ಕೌಶಲ್ಯ ಅಭಿವೃದ್ಧಿ ತರಬೇತಿ ಸಮಾರೋಪ ಕಾರ್ಯಕ್ರಮ.

MK HasiruKranti
ಕೌಶಲ್ಯ ಅಭಿವೃದ್ಧಿ ತರಬೇತಿ ಸಮಾರೋಪ ಕಾರ್ಯಕ್ರಮ.
WhatsApp Group Join Now
Telegram Group Join Now

 

ಬೈಲಹೊಂಗಲ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ  ನಯಾನಗರ ಗ್ರಾಮದ   ಶ್ರೀ ಸುಖ ದೇವಾನಂದ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಆರ್ಯ ವರ್ಕ್ ತಯಾರಿಕೆ ತರಬೇತಿಯನ್ನು  ಹಮ್ಮಿಕೊಂಡಿದ್ದು, ಅದರ  ಸಮಾರೋಪ ಸಮಾರಂಭದ  ಉದ್ಘಾಟಕರಾಗಿ   ತಾಲೂಕು ಯೋಜನಾಧಿಕಾರಿಗಳ  ವಿಜಯಕುಮಾರ, ಧಾರವಾಡ ರಾಯಾಪುರ ಜ್ಞಾನವಿಕಾಸ ತರಬೇತಿ ಸಂಸ್ಥೆಯ ಉಪನ್ಯಾಸಕಿಯಾದ ಶ್ರೀಮತಿ ಗೀತಾ ಮೇಡಂ, ತಾಲೂಕು ಜ್ಞಾನ ವಿಕಾಸ ಸಮನ್ವೇದಿಕಾರಿ, ಶ್ರೀಮತಿ ಶೈಲಾ ಜಕ್ಕಣ್ಣವರ, ವಲಯದ ಮೇಲ್ವಿಚಾರಕರಾದ ಮಹಾಂತೇಶ, ತರಬೇತಿ ಶಿಕ್ಷಕರಾದ ಶ್ರೀಮತಿ ಲಕ್ಷ್ಮಿ ಇವರ ಸಮ್ಮುಖದಲ್ಲಿ ದೀಪ  ಬೆಳಗಿಸುವ ಮೂಲಕ ಕಾರ್ಯಕ್ರಮ ಚಾಲನೆ ನೀಡಲಾಯಿತು.
          ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮೀನಾಭಿವೃದ್ಧಿ ಯೋಜನೆಯ   ತಾಲೂಕಾ ಯೋಜನಾಧಿಕಾರಿ  ವಿಜಯಕುಮಾರ ಮಾತನಾಡಿ   ಧ್ಯೇಯ ಉದ್ದೇಶಗಳ ಬಗ್ಗೆ ಆರೋಗ್ಯ ರಕ್ಷಾ ಸಂಪೂರ್ಣ ಸುರಕ್ಷಾ ಹಿಡುವಳಿ ತರಬೇತಿಯ ವಾರದ ಸಭೆ ದಾಖಲಾತಿ ನಿರ್ವಹಣೆ ಪ್ರಾಮುಖ್ಯತೆ ಬಗ್ಗೆ ಮತ್ತು ಜ್ಞಾನವಿಕಾಸ ಕೇಂದ್ರ ಸಭೆ ಕೇಂದ್ರ ನಿರ್ವಹಣೆ ಅಮ್ಮನವರು ನೀಡುವ ಪ್ರಮುಖ್ಯವಾದ ಮಾಹಿತಿ ಕಾರ್ಯಕ್ರಮಗಳ ಕುರಿತ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಸ್ವ ಉದ್ಯೋಗ ಮಾಡುವಲ್ಲಿ ತೊಡಗಿಸಿಕೊಳ್ಳಬೇಕು, ಬೇರೆ ಬೇರೆ ರೀತಿ ಕೃತಕ ಆಭರಣಗಳ ತಯಾರಿಕೆ, ಸೀರೆ, ಕುಚ್ಚು, ಫ್ಯಾಶನ್ ಡಿಸೈನ್ ಎಲ್ಲಾ ತರಬೇತಿಗಳು ತರಬೇತಿ ಸಂಸ್ಥೆಯಲ್ಲೂ ಕೂಡ ಸಿಗುವ ಬಗ್ಗೆ ತಿಳಿಸಿದರು. ತರಬೇತಿ ಪಡೆದುಕೊಂಡ ಸದಸ್ಯರಿಗೆ ಪ್ರಮಾಣ ಪತ್ರವನ್ನು  ಯೋಜನಾಧಿಕಾರಿಗಳು ವಿತರಿಸಿದರು.
 ಕಾರ್ಯಕ್ರಮದ ನಿರೂಪಣೆ ಜ್ಞಾನವಿಕಾಸ ಸಮನ್ವೇದಿಕಾರಿ  ಶೈಲಾ ಜೆ  ನೆರವೇರಿಸಿದರು,
WhatsApp Group Join Now
Telegram Group Join Now
Share This Article