ನೇಸರಗಿ. ಅದ್ಬುತ ರಾಮಾಯಣ ಬರೆದ ಅದ್ಬುತ ಕವಿ ಋಷಿ ಮಹರ್ಷಿ ವಾಲ್ಮೀಕಿ ಋಷಿಗಳು ರಾಮಾಯಣ ರಚಿಸಿ ದೇಶ, ವಿದೇಶದಲ್ಲಿ ಅದರ ವಸ್ತುಸ್ಥಿತಿಯನ್ನು ಜನರಿಗೆ ತಿಳಿಸಿ, ಆ ಕೃತಿಯಲ್ಲಿ ಕೆಡಕುಗಳಿಂದ ಆಗುವ ದುಷ್ಟರ ಸಂಹಾರದ ಬಗ್ಗೆ ವಿವರಣೆ ನೀಡಿ ಅದ್ಬುತ ರಾಮಾಯಣ ರಚಿಸಿ ಇಂದು ಅವರು ಅಜರಾಮರ ಆಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಅವರು ರವಿವಾರದಂದು ಸಮೀಪದ ಸುತಗಟ್ಟಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಮಫಲಕ ಉದ್ಘಾಟನೆ ನೆರವೇರಿಸಿ ಮಾತನಾಡಿ ಆ ಮಹಾನ ಪುರುಷರ ಆದರ್ಶ, ತತ್ವ, ಸಿದ್ದಾಂತಗಳನ್ನು ಅಳವಡಿಸಿಕೊಂಡು ಮುಂದೆ ಬರಬೇಕು ಎಂದರು.
ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ ಮಾತನಾಡಿ ಇಡಿ ಜಗತ್ತಿಗೆ ರಾಮಾಯಣ ಪರಿಚಯಿಸಿದರು ಮಹರ್ಷಿ ವಾಲ್ಮೀಕಿ ಋಷಿಗಳು, ಅವರು ರಾಮಾಯಣ ರಚಿಸದಿದ್ದರೆ ಇಂದು ರಾಮಾಯಣ ಅರಿವು ನಮಗೆ ಆಗುತ್ತಿರಲಿಲ್ಲ, ರಾಮಾಯಣದಲ್ಲಿನ ಒಳ್ಳೆಯ ಗುಣಗಳನ್ನು ನಾವು ನೀವೆಲ್ಲರೂ ತಿಳಿದುಕೊಂಡು ಜೀವನದಲ್ಲಿ ಮುಂದೆ ಬರಬೇಕು,ಈ ಮಹರ್ಷಿ ವಾಲ್ಮೀಕಿ ನಾಮಫಲಕ ಕಾರ್ಯರೂಪಕ್ಕೆ ಬರಲು ಶ್ರಮಿಸಿದ ವಾಲ್ಮೀಕಿ ಜನಾಂಗದ ಸಾಧನೆ ಅಪಾರ ಎಂದರು.
ಕಾರ್ಯಕ್ರಮದಲ್ಲಿ ನೇಸರಗಿ ಮಾಜಿ ಜಿ ಪಂ ಸದಸ್ಯರಾದ ನಿಂಗಪ್ಪ ಅರಿಕೇರಿ,ಗ್ರಾಮದ ಹಿರಿಯರಾದ ಮಲ್ಲಿಕಾರ್ಜುನ ತುಬಾಕಿ , ಉಮೇಶ ಪಾಟೀಲ ವಕೀಲರು,ಮಹೇಶ ಪಾಟೀಲ, ವಾಲ್ಮೀಕಿ ಸಂಘದ ಅಧ್ಯಕ್ಷ ಸದಾಶಿವ ರಾಮ್ಕಿ , ಮಾರುತಿ ಕಲ್ಲೂರ, ಮಹಾಂತೇಶ ಪರಗನ್ನವರ, ಶಂಕರಗೌಡ ಪಾಟೀಲ,ಚಂದ್ರಪ್ಪ ರಾಮ್ಕಿ, ವಿಠ್ಠಲ ರಾಮ್ಕಿ, ರಮೇಶ ರಾಮ್ಕಿ , ಚನ್ನಬಸಯ್ಯ ಮಠಪತಿ, ಸೇರಿದಂತೆ ಎಲ್ಲ ಸಮಾಜದ ಮುಖಂಡರು, ವಾಲ್ಮೀಕಿ ಸಮಾಜದ ಜನತೆ, ಗ್ರಾಮಸ್ಥರು ಪಾಲ್ಗೊಂಡಿದ್ದರು.


