ಧಾರವಾಡ ಅರಣ್ಯದಲ್ಲಿ ಕಾರಿನಲ್ಲಿ ಶವವಿಟ್ಟು ಸುಟ್ಟ ಪ್ರಕರಣ ನಾಲ್ವರು ಆರೋಪಿಗಳ ಬಂಧನ.

MK HasiruKranti
ಧಾರವಾಡ ಅರಣ್ಯದಲ್ಲಿ ಕಾರಿನಲ್ಲಿ ಶವವಿಟ್ಟು ಸುಟ್ಟ ಪ್ರಕರಣ ನಾಲ್ವರು ಆರೋಪಿಗಳ ಬಂಧನ.
WhatsApp Group Join Now
Telegram Group Join Now
ಧಾರವಾಡ: ಅನುಮಾನಾಸ್ಪದ ರೀತಿಯಲ್ಲಿ ಕಾರಿನಲ್ಲಿ ಶವ ಸುಟ್ಟ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು.
ಧಾರವಾಡದ ಎಸ್ ಪಿ ಕಛೇರಿಯಲ್ಲಿ ಮಾತನಾಡಿದ ಅವರು, ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದ ನಿವಾಸಿ ರಾಜು ಬೊಳಶೆಟ್ಟಿ ಕೊಲೆಯಾದವರು ಎಂದು ಗುರುತಿಸಲಾಗಿದೆ. ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ಗ್ರಾಮದ ನಿವಾಸಿ ಮುನೀರಾ ಶರೀಫ್ ದಿಲುನಾಯಕ್ (32) ಎಂಬ ಮಹಿಳೆಯೊಂದಿಗೆ ಬೈಲಹೊಂಗಲ ತಾಲೂಕಿನ ಬಿದರಗಡ್ಡಿ ಗ್ರಾಮದ ನಿವಾಸಿಗಳಾದ ಬಸವರಾಜ ಪೂಜಾರಿ,  ಮೃತ್ಯುಂಜಯ ಕುಂಬಾರ ಬೈಲಹೊಂಗಲ ತಾಲೂಕಿನ ಉಡಕೇರಿ ಗ್ರಾಮದಲ್ಲಿ ಕೊಲೆ ಮಾಡಿದ್ದಾರೆ. ಇನ್ನೂ ಅಪ್ರಾಪ್ತ ವಯಸ್ಸಿನ ಮುನೀರಾ ಮಗ ಸಹ ಇದ್ದರು. ನಂತರ ಧಾರವಾಡ ತಾಲೂಕಿನ ರಾಮಾಪುರ ಅರಣ್ಯ ಪ್ರದೇಶದಲ್ಲಿ ವೆಗಿನಾರ್ ಕಾರನಲ್ಲಿಯೇ ಆಗಮಿಸಿದ ಪೆಟ್ರೋಲ್ ಸುರಿದು ಕಾರು ಸಮೇತ ವ್ಯಕ್ತಿ ವಶಕ್ಕೆ ಬೆಂಕಿ ಹಚ್ಚಿ ನಂತರ ಒಂದೇ ಬೈಕ್ ನಲ್ಲಿ ನಾಲ್ವರು ಆರೋಪಿಗಳು ತೆರಳಿದ್ದಾರೆ ಎಂದು ತಿಳಿಸಿದರು.
ಪ್ರಕರಣಕ್ಕೆ ಮುಖ್ಯವಾಗಿ ಅನೈತಿಕ ಸಂಬಂಧ ಹಾಗೂ ಹಣಕಾಸಿನ ವ್ಯವಹಾರ ಕಾರಣ ಎಂದು ಮೆಲ್ನೋಟಕ್ಕೆ ತಿಳಿದುಬಂದಿದೆ. ಮುನೀರಾ ಉಡಕೇರಿ ಗ್ರಾಮದಲ್ಲಿನ ರಾಜು ಬೋಳಶೆಟ್ಟಿ ಅವರ ಹೊಲದ ಶೆಡ್ ನಲ್ಲಿ ಭೇಟಿ ಮಾಡಿ, ಅಲ್ಲಿಯೇ ಕೊಲೆ ಮಾಡಿದ್ದಾರೆ. ಕೃತ್ಯದಲ್ಲಿ ಅವಳ ಮಗ ಸಹ ಇದ್ದು, ಆತ ಅಪ್ರಾಪ್ತ ವಯಸ್ಸಿನವನಾಗಿದ್ದಾನೆ ಎಂದು ಮಾಹಿತಿ ನೀಡಿದರು.
ಕೊಲೆ ಮಾಡಿದ ನಂತರ ರಾಜು ಬೋಳಶೆಟ್ಟಿ ಅವರ ವೆಗಿನಾರ್ ಕಾರನಲ್ಲಿ ಅವರ ಶವವನ್ನು ತೆಗೆದುಕೊಂಡು ಧಾರವಾಡಕ್ಕೆ ತಂದಿದ್ದಾರೆ. ಆದರೊಂದಿಗೆ ಬೈಕ್ ನಲ್ಲಿ ಓರ್ವ ಬಂದಿದ್ದಾರೆ. ಮೃತ್ಯುಂಜಯ ಕುಂಬಾರ ಹಾಗೂ ಬಸವರಾಜ ಪೂಜಾರಿ ಅವರೊಂದಿಗೆ ಧಾರವಾಡ ಹೊರವಲಯದ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್,ಮತ್ತು ಡೀಸೆಲ್‌ ಖರೀದಿಸಿ ಕಾರು ಸಮೇತ ರಾಮಾಪುರ ಅರಣ್ಯ ಪ್ರದೇಶದಲ್ಲಿ ಸುಟ್ಟು ಪವಾರ್ ಯಾಗಿದ್ದರು. ನಮ್ಮ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಟೆಕ್ನಿಕಲ್ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ಆರೋಪಿಗಳನ್ನು ಪತ್ತೆ ಹಚ್ಚಲು ಸಹಕರಿಸಿದೆ. ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದರು.
ಇನ್ನೂ ರಾಜು ಬೋಳಶೆಟ್ಟಿ ಅವರ ಶವವೇ ಹೌದೋ ಅಲ್ಲವೋ ಎನ್ನುವುದು ಡಿಎನ್ಎ ಪರೀಕ್ಷೆ ಸಹ ನಡೆದಿದೆ. ಸಧ್ಯ ಅವರ ನಾಪತ್ತೆ ಹಾಗೂ ಅವರ ಕಾರು ಸುಟ್ಟಿರುವುದರಿಂದ ಇದು ಅವರ ಶವ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಪ್ರಕರಣದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಸಿ.ಇ.ಎನ್ ಶಿವಾನಂದ ಕಟಗಿ, ಧಾರವಾಡ ಗ್ರಾಮೀಣ ಉಪ-ವಿಭಾಗದ ಡಿ.ಎಸ್.ಪಿ ವಿನೋದ ಮುಕ್ತದಾರ ಅವರ ನೇತೃತ್ವದಲ್ಲಿ
ಸಿ ಪಿ.ಐ ಎಸ್.ಎಸ್. ಕಮತಗಿ ಧಾರವಾಡ ಗ್ರಾಮೀಣ ರವರ ತಂಡವು ಈ ಪ್ರಕರಣದಲ್ಲಿ ಆರೋಪಿತರು ಯಾವದೇ ಸುಳಿವು ಬಿಡದೇ ಕೃತ್ಯ ಎಸಗಿದ ಪರಾರಿಯಾಗಿದ್ದವರನ್ನು, ಪ್ರಕರಣ ವರದಿಯಾದ 24 ಗಂಟೆಯೊಳಗಾಗಿ ಬಹಳ ಚಾಣಾಕ್ಷತನಿದಿಂದ  ಆರೋಪಿತರನ್ನು ಪತ್ತೆ ಮಾಡಿದ್ದರೆ.
WhatsApp Group Join Now
Telegram Group Join Now
Share This Article