ಕಲ್ಯಾಣ ಕರ್ನಾಟಕ ಸಭೆಗೆ ಬಳ್ಳಾರಿ ಶಾಸಕರು ಗೈರು

MK HasiruKranti
ಕಲ್ಯಾಣ ಕರ್ನಾಟಕ ಸಭೆಗೆ ಬಳ್ಳಾರಿ ಶಾಸಕರು ಗೈರು
WhatsApp Group Join Now
Telegram Group Join Now
ಬಳ್ಳಾರಿ, ಮಾ.25: ನಿನ್ನೆ ಸಂಜೆ ವಿಧಾನಸೌಧದಲ್ಲಿ ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷ ಬಿ. ಆರ್. ಪಾಟೀಲ್ ಅವರು ಡಾ ಗೋವಿಂದಶಾಸಕರಾದ ಡಾ ಶ್ರೀನಿವಾಸ್ , ಲತಾ ಮಲ್ಲಿಜಕಾರ್ಜುನ್ ಹಾಗೂ ಕೃಷ್ಣ ನಾಯಕ್ ಭಾಗವಹಿಸಿದ್ದರು. ಗೋವಿಂದ ರಾವ್ ಅವರು ಸಲ್ಲಿಸಿದ ಡಾ ನಂಜುಂಡಪ್ಪ ವರದಿಯ ಅನುಷ್ಠಾನದ ಸ್ಥಿತಿ ಗತಿಯ ವರದಿಯನ್ನು ರಾಜ್ಯ ಸರ್ಕಾರ ಅಂಗೀಕಾರದ ನಂತರ ತೆಗೆದುಕೊಳ್ಳಬೇಕಾದ ಅಭಿವೃದ್ಧಿ ಕ್ರಮಗಳ ಬಗ್ಗೆ ಚರ್ಚಿಸಲು ಕರೆದಿದ್ದ ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಚೊಚ್ಚಲ ಸಭೆಗೆ ಬಳ್ಳಾರಿ ಜಿಲ್ಲೆಯ ಯಾವ ಶಾಸಕರೂ ಪಾಲ್ಗೊಂಡಿಲ್ಲ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್, 371 (ಜೆ) ಅನುಷ್ಠಾನ ಸಂಪುಟ ಉಪಸಮಿತಿಯ ಅಧ್ಯಕ್ಷರೂ ಆದ ಸಚಿವ ಶರಣ ಪ್ರಕಾಶ್ ಪಾಟೀಲ್, ೨೦ ಕ್ಕೂ ಹೆಚ್ಚು ಶಾಸಕರು , ಅಹಿಕಾರಿಗಳು ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡರು ಭಾಗವಹಿಸಿದ್ದರು.
ಸಭೆಯಲ್ಲಿ ಹಾಜರಿದ್ದ. ವಿಜಯನಗರ ಜಿಲ್ಲೆಯ ಶಾಸಕರಾದ ಡಾ ಶ್ರೀನಿವಾಸ್, ಲತಾ ಮಲ್ಲಿಜಕಾರ್ಜುನ್ ಹಾಗೂ ಕೃಷ್ಣ ನಾಯಕ್ ಭಾಗವಹಿಸಿದ್ದರು. ಇತರೇ ಜಿಲ್ಲೆಗಳ ಶಾಸಕರೂ ಭಾಗವಹಿಸಿ 371(ಜೆ ) ಅನುಷ್ಠಾನದಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಗಮನ ಸೆಳೆದರು. ಈ ದಿಸೆಯಲ್ಲಿ ತೆಗೆದುಕೊಂಡಿರುವ ಮತ್ತು ಮುಂದಿನ ದಿನಗಳಲ್ಲಿ ಕ್ರಮ ವಹಿಸುವ ಬಗ್ಗೆ ಅಜಯ್ ಸಿಂಗ್ ಹಾಗೂ ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.
ಈ ಸಭೆ ಕರೆದ ಬಿ. ಆರ್. ಪಾಟೀಲ್ ಅವರ ಕ್ರಮವನ್ನು ಪಾಲ್ಗೊಂಡಿದ್ದ ಶಾಸಕರು ಪಕ್ಷಾತೀತವಾಗಿ ಶ್ಲಾಘಿಸಿ, ಅಭಿವೃದ್ಧಿ ಕೆಲಸಗಳಿಗೆ ಒಗ್ಗಟ್ಟಿನ ಅವಶ್ಯಕತೆಯನ್ನು ಒತ್ತಿ ಹೇಳಿದರು. ಅಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಕಲ್ಯಾಣ ಕರ್ನಾಟಕದ ಶಾಸಕರ ಸಭೆ ಕರೆಯಬೇಕೆಂದು ಸಲಹೆ ನೀಡಿದರು. ಇದಕ್ಕೆ ಬಿ. ಆರ್. ಪಾಟೀಲ್ ಒಪ್ಪಿಗೆ ಸೂಚಿಸಿದರು. ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಲಕ್ಷ್ಮಣ ದಸ್ತಿ , ಡಾ ರಜಾಕ್ ಉಸ್ತಾದ್, ಪನ್ನ ರಾಜ್ ಸಿರಿಗೇರಿ ಹಾಗೂ ಇತರರು ಭಾಗವಹಿಸಿ ತಮ್ಮ ಬಹು ದಿನಗಳ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.
WhatsApp Group Join Now
Telegram Group Join Now
Share This Article