ಮಾ.೩೧ರಿಂದ ಗಚ್ಚಿನಮಠದ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ೧೦೫ನೇ ವರ್ಷದ ಜಾತ್ರಾ ಮಹೋತ್ಸವ: ಶಿವಬಸವ ಸ್ವಾಮಿಜಿ ಮಾಹಿತಿ

Pratibha Boi
ಮಾ.೩೧ರಿಂದ ಗಚ್ಚಿನಮಠದ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ೧೦೫ನೇ ವರ್ಷದ ಜಾತ್ರಾ ಮಹೋತ್ಸವ: ಶಿವಬಸವ ಸ್ವಾಮಿಜಿ ಮಾಹಿತಿ
WhatsApp Group Join Now
Telegram Group Join Now
ಅಥಣಿ:  ಸುಕ್ಷೇತ್ರ ಶ್ರೀ ಗಚ್ಚಿನಮಠದ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ೧೦೫ನೇ ವರ್ಷದ ಜಾತ್ರಾ ಮಹೋತ್ಸವವು ಮಾ.೩೧ ರಿಂದ ೬ರ ವರೆಗೆ ಅತ್ಯಂತ ಸಂಭ್ರಮದಿಂದ ಜರುಗಲಿದೆ. ಜಾತ್ರಾ ಮಹೋತ್ಸವ ಯಶಸ್ವಿಗೆ ಎಲ್ಲರೂ ಸಹಕರಿಸಬೇಕೆಂದು ಶಿವಬಸವ ಸ್ವಾಮಿಜಿ ಹೇಳಿದರು.
ಗಚ್ಚಿನಮಠದ ಮಹಾತಪಸ್ವಿ ಶ್ರೀ ಮುರುಘೇಂದ್ರ ಶಿವಯೋಗಿಗಳವರ ೧೦೫ನೇ ವರ್ಷದ ಜಾತ್ರಾ ಮಹೋತ್ಸವ ಜಾತ್ರೆಯ ಜಾಹಿರಾತು ಬಿಡುಗಡೆಗೋಳಿಸಿ ಗಚ್ಚಿನ ಮಠದ ಶಿವಬಸವ ಸ್ವಾಮಿಜಿ ಮಾತನಾಡಿ ಭವ್ಯ ಪರಂಪರೆ ದಿವ್ಯತೆಯ ಪುಣ್ಯಕ್ಷೇತ್ರವಾಗಿರುವ ಗಚ್ಚಿನ ಮಠವು ಧಾರ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಇತಿಹಾಸ ಹೊಂದಿದೆ ಹೀಗಾಗಿ ಜಾತ್ರಾ ಮಹೋತ್ಸವ ಅಂಗವಾಗಿ ಪ್ರತಿದಿನ ಪಲ್ಲಕ್ಕಿ ಉತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪ್ರವಚನ, ಸಂಗೀತ, ಶಿವಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮುರುಘೇಂದ್ರ ಶಿವಯೋಗಿಗಳ ಭವ್ಯ ರಥೋತ್ಸವವು ಎ.೩ರಂದು  ಸಂಜೆ ೭ ಗಂಟೆಗೆ ಜರುಗಲಿದೆ. ಇದರ ಅಂಗವಾಗಿ ವಿವಿಧ ರಾಜ್ಯಮಟ್ಟದ ಸ್ಪರ್ಧೆಗಳು, ಪಂದ್ಯಾವಳಿ ಮತ್ತಿತರ ಜಾನುವಾರಗಳ ಜಂಗೀ ಪ್ರದರ್ಶನ ನೆರವೆರಲಿದೆ. ತಾಲೂಕಾಡಳಿತದಿಂದ ಎಲ್ಲ ರೀತಿ ಸಹಕಾರ, ಪೋಲಿಸ ಇಲಾಖೆಯ ಸುವ್ಯವಸ್ಥೆ ಅಗತ್ಯವಿದೆ. ರಥೋತ್ಸವ ದಿನ ಮಧ್ಯಪಾನ ನಿಷೇದ ಮಾಡಿದರೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ವೇಳೆ ಜಾತ್ರಾ ಕಮಿಟಿಯ ಅಧ್ಯಕ್ಷ ಶಿವಾನಂದ ದಿವಾನಮಳ ಮಾತನಾಡಿ ಶಾಂತಿ ಮತ್ತು ಸೌಹಾರ್ದತೆಗೆ ಅಥಣಿ ತಾಲೂಕು ಹೆಸರುವಾಸಿಯಾಗಿದೆ ಏಕೆಂದರೆ ಇದು ಮಹಾತಪಸ್ವಿಗಳ ನಾಡು ಹೀಗಾಗಿ ಮುರುಘೇಂದ್ರ ಶಿವಯೋಗಿಗಳ ಜಾತ್ರೆಯನ್ನ ಅತ್ಯಂತ ವಿಜೃಂಬಣೆಯಿAದ ಆಚರಿಸಿ ಯಶಸ್ವಿಗೊಳಿಸೊಣ. ಪ್ರತಿ ವರ್ಷದಂತೆ ಜರುಗುವ ಜಾನುವಾರು ಪ್ರದರ್ಶನ, ಸ್ಪರ್ಧೆಗಳು ನಡೆಯಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಊರುಗಳಿಂದ ಬರುತ್ತಾರೆ ಇದು ಜಿಲ್ಲೆಯಲ್ಲಿ ಮಾದರಿಯಾಗಿದೆ. ಜಾತ್ರೆಯ ನಿಮಿತ್ಯವಾಗಿ ನೂರಾರು ಯುವಕರು ಪಾದರಕ್ಷೆ ಇಲ್ಲದೆ ಒಂದು ವಾರ ಕಾಲ ಸೇವೆಯಲ್ಲಿ ತೊಡಗುವರು ಅದರಂತೆ ಯಾವುದೇ ತೊಂದರೆಯಾಗದಂತೆ ಪೊಲಿಸ ಇಲಾಖೆಯವರು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಜಾತ್ರೆಯನ್ನ ಯಶಸ್ವಿಗೊಳಿಸಬೇಕು ಎಂದು ಹೇಳಿದರು
ಈ ವೇಳೆ ಶ್ರೀಮಠದ ಭಕ್ತರು, ಗಣ್ಯರು, ವ್ಯಾಪಾರಸ್ಥರು, ಯುವಕರು ಪಾಲ್ಗೋಂಡಿದ್ದರು.
WhatsApp Group Join Now
Telegram Group Join Now
Share This Article