ಸಿರಿಗೇರಿಯಲ್ಲಿ ರಾಮಾಯಣ ಬಯಲಾಟ ಪ್ರದರ್ಶನ

MK HasiruKranti
ಸಿರಿಗೇರಿಯಲ್ಲಿ ರಾಮಾಯಣ ಬಯಲಾಟ ಪ್ರದರ್ಶನ
WhatsApp Group Join Now
Telegram Group Join Now
ಬಳ್ಳಾರಿ: 27..ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಮುದ್ದಟನೂರಿನ ಲಕ್ಷ್ಮೀನಗರ ಕ್ಯಾಂಪ್  ಹೆಜ್ಜೆಗೆಜ್ಜೆ ಬಯಲಾಟ ಕಲಾಟ್ರಸ್ಟ್ ವತಿಯಿಂದ ರಾಮಾಯಣ ಬಯಲಾಟ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ಸಾನಿದ್ಯವನ್ನು
ದರೂರು ಗ್ರಾಮ ಕೊಟ್ಟೂರು ಮಠದ ಶ್ರೀ ಕೊಟ್ಟೂರು ದೇಶಿಕರು ಹಾಗೂ ಕದಳೀವನ ಶ್ರೀ ಸಿದ್ದೇಶ್ವರ ಸ್ವಾಮಿಯ ಕರಕಮಲ ಸಂಜಾತರಾದ ಶ್ರೀ ಚಿದಾನಂದ ತಾತನವರು ವಹಿಸಿದ್ದರು.
ಇದೇ ವೇಳೆ ಮಾತನಾಡಿದ ಅವರು, ಕಲಾವಿದರಿಗೆ ಅವರ ಕಲೆಯಲ್ಲಿ  ಶ್ರೇಯಸ್ಸು ಯಶಸ್ಸು ಸಿಗಲಿ. ನಾಡಿನಾದ್ಯಂತ ಗುರುತಿಸಿ ಗೌರವಿಸುವಂತಾಗಲಿ ನಾಡಿಗೆ ಮಳೆ ಬೆಳೆ ಸಮೃದ್ಧಿಯಾಗಿ ರೈತರ ಜೀವನ ಸುಖಮಯವಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ
 ಎಸ್.ಎಮ್. ನಾಗರಾಜ ಸ್ವಾಮಿ,
ಹೆಚ್ ತಿಪ್ಪೇಸ್ವಾಮಿ, ಏಳಬೆಂಚಿ ಮಂಜುನಾಥ, ಜಡೆಪ್ಪ, ಸಿದ್ದರಾಮೇಶ್ವರ ಸ್ವಾಮಿ, ಹೂಗಾರ್ ಬಸಮಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೆಚ್ ಶಿವರುದ್ರಪ್ಪ,  ಹಾರ್ಮೊನಿಯಂ ನುಡಿಸಿದರೆ, ಭೀಮೇಶ ರಿದಂ ಪ್ಯಾಡ್,
ಬಸವರಾಜ ತಬಲ ಸಾಥ್ ನೀಡಿದರು.  ಮುಂತಾದವರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article