ಒಳ ಮೀಸಲಾತಿಯಲ್ಲಿ  ಉಪವರ್ಗೀಕರಣ ಮಾಡಿ ಪರಿಷ್ಕೃತ ರೋಸ್ಟರ್  ಜಾರಿಗೊಳಿಸಿ ; ಕುಡುತಿನಿ ಪಂಪಾಪತಿ 

A B
By A B
ಒಳ ಮೀಸಲಾತಿಯಲ್ಲಿ  ಉಪವರ್ಗೀಕರಣ ಮಾಡಿ ಪರಿಷ್ಕೃತ ರೋಸ್ಟರ್  ಜಾರಿಗೊಳಿಸಿ ; ಕುಡುತಿನಿ ಪಂಪಾಪತಿ 
WhatsApp Group Join Now
Telegram Group Join Now
ಬಳ್ಳಾರಿ, ಮಾ.11:  ರಾಜ್ಯದಲ್ಲಿನ 56,342 ಖಾಲಿ ಹುದ್ದೆಗಳ ಭರ್ತಿಯನ್ನು 15% ಒಳ ಮೀಸಲಾತಿ ಸ್ಪಷ್ಟವಾಗಿ ಅನ್ವಯಿಸಿ ಮಾತ್ರ ಕೈಗೊಳ್ಳಬೇಕು ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯ ಆಧಾರದ ಮೇಲೆ ಪರಿಶಿಷ್ಟ ಜಾತಿಗಳನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಉಪವರ್ಗೀಕರಣ ಮಾಡಿ ಪರಿಷ್ಕೃತ ರೋಸ್ಟರ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಬಾಬು ಜಗಜೀವನ್ ರಾಮ್ ಸಂಘಟನೆಯ  ರಾಜ್ಯ ಅಧ್ಯಕ್ಷ ಕುಡುತಿನಿ ಪಂಪಾಪತಿ ಒತ್ತಾಯಿಸಿದರು
ಇಂದು ನಗರದಲ್ಲಿ  ಬಳ್ಳಾರಿ ಜಿಲ್ಲಾ ಮಾದಿಗ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ವತಿಯಿಂದ  ಹಮ್ಮಿಕೊಂಡಿದ್ದ
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜ್ಯ ಸರ್ಕಾರ
56,342 ಖಾಲಿ ಹುದ್ದೆಗಳ ಭರ್ತಿಯಲ್ಲಿ ಪರಿಶಿಷ್ಟ ಜಾತಿಗಳ 15% ಒಳ ಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ಉಪವರ್ಗೀಕರಣದಂತೆ ಜಾರಿಗೊಳಿಸಬೇಕೆಂದು  ಆಗ್ರಹಿಸಿದರು.
 ಪ್ರತಿಭಟನೆಯು ನಗರದ ನಾರಾಯಣರಾವ್ ಪಾರ್ಕ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ರಾಯಲ್ ಸರ್ಕಲ್‌ವರೆಗೆ ಸಾಗಿದ್ದು, ಕೆಲಕಾಲ ಪ್ರತಿಭಟನಾಕಾರರು ಧರಣಿ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವಂತೆ ಮನವಿ ಪತ್ರವನ್ನು ತಾನಿಕ ಅಧಿಕಾರಿಗಳ ಮೂಲಕ ನೀಡಿದರು.
ಮನವಿ ಪತ್ರದಲ್ಲಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿರುವುದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ನ್ಯಾಯ ಎಂದು ತಿಳಿಸಲಾಗಿದೆ. ಆದರೆ ಫೆ.27, 2026ರಂದು ಹೊರಡಿಸಿರುವ ಸರ್ಕಾರದ ಆದೇಶದಲ್ಲಿ ಒಳ ಮೀಸಲಾತಿ ಸಂಬಂಧಿತ ಹಿಂದಿನ ಆದೇಶಗಳನ್ನು ಅನ್ವಯಿಸದೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಬೇಕೆಂದರು.
 ಅದೇ ರೀತಿಯಾಗಿ ಶೇಕಡ  56ರಷ್ಟು  ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ನ್ಯಾಯಾಲಯದ ಮುಂದೆ ಸರ್ಕಾರ ದೃಢವಾದ ಕಾನೂನು ವಾದ ಮಂಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸರ್ಕಾರ ತಕ್ಷಣ ಸ್ಪಂದಿಸದಿದ್ದಲ್ಲಿ ರಾಜ್ಯಾದ್ಯಂತ ತೀವ್ರ ಹೋರಾಟ ರೂಪಿಸಲಾಗುವುದು ಎಂದು  ಸಮಿತಿಯ ಮುಖಂಡರು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
 ಈ ಸಂದರ್ಭದಲ್ಲಿ ಜಯ ಗೋಪಾಲ್ ಎಕೆ ಹುಲುಗಪ್ಪ, ಕಾರ್ಮಿಕ ಪರಿಷತ್ತಿನ ರಾಜ್ಯ ಅಧ್ಯಕ್ಷ ದೇವಾನಂದ್,  ವೆಂಕಟೇಶ್
ಮಾನಂದಿ ಕೊಟ್ಟಂ ವೆಂಕಟೇಶ್, ಈಶ್ವರ್ ಗುಡಿ ಚಂದ್ರ, ಹೊನ್ನಪ್ಪ ಸೇರಿದಂತೆ ಹಲವಾರು ಜನ ಮಾದಿಗ ಸಮುದಾಯದ ಮುಖಂಡರು ಮತ್ತು ಇತರರಿದ್ದರು.
WhatsApp Group Join Now
Telegram Group Join Now
Share This Article