ಯರಗಟ್ಟಿ: ಶ್ರೀರಾಮಚಂದ್ರ ಭಾರತೀಯ ಸಂಸ್ಕೃತಿಯ ಪ್ರತೀಕ. ಇಡೀ ಜಗತ್ತಿಗೆ ಆದರ್ಶ ಪುರುಷ ಎಂದು ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀ ಸೀತಾರಾಮ, ಲಕ್ಷ್ಮಣ, ಶ್ರೀ ಹನುಮಾನ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಹಾಠಾಪನೆಗೂ ನೂತನ ಶ್ರೀ ರಾಮ ಮಂದಿರ ಉದ್ಘಾಟನಾ ಸಮಾರಂಭದ ಸಾನಿದ್ಯ ವಹಿಸಿ ಮಾತನಾಡಿದ ಅವರು, ಶ್ರೀರಾಮ ಮಾನವೀಯ ಮೌಲ್ಯಗಳ ಸಕಾರ ಮೂರ್ತಿ, ಸನಾತನ ಸಂಸ್ಕ್ರತೀಯ ಪ್ರತೀಕ, ಆದರ್ಶ ಬದುಕನ್ನು ಹೇಗೆ ನಡೆಸಬೇಕು ಎಂಬುದನ್ನು ಜಗತ್ತಿಗೆ ತೊರಿಸಿಕೊಟ್ಟ ವಿನಯ ಮೂರ್ತಿ ಎಂದರು.ಶಿಂದೋಗಿ ಗುರು ನಿತ್ಯಾನಂದ ಸತ್ಸಂಗ ಆಶ್ರಮದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ಭಕ್ತಿಯಿಂದ ದೇವರ ನಾಮ ಸ್ಮರಣೆ ಮಾಡಿದಾಗ ಮಾತ್ರ ದೆವರ ಕರುಣೆ ಸಾಧ್ಯ ಎಂದು ಹೇಳಿದರು.
ಸಮಾಜ ಸೇವಕ ಪಂಚನಗೌಡ ದ್ಯಾಮನಗೌಡರ, ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಡ್ಡಿ ಮಾತನಾಡಿ, ಇಂದಿನ ಯುವಕರು ತಂದೆ ತಾಯಿ ಗುರು ಹಿರಿಯರನ್ನು ಗೌರವಿಸಿ ಅವರ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಂಡು ಮಾದರಿ ವ್ಯಕ್ತಿಗಳಾಗಿ ಎಂದರು. ಶ್ರೀಗಳನ್ನು, ಗಣ್ಯರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಇದಕ್ಕೂ ಮುಂಚೆ ಬೆಳಗ್ಗೆ ಗಣಪತಿ ಹೋಮ, ಪಂಚಾಮೃತ ಅಭಿಷೇಕ, ಪುಷ್ಹಾಪಾಲಂಕಾರ ಹಾಗೂ ವಸ್ತ್ರಾಲಂಕಾರ ಸೇವೆ ನಡೆಯಿತು. ಅನ್ನಸಂತರ್ಪಣೆ ನಡೆಯಿತು.
ಹಣ್ಣಿಕೇರಿ ಸಿದ್ದ ಶಿವಬಸವ ಮಠದ ಶರಣಮ್ಮ ತಾಯಿ, ಮಳ್ಳಿಕೇರಿ ರಾಮ ಮಂದಿರ ಕನ್ಹಯ್ಯ ದಾವೂಜೀದಾಸ ಪ್ರಭುಜೀ, ರಾಮ ಮಂದಿರ ಸೆವಾ ಸಮೀತಿ ಅದ್ಯಕ್ಷ ಫಕೀರಪ್ಪ ದಾಗನಾಯ್ಕರ ಅಧ್ಯಕ್ಷತೆ ವಹಿಸಿದ್ದರು, ಮುಖಂಡ ಶ್ರೆಯಸ ಮಾಮನಿ, ಪುಂಡಲೀಕ ಮೇಟಿ, ಸೋಮಲಿಂಗಪ್ಪ ಮುಗಳಿ, ನಿವೃತ್ತ ಶಿಕ್ಷಕ ಭರಮಪ್ಪ ಜಗಮೈನವರ, ಮೈತ್ರಾ ಹೊಂಗಲ, ಚಂದ್ರಯ್ಯ ಹಿರೇಮಠ, ಸಣಗೌಡ ಸಣಗೌಡ್ರ, ಮಹಾಂತೇಶ ಗೌಡರ, ಸೋಮಲಿಂಗಪ್ಪ ಚವಡಪ್ಪನವರ, ಪಕೀರಪ್ಪ ಸಣ್ಣಗೌಡರ, ಬಸವರಾಜ ಕುರಗುಂದ, ಭೀಮಪ್ಪ ಸತ್ಯನಾಯ್ಕರ, ಶಿವನಾಯ್ಕ ಸತ್ಯನಾಯ್ಕರ, ವಿಠ್ಠಲ ಹಲಗಲಿ, ಅಜ್ಜಪ್ಪ ನಾಯ್ಕರ, ಬಸಲಿಂಗಪ್ಪ ಚವಡಪ್ಪನವರ, ಬಸಪ್ಪ ಚವಡಪ್ಪನವರ, ಬಸವರಾಜ ಹಳೇಮನಿ, ಸಂಗ್ರಾಮ ಗೌಡರ ಮತ್ತಿತರಿದ್ದರು.


