ಗದಗ : ಬಡತನ ಹಸಿವು ನೋವು ಸಂಕಟಗಳು
ವರ್ತಮಾನದ ತಲ್ಲಣಗಳಿಗೆ ಕವಿ ಸ್ಪಂದನೆ ಅಗತ್ಯ ಎಂದು ಹಾವೇರಿ ಜಿಲ್ಲಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು, ಹಿರಿಯ ಕವಯತ್ರಿ
ಡಾ ಪುಷ್ಪಾ ಶಲವಡಿಮಠ ಅಭಿಮತ ವ್ಯಕ್ತಪಡಿಸಿದರು.
ಹೂವಿನ ಹಡಗಲಿ ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಏರ್ಪಡಿಸಲಾಗಿದ್ದ ಸಿಂಚನ ಪ್ರಕಾಶನ. ಮೇ ಸಾಹಿತ್ಯ ಮೇಳ ಬಳಗ ಹೂವಿನ ಹಡಗಲಿ ಸಹಯೋಗದಲ್ಲಿ ಗದುಗಿನ ಕವಿ ಎ.ಎಎಸ್. ಮಕಾನದಾರ ಅವರ ಮಹತ್ವದ ಕವನ ಸಂಕಲನ ದರ್ವೇಶಿ ಪದ್ಯ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಕುರಿತು ಮಾತನಾಡಿದರು.
ಶರಣರ ಸೂಫಿ ಸಂತರ ಸೌಹಾರ್ದತೆ ಸಮಾನತೆಯ ನುಡಿಗಳನ್ನು ಕವಿ ಸರಳ ಪದ್ಯಗಳಲ್ಲಿ ಅನಾವರಣಗೊಳಿಸಿದ್ದಾರೆ.
ಸಮಾಜದ ಜನ ಸಾಮಾನ್ಯರ
ಕಡು ಕಷ್ಟಗಳಿಗೆ ಕವಿ ಮರುಗಿ ಕರಗಿ ಕಾವ್ಯರೂಪದಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದರು.
ದರ್ವೇಶಿಗಳು ಸರಳ ಜೀವನ ನಡೆಸುವ ಉದಾತ್ತ ಮೌಲ್ಯಗಳನ್ನು ಬಿತ್ತರಿಸುವ ಕೆಲಸ ನಿರಂತರವಾಗಿ ಮಾಡುವವರು. ದರ್ಪವಿಲ್ಲದ ತ್ಯಾಗಮಯ ಬದುಕು ನಿರ್ವಹಿಸುವ ದರ್ವೇಶಿ ಬಗ್ಗೆ
ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪದ ವಿಶಿಷ್ಟ ರೀತಿಯಲ್ಲಿ ಪದ್ಯಗಳನ್ನು ರಚಿಸಿದ್ದಾರೆ ಎಂದು ಬಣ್ಣಿಸಿದರು.
ಅಸಮಾನತೆ ಭ್ರಷ್ಟಾಚಾರ ಯುದ್ಧದ ಭೀತಿಯ ಸಂದರ್ಭದಲ್ಲಿ ದರ್ವೇಶಿ ಕೃತಿಯ ಕವಿತೆಗಳು ಮಾನವೀಯ ಸಂಬಂಧಗಳು
ಬೆಸೆಯುವಲ್ಲಿ ಸಾರ್ಥಕಗೊಂಡಿವೆ ಎಂದು ಹೇಳಿದರು.
ದರ್ವೇಶಿ ಕೃತಿಯ ಕವಿತೆಗಳು
ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ, ಕುವೆಂಪು ವಿಶ್ವ ವಿದ್ಯಾಲಯ ಗಳ ಪಠ್ಯಕ್ಕೆ ಆಯ್ಕೆ ಆಗಿರುವುದನ್ನು ಸ್ಮರಿಸಿದರು.
ಸಾಹಿತಿ ಇಸ್ಮಾಯಿಲ್ ಎಲಿಗಾರ್ ದರ್ವೇಶಿ ಪದ್ಯ ಕೃತಿ ಜನಾರ್ಪಣೆ ಮಾಡಿದರು.
ನಿರಂತರ ಪ್ರಕಾಶನದ ಕವಿ ಎ ಎಸ್ ಮಕಾನದಾರ ಮಾತನಾಡಿ
ಬಳ್ಳಾರಿ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪಠ್ಯಕ್ಕೆ ಕಾವ್ಯಗಳನ್ನು ಪದವಿ ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಅಖಂಡ ಬಳ್ಳಾರಿ ವಿಜಯನಗರ ಜಿಲ್ಲೆಯ
ಸಾಂಸ್ಕೃತಿಕ ನೆಲ ಹೂವಿನ ಹಡಗಲಿಯಲ್ಲಿ ದರ್ವೇಶಿ ಕೃತಿ
ಜನಾರ್ಪಣೆ ಆಗಿರುವುದು ವಿಶೇಷ ಸಂಗತಿ ಎಂದು ಹೇಳಿದರು.
ಸಾಹಿತಿ ತೋ.ಮ. ಶಂಕ್ರಯ್ಯ ಅಧ್ಯಕ್ಷತೆ ವಹಿಸಿದ್ದರು.
ಕವಿ ರಾಮಪ್ಪ ಕೋಟಿಹಾಳ
ಸಿಂಚನ ಪ್ರಕಾಶನದ ಸವಿತಾ ಅಂಗಡಿ
ಗ್ರಂಥಾಲಯಾಧಿಕಾರಿ ಬಿ.ನಾರಾಯಣ್ ದಾಸ್
ಸಿಂಚನ ಕಾವ್ಯ ಪ್ರಶಸ್ತಿ ಪುರಸ್ಕೃತರಾದ ಸೋಮಲಿಂಗ ಬೇಡರ ಆಳೂರ ಹಾಗೂ ಹುರಕಡ್ಲಿ ಶಿವಕುಮಾರ ಉಪಸ್ಥಿತರಿದ್ದರು.
ಪತ್ರಕರ್ತ ಎಂ ದಯಾನಂದ,
ನಯನಾ ಅಂಗಡಿ, ನಾಗರಾಜ್
ಮಲ್ಕಿಒಡೆಯರ್ ನಿರ್ವಹಿಸಿದರು.
ಇದೇ ವೇಳೆ ವಿವಿಧ ಪ್ರಕಾಶನ ಸಂಸ್ಥೆಗಳ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಕಲ್ಪಿಸಲಾಗಿತ್ತು.
ಹೂವಿನ ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿಯ
ಸಾಹಿತ್ಯಾಸಕ್ತರು ಭಾಗವಹಿಸಿದ್ದರು.


