ಸನ್ಮಾರ್ಗ ಗೆಳೆಯರ ಬಳಗದಿಂದ ಸರ್ಕಾರಿ ಬಸ್ ಗಳಲ್ಲಿ ಕುಡಿಯುವ ನೀರು

MK HasiruKranti
ಸನ್ಮಾರ್ಗ ಗೆಳೆಯರ ಬಳಗದಿಂದ ಸರ್ಕಾರಿ ಬಸ್ ಗಳಲ್ಲಿ ಕುಡಿಯುವ ನೀರು
WhatsApp Group Join Now
Telegram Group Join Now
ಬಳ್ಳಾರಿ, 01..: ಹಲವಾರು ಸಾಮಾಜಿಕ ಸೇವಾ ಕಾರಗಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ಸನ್ಮಾರ್ಗ ಗೆಳೆಯರ ಬಳಗ ಬೇಸಿಗೆ ಕಾಲದಲ್ಲಿ ಹಲವು ಸರ್ಕಾರಿ ಬಸ್ ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಳೆದ 11 ವರ್ಷಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಂಡು ಬಂದಿದ್ದು. ಅದು ಈ ವರ್ಷವೂ ಮುಂದುವರೆದಿದೆ.
ಇಂದು ನಗರದ ಬಸ್ ನಿಲ್ದಾಣದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್. ಮಂಜುನಾಥ ಅವರು ಈ ಕಾರ್ಯಕ್ಕೆ ಚಾಲನೆ ನೀಡಿದರು. ಅವರು ಈ ವೇಳೆ ಮಾತನಾಡಿ ಬಿರು ಬೇಸಿಗೆಯಲ್ಲಿ ಬಾಯಾರಿದವರಿಗೆ ಸ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಿರುವುದು ಶ್ಲಾಘನೀಯ ಕಾರ್ಯ. ಹಸಿದವರಿಗೆ ಅನ್ನ ನೀಡುವುದು, ತೃಷೆಯಿಂದ ಬಳಲುವವರಿಗೆ ಕುಡಿಯಲು ನೀರು ಕೊಡುವುದು ಬಿಸಿಲಿನಿಂದ ಬಳಲುವವರಿಗೆ ನೆರಳಿನ ಆಶ್ರಯ ನೀಡುವುದು ಪುಣ್ಯದ ಕೆಲಸವೆಂದರು.
ಅಧ್ಯಕ್ಷತೆ ವಹಿಸಿದ್ದ ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ, ಸಾರಿಗೆ ಇಲಾಖೆ ಮತ್ತು ಸಾರ್ವಜನಿಕರ ಸಹಕಾರದಿಂದ ಈ ರೀತಿಯ ಜನಮುಖಿ ಕಾರ್ಯಕ್ರಮವನ್ನು ಕಳೆದ 11 ವರ್ಷಗಳಿಂದಲೂ ಹಮ್ಮಿಕೊಳ್ಳತ್ತಾ ಬಂದಿದೆಂದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಕೆ.ಪಂಪಾಪತಿ ತೇಜ ರಾಘುರಾಮ ರಾವು, ಶೇಖರ ಕಾರ್ಯದರ್ಶಿ ಕಪ್ಪಗಲ್ಲು ಬಿ.ಚಂದ್ರಶೇಖರ ಆಚಾರಿ, ಡಿ. ಟಿ. ಓ. ಬಿರಾದಾರ, ಡಿ. ಎಂ. ಈ. ಪಾಲಕ್ಷಪ್ಪ, ಕಾರ್ಮಿಕ ಕಲ್ಯಾಣ ಅಧಿಕಾರಿ ಕರಿಗೌಡ, ಡಿಪೂ ಮೆನೇಜರ್ ಹರಿಕೃಷ್ಣ, ಆಶೋಕ ಭಂಡಾರಿ, ಮಾರುತಿ, ಕೆ.ವಿಶ್ವನಾಥ ಮೊದಲಾದವರು ಇದ್ದರು
WhatsApp Group Join Now
Telegram Group Join Now
Share This Article