ಮೂಡಲಗಿ : ಪಟ್ಟಣದ ಶ್ರೀ ಶಿವಬೋಧರಂಗ ಮಠದಲ್ಲಿ ಏ. ೭ರಂದು ಮೂಡಲಗಿ ಪಟ್ಟಣಕ್ಕೆ ಆಗಮಿಸುತ್ತಿರುವ ಶ್ರೀ ಸತ್ಯಸಾಯಿ ಪ್ರೇಮವಾಹಿನಿ ರಥಯಾತ್ರೆಯ ಕುರಿತು ಪ್ರಚಾರ ಬಿತ್ತಿ ಪತ್ರಗಳನ್ನು ಶ್ರೀ ದತ್ತಾತ್ರೇಯಬೋಧ ಸ್ವಾಮಿಜಿಗಳು ಭಾನುವಾರ ಬಿಡುಗಡೆ ಮಾಡಿ ಪ್ರಚಾರಕ್ಕೆ ಚಾಲನೆ ನೀಡಿದರು. ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಮೂಡಲಗಿ ಸಂಚಾಲಕ ಹನುಮಂತ ಸೊರಗಾವಿ, ಕೆ.ಬಿ.ನಾವಳ್ಳಿ, ರವಿ ಬಟಕುರ್ಕಿ, ಲಕ್ಷ್ಮಣ ಕಂಕಣವಾಡಿ, ವೆಂಕಟೇಶ ಪತ್ತಾರ, ರವಿ ನಂದಗಾಂವಿ, ಶಿವರುದ್ರ ಮಿಲಾನಟ್ಟಿ, ಲಿಂಗಪ್ಪ ಗಾಡವಿ ಉಪಸ್ಥಿತರಿದ್ದರು.


