ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗಾಗಿ “ದಶಕದ ಶ್ರೇಷ್ಠ ಕಾದಂಬರಿ ಸ್ಪರ್ಧೆ”

MK HasiruKranti
ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗಾಗಿ “ದಶಕದ ಶ್ರೇಷ್ಠ ಕಾದಂಬರಿ ಸ್ಪರ್ಧೆ”
WhatsApp Group Join Now
Telegram Group Join Now

 

ಹೊಸಪೇಟೆ : ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕೃತಿಕ ೧೨ನೇ ಸಮ್ಮೇಳನವು ನಡೆಯಲಿದೆ. ಇದರ ಸವಿನೆನಪಿಗಾಗಿ “ದಶಕದ ಶ್ರೇಷ್ಠ ಕಾದಂಬರಿ ಆಯ್ಕೆಗಾಗಿ ಸ್ಪರ್ಧೆ” ನಡೆಯಲಿದೆ.

೨೦೧೫ ರಿಂದ ೨೦೨೫ ರವರೆಗೆ ಪ್ರಕಟವಾದ ಇತಿಹಾಸ, ಸಾಮಾಜಿಕ, ಪತ್ತೆದಾರಿ, ಚರಿತ್ರೆ, ಕೌಟುಂಬಿಕ, ಪೌರಾಣಿಕ, ವೈಚಾರಿಕ, ವೈಜ್ಞಾನಿಕ, ವ್ಯಕ್ತಿಚರಿತ್ರೆ , ಸಾಹಸಮಯ ಹೀಗೆ ಯಾವುದೇ ಪ್ರಾಕಾರದ ಪ್ರಕಟವಾದ ಕಾದಂಬರಿಗಳು, ಈ ಸ್ಪರ್ಧೆಗೆ ಅರ್ಹ.
ಪ್ರಕಟಿತ ತಮ್ಮ ಕಾದಂಬರಿಗಳ ೩ ಪ್ರತಿಯೊಂದಿಗೆ, ಸಂಪೂರ್ಣ ಬಯೋಡಾಟಾ, ಭಾವಚಿತ್ರದೊಂದಿಗೆ ದಿನಾಂಕ ೧೫-೧೦-೨೦೨೬ ರೊಳಗೆ ಸಂಸ್ಥೆಯ ವಿಳಾಸಕ್ಕೆ ಕಳುಹಿಸಬೇಕು.

ಸಂಸ್ಥೆಯ ವಿಳಾಸ : ಅಧ್ಯಕ್ಷರು, ಕಾದಂಬರಿ ಸ್ಪರ್ಧೆ ವಿಭಾಗ, ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ.) ನಂ. ೪೬೮/ಸುರ್ವೆ, ೧೩ನೇ ಮುಖ್ಯರಸ್ತೆ, ೩ನೇ ಹಂತ, ಮೋದಿ ಸರ್ಕಲ್-ತಿಮ್ಮಯ್ಯ ರಸೆ?ತ, ಮಂಜುನಾಥನಗರ, ಬೆಂಗಳೂರು-೫೬೦೦೧೦. ಮೊ : ೯೮೪೫೩೦೭೩೨೭.

ಆಯ್ಕೆಯಾದ ೧೦ ಕೃತಿಗಳಿಗೆ ತಲಾ ೫೦೦೦ ರೂ. ನಗದು ಬಹುಮಾನದೊಂದಿಗೆ ರಾಷ್ಟ್ರಮಟ್ಟದ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗೌರವವಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Share This Article