ಸಧ್ಯ ಪೆಟ್ರೋಲ, ಡಿಸೆಲ್ ಯಾವುದೆ ಸಮಸ್ಸೆ ಆಗಿಲ್ಲ : ಸಗಾಯಿ

Pratibha Boi
ಸಧ್ಯ ಪೆಟ್ರೋಲ, ಡಿಸೆಲ್ ಯಾವುದೆ ಸಮಸ್ಸೆ ಆಗಿಲ್ಲ : ಸಗಾಯಿ
WhatsApp Group Join Now
Telegram Group Join Now
ಇಂಡಿ:  ಝಳಕಿ ಸುಮಾರು ದಿನಗಳಿಂದ ನಡೆದ ಇರಾನ, ಅಮೇರಿಕಾ,ಇಸ್ರೆಲ್ ಯುದ್ಧದಿಂದಾಗಿ ರಾಜ್ಯದ ಎಲ್ಲೆಡೆ ಗ್ಯಾಸ, ಪೆಟ್ರೋಲ್, ಎಲ್.ಪಿ.ಜಿ ಸಮಸ್ಸೆಗಳಲ್ಲದೆ ಎಲ್ಲರಿತಿಯ ಕಚ್ಚಾ ವಸ್ತುಗಳ ಆಮದು, ರಪ್ತಿಗೆ ತೊಂದರೆ ಉಂಟಾಗಿದ್ದು, ಗ್ಯಾಸ ತೋಂದರೆಯಿಂದಾಗಿ ಹೋಟೆಲಗಳಲ್ಲಿ, ಮನೆಗಳಲ್ಲಿ ಜನರು ಸವದೆ ಒಲೆ, ವಿದ್ಯೂತ ಚಾಲಿತ ಒಲೆಗಳ ಮೊರೆ  ಹೊಗುತಿದ್ದು, ಇಂತಹ ಪರಿಸ್ಥಿತಿಯಲ್ಲಿ ನಮ್ಮ ಬಳ್ಳೊಳ್ಳಿ ಭೀರೇಶ್ವರ ಟ್ರೆಡರ್‍ಸ ಇವರಿಗೆ ಯಾವುದೆ ಸಮಸ್ಸೆಯಾಗಿಲ್ಲ, ಮೊದಲಿಗಿಂತಲು ಸ್ವಲ್ಪ ಪ್ರಮಾಣ ಅಂದರೆ ಮೊದಲು ೧೦೦% ಪ್ರತಿಷತ ಸಾಗುವಳಿ ಇದ್ದು, ಇವಾಗ ೭೫% ಪ್ರತಿಷತ ಸಾಗುವಳಿ ಇದೆ ಎಂದು ಭೀರೆಶ್ವರ ಟ್ರೇಡರ್‍ಸ ವಿತರಕ  ಬಸು ಸಗಾಯಿ ಪತ್ರಿಕೆಗೆ ಮಾಹಿತಿ ನೀಡಿದರು.
ಈ ಸಂದರ್ಬದಲ್ಲಿ ಝಳಕಿ ಗ್ರಾಮದ ಯುವನೇತಾರ ವಿನೋದ ಶಿರಶ್ಯಾಡ ಮಾತನಾಡಿ ನಮ್ಮ ಝಳಕಿ, ಬಳ್ಳೊಳ್ಳಿ, ಸುತ್ತಲಿನ ಗ್ರಾಮಗಳಲ್ಲಿ ಯಾವುದೆ ತರನಾದ ಅಭಾವ ಕಂಡು ಬಂದಿಲ್ಲ, ಆದರು ಸ್ವಲ್ಪ ಪ್ರಮಾಣದಲ್ಲಿ ಹೊಟೆಲಗಳಲ್ಲಿ ತೊಂದರೆಯಾಗಿದೆ, ಇದನ್ನು ಸರ್ಕಾರ ಕುಡಲೆ ವಿಚಾರಣೆಗೆ ತೆಗೆದುಕೊಂಡು, ತೊಂದರೆಯಾಗದಂತೆ ಯೋಜನೆ ರೂಪಿಸಬೆಕು, ಸಮಸ್ಸೆ ಉದ್ಭವಿಸುವ ಮುನ್ನ ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಸರ್ಕಾರ ಯೋಜನೆ ರುಪಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಬಳ್ಳೊಳ್ಳಿ ಗ್ರಾಮದ ಸಿದ್ದಾರಾಮ ವಾಲಿ ಮಾತನಾಡಿ ಕೇವಲ ಗ್ಯಾರಂಟಿಗಳ ಮಧ್ಯೆ ಸಿಲುಕಿ, ಸರ್ಕಾರ ಬೊಕ್ಕಸದಲ್ಲಿ ತೋಂದರೆಯಗಿದ್ದು, ಜನರ ಸಮಸ್ಸೆಗಳಿಗೆ ಸ್ಪಂದನೆ ಮಾಡುವಲ್ಲಿ ವಿಫಲತೆ ಕಾಣುತಿದೆ, ತೊಂದರಗೆಳಿಗೆ ಪರಿಹಾರ ಹುಡುಕಿ, ಜನರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸೊದು ಸರ್ಕಾರದ ಕೇಲಸ, ಸಧ್ಯ ಪೆಟ್ರೋಲ, ಡಿಸೆಲ್ ಯಾವುದೆ ಸಮಸ್ಸೆ ಆಗಿಲ್ಲ, ಆದರು ಮುಂದೆ ಸಮಸ್ಸೆಗಳು ಆಗದಂತೆ ನೊಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಬದಲ್ಲಿ ವಿಠ್ಠಲ ಸಗಾಯಿ, ಈರಣ್ಣ ಕಂಬಾರ, ಸದಾಶೀವ ರೇವತಗಾಂವ, ಸಿದ್ದು ಶಿರಶ್ಯಾಡ, ಪ್ರವೀಣ ಬಡಿಗೇರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article