ ರ ಮಧ್ಯರಾತ್ರಿ ೧ ಗಂಟೆಗೆ ಒಡಿಶಾ ರಾಜ್ಯ ಪೊಲೀಸರು ಪ್ರಕಾಶ್ ಮಲ್ಲಿಕ್ ಅವರನ್ನು ಬಂಧಿಸಿದ್ದಾರೆ. ಅವರು ಒಡಿಶಾದ ಕಿಯಾಂಜೋರ್ ಜಿಲ್ಲೆಯಲ್ಲಿ ಭೂ ಕಬಳಿಕೆಯ ವಿರುದ್ಧ ರೈತರನ್ನು ಸಂಘಟಿಸುವ ಅತ್ಯಂತ ತುರ್ತು ಕಾರ್ಯದಲ್ಲಿ ನಿರತರಾಗಿದ್ದರು. ಇದು ಫ್ಯಾಸಿಸ್ಟ್ ಬಿಜೆಪಿ ಸರ್ಕಾರವು ರೈತ ಚಳವಳಿಯನ್ನು ಹತ್ತಿಕ್ಕಲು ನಡೆಸಿದ ಹೇಯ ಕೃತ್ಯವಾಗಿದೆ.
ರೈತ ನಾಯಕ ಪ್ರಕಾಶ್ ಮಲ್ಲಿಕ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಮತ್ತು ತಮ್ಮ ಜೀವನೋಪಾಯದ ಏಕೈಕ ಆಧಾರವಾದ ಪೂರ್ವಜರ ಕೃಷಿ ಭೂಮಿಯನ್ನು ಉಳಿಸಿಕೊಳ್ಳಲು ಶಾಂತಿಯುತವಾಗಿ ಹೋರಾಡುತ್ತಿರುವ ರೈತರ ಮೇಲೆ ಪೊಲೀಸ್ ದಮನವನ್ನು ನಿಲ್ಲಿಸಬೇಕೆಂದು ಂIಏಏಒS ಒತ್ತಾಯಿಸುತ್ತದೆ. ಒಡಿಶಾ ಪೊಲೀಸರು “ಅನ್ನದಾತ” ರೈತರನು ಭಯೋತ್ಪಾದಕರಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು. ಈ ಬಡ ಆದಿವಾಸಿ ರೈತರಿಗೆ ಬೇರೆ ಯಾವುದೇ ಜೀವನೋಪಾಯದ ಮೂಲಗಳಿಲ್ಲ. ರೈತ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರವು ನಡೆಸುತ್ತಿರುವ ಈ ಘೋರ ಕೃತ್ಯವನ್ನು ಪ್ರತಿರೋಧಿಸಲು ಸಾರ್ವಜನಿಕರು ಮುಂದೆ ಬರಬೇಕೆಂದು ಕರೆ ನೀಡಿದ್ದಾರೆ ಎಂದು ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ತಿಳಿಸಿದ್ದಾರೆ.


