|
11:44 AM (1 hour ago)
|
|
||
|
||||
ಬಳ್ಳಾರಿ, ಮಾ.13:ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ 10-03-2026 ರಂದು ವಿಶ್ವ ಮಹಿಳಾ ದಿನಾಚರಣೆ ಯನ್ನು “ಗೆಲುವಿಗೆ ಕೊಡುಗೆ ” ಎಂಬುವ ಶೀರ್ಷಿಕೆಯಡಿ ಆಚರಿಸಲಾಯಿತು.
ಕಿಷ್ಕಿಂದ ಟ್ರಸ್ಟ್ ನ ಸಂಸ್ಥಾಪಕರಾದ ಶಾಮ ಪವಾರ್, ಮಾತನಾಡುತ್ತಾ “ಪ್ರತಿಯೊಬ್ಬ ಮಹಿಳೆಯೂ ಲಭ್ಯವಿರುವ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಮತ್ತು ಸಮಾಜಕ್ಕೆ ಹೊಸ ನಾವೀನ್ಯತೆಯನ್ನು ಸೃಷ್ಟಿಸಬೇಕು ಮತ್ತು ಮಹಿಳೆಯರ ಶ್ರೇಷ್ಠತೆಯ ಪರಿಣಾಮವನ್ನು ಸೃಷ್ಟಿಸಬೇಕು.” ವಿಜ್ಞಾನಿ ಡಾ. ಶಿಲ್ಪಾ ಎಚ್, ಮಾತನಾಡುತ್ತಾ “ಪ್ರತಿಯೊಬ್ಬ ಮಹಿಳೆಯೂ, ಅದು ಮಗುವಾಗಲಿ, ದೊಡ್ಡವರಾಗಲಿ ಅಥವಾ ವೃದ್ಧರಾಗಲಿ, ಮೊದಲು ತಮ್ಮ ಉಳಿವಿಗಾಗಿ ಉತ್ತಮ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಬೇಕು, ಆಗ ಮಾತ್ರ ಭಾರತವು ಕುಟುಂಬದಿಂದ ಸಮಾಜಕ್ಕೆ ಬಲವಾಗಿ ಬೆಳೆಯಲು ಸಾಧ್ಯ ” ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ವೀ.ವಿ.ಸಂಘದ ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಮಾತನಾಡುತ್ತಾ “ಶತಮಾನಗಳಿಂದ ಯಾವುದೇ ಕಠಿಣ ಪರಿಸ್ತಿತಿಗಳಲ್ಲಿ ತಮ್ಮ ಮಹೀಳೆಯರಲ್ಲಿ ಚರ್ಚಿಸಿ ಅಂತಿಮ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಮಹೀಳೆಯರುನ್ನು ನೀರ್ಣಯಾತ್ಮಕ ಸ್ಥಾನದಲ್ಲಿ ನಡೆದುಕೊಂಡು ಬಂದಿರುತ್ತಾರೆ.” ಉಪಪ್ರಾಂಶುಪಾಲರಾದ ಡಾ.ಸವಿತಾ ಸೊನೋಳಿ, ಇವರು “ಎಂಜಿನೀರಿಂಗ್ ಕಾಲೇಜುಗಳಂತಹ ವೃತ್ತಿಪರ ಸಂಸ್ಥೆಗಳಲ್ಲಿ ಕೆಲಸಮಾಡುತ್ತಿರುವ ಮಹಿಳೆಯರಿಗೆ ಸರ್ಕಾರದ ಅನುದಾನಗಳ ಬಗ್ಗೆ ಆಳವಾಗಿ ವಿವರಿಸುತ್ತಾ “ಮಹಿಳೆಯರಿಗೆ ಪ್ರಕೃತಿಯು ನೀಡಿದ ವರ ಮಲ್ಟಿಟಾಸ್ಕಿಂಗ್ – ಬಹುಕಾರ್ಯರಗಳು ಮಾಡಬಲ್ಲರು, ಅವರಲ್ಲಿ ಹೆಚ್ಚಿನ ನಂಬಿಕೆ ಹೋಂದಿದೆ. ಹಾಗು ಮಾತೃತ್ವದ ಜವಾಬ್ದಾರಿಯನ್ನು ನೀಡಿದೆ” ಎಂದು ನುಡಿದರು. ಮಹಾವಿದ್ಯಾಲಯದ ಮಹಿಳಾ ಕೋಶದ ಸಂಯೋಜಕರು ಡಾ.ಎಂಎಸ್. ಶೋಭಾ, “2026 ರ ಅಂತರರಾಷ್ಟ್ರೀಯ ಮಹಿಳಾ ದಿನದ ಥೀಮ್ “ಗೆಲುವಿಗೆ ಕೊಡುಗೆ”. ಈ ಅಭಿಯಾನವು ಸಾಮೂಹಿಕ ಬೆಂಬಲದ ಶಕ್ತಿಯನ್ನು ಎತ್ತಿ ತೋರಿಸುತ್ತದೆ, ವ್ಯಕ್ತಿಗಳು ಮತ್ತು ಸಂಸ್ಥೆಗಳು ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಹೆಚ್ಚಿಸಲು ಮಹಿಳೆಯರಲ್ಲಿ ಸಮಯ, ಸಂಪನ್ಮೂಲಗಳು, ಮಾರ್ಗದರ್ಶನ ಮತ್ತು ಅವಕಾಶಗಳನ್ನು ಹೂಡಿಕೆ ಮಾಡಲು ಪ್ರೋತ್ಸಾಹಿಸುತ್ತದೆ. ಮಹಿಳೆಯರು ಅಭಿವೃದ್ಧಿ ಹೊಂದಿದಾಗ, ಸಮಾಜವು ಲಾಭ ಪಡೆಯುತ್ತದೆ ಎಂದು ಇದು ಒತ್ತಿಹೇಳುತ್ತದೆ.” ಎಂದು ನುಡಿದರು ”” ಈ ಎಂಜಿನೀರಿಂಗ್ ಕಾಲೇಜುನಲ್ಲಿ ಕೆಲಸ ಮಾಡುತ್ತಿರುವ, ಉನ್ನತ ಡಾಕ್ಟರೇಟ್ ಪದವಿ ಪಡೆದಿರುವ, ಅಲ್ಲದೇ ವಿಶೇಷ ಸಾಧನೆಗಳು ಮಾಡಿರುವ ಮಹಿಳೆಯರಾದ ಡಾ ಶಿವಮ್ಮ, ಡಾ ದೀಪಾ.ಬಿ, ಡಾ ಸಾಯಿ ಮಾಧವಿ, ಮಹಾವಿದ್ಯಾಲಯದ ಮಹಿಳಾ ಕೋಶ -ಆರ್.ವೈ.ಎಂ.ಈ.ಸಿ ವಿಭಾಗದಿಂದ ಸನ್ಮಾನಿಸಲಾಯಿತು. ಈ ಸಮಾರಂಭದಲ್ಲಿ ಎಲ್ಲಾ ವಿಭಾಗಗಳಿಂದ, ಮಹೀಳಾ ಶಿಕ್ಷಕ ಮತ್ತು ವಿದ್ರ್ಯಾರ್ದಿಗಳು ವೃಂದದವರು ಭಾಗವಹಿಸಿದರು ಕು. ಅಪೂರ್ವ ಮತ್ತು ತಂಡದವರು ಪ್ರಾರ್ಥಿಸಿದರು. ಶ್ರೀಮತಿ ಸೌಮ್ಯ ನಿರೂಪಿಸಿದರು,



