ಮುಗಳಖೋಡ. (20) ಶುಕ್ರವಾರ 20 ರಂದು ಕುಡಚಿ ಮತ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಒಂದು ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಮಹೇಂದ್ರ ತಮ್ಮಣ್ಣವರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಪಟ್ಟಣದ ವಾರ್ಡ್
ಸಂಖ್ಯೆ 2 ರಲ್ಲಿ ಪರಿಶಿಷ್ಟ ಪಂಗಡದ ಜನ ವಸತಿ ಕಾಲೋನಿಯಲ್ಲಿ 50 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಸಮೀಪದ ಕುರಬಗೋಡಿ ಗ್ರಾಮದ ಚಿಕ್ಕೂಡ ಕಾಲುವೆಯ ಪಕ್ಕದ ತೋಟದ ರಸ್ತೆ ಸುಧಾರಣೆಗೆ 10 ಲಕ್ಷ ,ಮಾರಕೊಡಿ ಗ್ರಾಮದ ನೀರಲಕೊಡಿ ರಸ್ತೆಯ 18.76 ಲಕ್ಷ ವೆಚ್ಚದ ಡಾಂಬರೀಕರಣ ಕಾಮಗಾರಿ, ಹಾಗೂ ಸವಸುದ್ದಿ ಗ್ರಾಮದ ಕೆಎಚ್ ಪಿ ಎಸ್ ಸನದಿ ತೋಟ ನೂತನ ಶಾಲಾ ಕೊಠಡಿ 9.50 ಲಕ್ಷದ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ನಂತರ ಹಿಡಕಲ್ ಸೂರಣ್ಣವರ ತೋಟದ ನೂತನ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭ ನೆರವೇರಿಸಿ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಗಾಗಿ ಹಗಲಿರುಳು ನಿಮ್ಮ ಸೇವೆ ಮಾಡುವುದಾಗಿ ಗ್ರಾಮಸ್ಥರನ್ನು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಇನ್ನೂ ಅವಶ್ಯ ಕಾಮಗಾರಿಗಳನ್ನು ಮಂಜೂರಿ ಮಾಡಿ ನಿಮ್ಮ ಸೇವೆ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ((((((ಮಂಜುಳವ್ವಾ ಕೋಳಿ ,ಮುತ್ತವ್ವ ತಳವಾರ,ಮಾರುತಿ ತಳವಾರ ನಮಗೆ ವಾಸಿಸಲು ಮನೆ,ಸರಿಯಾಗಿ ನೀರು , ರಸ್ತೆ, ಶೌಚಾಲಯ ಹಾಗೂ ಅವಶ್ಯ ಮೂಲ ಸೌಕರ್ಯ ವಿಲ್ಲದೆ ಜೀವನ ನಡೆಸಲು ಸಾಧ್ಯ ವಾಗುತ್ತಿಲ್ಲ ಬೇಗ ಬೇಡಿಕೆ ಪೂರೈಸಿ ಎಂದು ಗ್ರಾಮಸ್ಥರ ಪರ ಶಾಸಕರಿಗೆ ಮನವಿ ಮಾಡಿದರು. ಶಾಸಕರು ಪಂಚ ಗ್ಯಾರಂಟಿ ನಿಮಗೆ ತಲುಪುತ್ತಿಲ್ಲವೇ ಹಾಗೆ ನಿಮ್ಮ ಬೇಡಿಕೆ ಪೂರೈಸುತ್ತೆನೆ ಎಂದು ಹೇಳಿದರು.)))))
ಈ ಸಂದರ್ಭದಲ್ಲಿ ಕುಡಚಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ಪುರಸಭೆ ಸದಸ್ಯರಾದ ಪರಗೌಡ ಖೆತಗೌಡರ, ರಮೇಶ ಯಡವಣ್ಣವರ, ಮಹಾವೀರ ಕುರಾಡೆ, ಪರುಶುರಾಮ ಕಟಕೋಳ,ನಾಮನಿರ್ದೇಶಿತ ಸದಸ್ಯರಾದ ಗಂಗಪ್ಪ ಗೋಕಾಕ, ವಿಠ್ಠಲ ಯಡವಣ್ಣವರ, ಅಶೋಕ ಕದಂ, ಸತ್ಯಪ್ಪಾ ಮಹೀಶವಾಡಗಿ,ಪಿಕೆಪಿಎಸ್ ಬ್ಯಾಂಕಿನ ಉಪಾಧ್ಯಕ್ಷ ಹಣಮಾಸಾಹೇಬ ನಾಯಕ, ಮುಪ್ಪಯ್ಯ ಹಿರೇಮಠ, ಶಂಬು ಚೇರ್ಮನ್, ಶಾಂತೇಶ್ ಬಾಬಣ್ಣವರ, ರಾಮಚಂದ್ರ ಕುರಾಡೆ, ಪ್ರವೀಣ ಶಾಹ,ಬಸವರಾಜ ಬಂಡಿಗಣಿ, ಶ್ರೀಶೈಲ ಗೋಕಾಕ, ಚೇತನ ನಡುವಿನಕೆರಿ, ಇತರರು ಇದ್ದರು


