ಸಮ ಭಾವದಿಂದ ನೋಡಿಕೊಳ್ಳೋದೇ ನಮ್ಮ ಆದ್ಯ ಕರ್ತವ್ಯ : ಎಸ್. ಬಿ. ಪಾಟೀಲ

Pratibha Boi
ಸಮ ಭಾವದಿಂದ ನೋಡಿಕೊಳ್ಳೋದೇ ನಮ್ಮ ಆದ್ಯ ಕರ್ತವ್ಯ : ಎಸ್. ಬಿ. ಪಾಟೀಲ
WhatsApp Group Join Now
Telegram Group Join Now

ಇಂಡಿ : ತಾಲೂಕಿನ ಜೇವೂರ ಶಾಲೆಯಲ್ಲೂ ೨೦೧೯ರಲ್ಲಿ ಈ ಶಾಲೆಗೆ ಹಾಜರಾಗಿ ಸುಮಾರು ೭ ವರ್ಷಗಳಕಾಲ ಅತ್ಯುತ್ತಮ ಆದರ್ಶವಾಗಿ, ಎಲ್ಲ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದಿದ್ದಾರೆ, ಇಂತಹ ಶಿಕ್ಷಕರು ಸಿಗೋದು ನಮ್ಮ ಪುಣ್ಯ ಎಂದು ಎಸ್. ಡಿ. ಎಮ್. ಸಿ ಅಧ್ಯಕ್ಷರು ಶರಣಪ್ಪ ಹತ್ತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಜೇವೂರ ಎಚ್. ಪಿ. ಎಸ್. ಶಾಲೆಯಿಂದ, ಉಮರಜ ಎಮ್. ಪಿ. ಎಸ್. ಶಾಲೆಗೆ ಪದೋನ್ನತಿ ಹೊಂದಿದ ಶಾಲಾ ಮುಖ್ಯ ಗುರುಗಳಾದ ಎಸ್. ಬಿ. ಪಾಟೀಲ ಇವರಿಗೆ ಸನ್ಮಾನ ಹಾಗೂ ಬೀಳ್ಕೊಡುವ ಸಮಾರಂಭ ಮತ್ತು ವಾಯ. ವ್ಹಿ ಪಾಟೀಲ್ ಫೌಂಡೇಶನ್ ಹಕ್ಕಿಗೊಂದು ಹನಿ ನೀರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಶಾಲಾ ಮುಖ್ಯ ಗುರುಗಳಾದ ಎಸ್. ಬಿ. ಪಾಟೀಲ ಮಾತನಾಡಿ ಗ್ರಾಮ ಯಾವುದೆ ಆಗಲಿ, ಅದು ನಮ್ಮ ಗ್ರಾಮ, ನಮ್ಮ ಶಾಲಾ ವಿದ್ಯಾರ್ಥಿಗಳು ನಮ್ಮ ಮಕ್ಕಳೇ ಅನ್ನೋ ಭಾವನೆಯಿಂದ ನಾವುಗಳು ಶಿಕ್ಷಣ ಕೊಡುವಂತವರಾಗಬೇಕು ಅಂದಾಗ ವಿದ್ಯಾರ್ಥಿಗಳಲ್ಲಿ ಒಳ್ಳೆಯ ಬೆಳವಣಿಗೆ ಕಾಣಲು ಸಾಧ್ಯ, ಎಲ್ಲ ವಿದ್ಯಾರ್ಥಿಗಳಿಗೆ ಇದೇ ರೀತಿಯಲ್ಲಿ, ಸಮ ಭಾವದಿಂದ ನೋಡಿಕೊಳ್ಳೋದೇ ನಮ್ಮ ಆದ್ಯ ಕರ್ತವ್ಯ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸತೀಶ ಹತ್ತಿ ಮಾತನಾಡಿ ವಾಯ. ವ್ಹಿ. ಪಾಟೀಲ್ ಫೌಂಡೇಶನ್ ಅಧ್ಯಕ್ಷರು ವಿಠ್ಠಲಗೌಡ ಪಾಟೀಲರ ಆದೇಶದ ಮೇರೆಗೆ ಇಂಡಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಹಕ್ಕಿಗೊಂದು ಹನಿ ನೀರು ಕಾರ್ಯಕ್ರಮ ಹಮ್ಮಿಕೊಂಡು, ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಹಕ್ಕಿಗಳಿಗೆ ನಿರುಣಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದರಿಂದಾಗಿ ಹಕ್ಕಿಗಳಿಗೆ ಬದುಕಲು ಸಾಧ್ಯ ಎಂದರು.
ಸಿ. ಆರ್. ಪಿ. ಬಾಲಕೃ? ಬಾಲಗಾಂವ, ಶಿಕ್ಷಕಎಸ್. ಎಮ್. ಮಡಿಕೇಶ್ವರ ಮಾತನಾಡಿ ಸಂತೋ? ವ್ಯಕ್ತಪಡಿಸಿದರು, ಈ ಸಂದರ್ಭದಲ್ಲಿ ಶಿಕ್ಷಕರಾದ ಅರ್ಜುನ ಕಂಬಾರ, , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವಿಠ್ಠಲ ಕಾಂಬಳೆ, ಮುಖ್ಯ ಗುರುಗಳು ಜಿ. ಡಿ. ಹೂಗಾರ, ಶ್ರೀಶೈಲಗೌಡ ಬಿರಾದಾರ, ಶೆಟ್ಟಪ್ಪ ಹುನ್ನೂರ, ತುಕಾರಾಮ ಬಿರಾದಾರ, ಆಕಳವಾಡಿ ಸರ್, ಕಟ್ಟಿಮನಿ ಸರ, ಮೇತ್ರಿ ಸರ, ಕುಲಕರ್ಣಿ ಮೇಡಂ, ಕುಂಬಾರ ಮೇಡಂ, ವಿಜಯಕುಮಾರ ಕಾಂಬಳೆ, ಬಿ. ಕೆ. ವಾಘಮೋರೆ, ಎಸ್. ಕೆ. ಸೊನಕನಳ್ಳಿ, ಎಮ್. ಎ. ಕಂಬಾರ, ಸಿ. ಆರ್. ವಾಲಿಕಾರ, ಶಿವಪ್ಪ ಹುನ್ನೂರ, ಹಾಗೂ ಶಾಲಾ ಸಿಬ್ಬಂದಿಗಳು, ಮುದ್ದು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article