ನೇಸರಗಿ. ಇಲ್ಲಿಗೆ ಸಮೀಪದ ಮತ್ತಿಕೊಪ್ಪ ಗ್ರಾಮದ ಪಿ ಕೆ ಪಿ ಎಸ್ ಉಪಾಧ್ಯಕ್ಷರು, ಬಿಜೆಪಿ ನಾಯಕರಾದ ಅಡಿವಪ್ಪ ಹೊಸಮನಿ ಇವರನ್ನು ಕಿತ್ತೂರು ಮಂಡಲ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷ ಸುಭಾಷ ಪಾಟೀಲ, ಹಾಗೂ ಪಕ್ಷದ ವರಿಷ್ಟರ ಸೂಚನೆಯ ಮೇರೆಗೆ ಅಡಿವಪ್ಪ ಹೊಸಮನಿ ಅವರನ್ನು ಕಿತ್ತೂರು ಬಿಜೆಪಿ ಮಂಡಲದ ರೈತ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಕಿತ್ತೂರು ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀಕರ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


