ಮಹಾಲಿಂಗಪುರ : ಕರುನಾಡು ಅನೇಕ ಸರ್ವಶ್ರೇ? ದಾರ್ಶನಿಕರನ್ನು, ಶರಣರನ್ನು ಪಡೆದು ಧನ್ಯವಾಗಿದೆ. ಅವರಲ್ಲಿ ದೇವರ ದಾಸಿಮಯ್ಯನವರು ಒಬ್ಬರು ಎಂದು ಗುಲಬರ್ಗಾದ ಸೋಮೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ಬನಶಂಕರಿ ದೇವಸ್ಥಾನದಲ್ಲಿ ಹಟಗಾರ ಸಮಾಜದ ಆಶ್ರಯದಲ್ಲಿ ನಡೆದ ದೇವರ ದಾಸಿಮಯ್ಯ್ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ, ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬ ರಾಮನಾಥ. ಈ ರೀತಿ ನಿಸರ್ಗದೊಂದಿಗೆ ಜೀವಿಗಳಿಗೆ ಸಂಬಂಧ ಬೆಸೆಯುವ ಅವರ ವಚನಗಳು ಮನು?ನನ್ನು ಎಚ್ಚರಿಸುತ್ತಿವೆ.ಅವರು ರಾಮನಾಥ ಅಂಕಿತದೊಂದಿಗೆ ೧೭೦ ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ ಎಂದರು.
ನಂತರ ಮಾತನಾಡಿದ ಸ್ಥಳೀಯ ಭ್ರಹ್ಮಾ ವಿದ್ಯಾಶ್ರಮದ ಸಹಜಾನಂದ ಶ್ರೀಗಳು ಕಲಬುರ್ಗಿ ಜಿಲ್ಲೆ ಮುದನುರಿನಲ್ಲಿ ಜನಿಸಿ ನೆಯ್ಗೆ ಕಾಯಕ ಮಾಡುತ್ತಾ ವಚನ ಕಾಯಕಕ್ಕೆ ಒಂದು ತಳಹದಿ ಒಂದು ಪರಂಪರೆ ಹಾಕಿಕೊಟ್ಟಆದ್ಯ ವಚನಕಾರ. ಅವರು ತಮ್ಮ ವಚನಗಳ ಸಾಹಿತಿಕ ಗುಣ ಹಾಗೂ ಮೌಲ್ಯಗಳಿಂದಾಗಿ ಬಸವಪೂರ್ವದ ಶ್ರೇ? ವಚನಕಾರ.ದಾಸಿಮಯ್ಯನವರ ವಚನಗಳು ಸಂಕ್ಷಿಪ್ತತೆ ಸರಳತೆ ಮತ್ತು ಗಹನವಾದ ಅರ್ಥ ಒಳಗೊಂಡಿವೆ, ಸಮಾಜದ ಡೊಂಕುಗಳನ್ನು ಬಾಹ್ಯ ಆಚರಣೆಗಳನ್ನು ನೇರವಾಗಿ ಪ್ರಶ್ನಿಸುವ ವೈಚಾರಿಕ ಧೋರಣೆ ಹೊಂದಿವೆ ಎಂದರು.
ಬನಶಂಕರಿದೇವಸ್ಥಾನದಲ್ಲಿ ಮಹಿಳೆಯರು ದೇವರ ದಾಸಿಮಯ್ಯನವರ ಭಾವಚಿತ್ರವನ್ನು ತೊಟ್ಟಿಲಲ್ಲಿ ಹಾಕಿ ತೂಗಿ ಎಸರಿಡುವ ಮೂಲಕ ಮತ್ತು ದಾಸಿಮಯ್ಯನವರ ತತ್ವಾದರ್ಶಗಳನ್ನು ಸಾರುವ ಮೂಲಕ ಅವರ ಜಯಂತಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು.
ಪುರಸಭೆಯಲ್ಲಿ ಆಚರಣೆ : ಪುರಸಭೆಯಲ್ಲಿ ಹಾಗೂ ಶಾಂತಿನಿಕೇತರ ಕಾಲನಿ ಹತ್ತಿರ ಇರುವ ದೇವರ ದಾಸಿಮಯ್ಯ ವೃತ್ತದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀಶೈಲಪ್ಪ ಬಾಡನವರ, ನಾರಾಯಣ ಕಿರಗಿ, ಲಕ್ಕಪ್ಪ ಚಮಕೇರಿ, ಮಲ್ಲಪ್ಪ ಬಾವಿಕಟ್ಟಿ, ಶಿದಗಿರೇಪ್ಪ ಕಾಗಿ, ರಾಜು ಚಮಕೇರಿ, ರವಿ ಜವಳಗಿ, ಎಸ್.ಐ ನುಚ್ಚಿ, ಆಶೋಕ ಬಾಣಕಾರ, ಮಹಾದೇವ ಹುಣಶ್ಯಾಳ, ಮಲ್ಲಪ್ಪ ನಿಂಗರಗಿ, ಶ್ರೀಲಪ್ಪ ಕಿರಗಟಗಿ, ಸತೀಶ ಸೋರಗಾಂವಿ, ಚಂದ್ರು ಕಾಗಿ, ಶಂಕರ ಅಂಬಿ, ಬಿ.ಸಿ ಪೂಜೇರಿ, ಜಿ.ಎಸ್.ಗೊಂಬಿ, ರಾಜೇಶ ಭಾವಿಕಟ್ಟಿ, ಡಾ,ಎಸ್.ಕಡ್ಡಿಮನಿ, ವಿಜಯ ಬಾಡನವರ ಸೇರಿದಂತೆ ಹಲವರು ಇದ್ದರು.


