ಮಹಾಲಿಂಗಪುರ : ತೇರದಾಳ್ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ನಗರದ ಹುಲಕುಂದ ಓಣಿ, ಪೋಸ್ಟ್ ಓಣಿ,ಬ್ಯಾಳಿ ಓಣಿ, ಬರಗಿ ಓಣಿಗಳಲ್ಲಿ ದಿನಾಂಕ ೧೮ ರಂದು ಬೆಳ್ಳಿಗೆ ಎಂಟು ಗಂಟೆಗೆ ಪಕ್ಷದ ಕಾರ್ಯಕರ್ತರೊಂದಿಗೆ ಸಂಚರಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.
ನಂತರ ಮಾತನಾಡಿದ ಶಾಸಕ ಸಿದ್ದು ಸವದಿ ಸಾರ್ವಜನಿಕರು ತಮ್ಮ ನಿತ್ಯದ ಅವಶ್ಯಕತೆಗಳಾದ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ, ಗಟಾರ ಸ್ವಚ್ಛತೆ ಇಲ್ಲ ಕೆಲವೊಂದು ಓಣಿಯಲ್ಲಿ ನಡೆದಾಡಲು ಪರದಾಡುವ ಪರಿಸ್ಥಿತಿ ಇದದ್ದು ಕಂಡು ಬಂತು, ಕೆಲವೊಂದಿ? ಜನ ತಮ್ಮ ಅವಶ್ಯಕತೆ ಮುಗಿದ ಮೇಲೆ ನೀರನ್ನು ಗಟಾರಕ್ಕೆ ಬಿಟ್ಟು ಮುಂದಿನವರಿಗೆ ನೀರು ಹೋಗಲಿ ಎನ್ನುವ ಕನಿ? ಮಾನವಿತೆಯನ್ನು ಕಳೆದುಕೊಂಡಿದ್ದು ಕಂಡು ಬಂತು, ಸಾರ್ವಜನಿಕರು ಸಹಕಾರ ಮನೋಭಾವನೆ ಬೆಳೆಸಿ ಕೊಂಡು ತಮ್ಮ ಅವಶ್ಯಕತೆ ಮುಗಿದ ಮೇಲೆ ಮುಂದಿನವರಿಗೆ ಅನುಕೂಲ ಆಗುವಂತೆ ನಲ್ಲಿಗಳನ್ನು ಬಂದ ಮಾಡಿ ಸಹಕರಿಸಬೇಕು ಎಂದು ಶಾಸಕರು ಹೇಳಿದರು.
ಅಲ್ಲದೆ ಅವಶ್ಯಕತೆ ಇಲ್ಲದ ಜಾಗೆಯಲ್ಲಿರುವ ನೀರಿನ ಟ್ಯಾಂಕಗಳನ್ನು ಅವಶ್ಯಕತೆ ಇರುವ ಕಡೆಗೆ ಸ್ಥಳಾಂತರಿಸಿ. ಮತ್ತು ೨೪ * ೭ ನೀರಿನ ಜೋಜನೆಯವರು ಪೈಪ ಅಳವಡಿಕೆ ಸಲುವಾಗಿ ಸಿಕ್ಕ ಸಿಕ್ಕಲ್ಲಿ ರಸ್ತೆ ಅಗೆದು ಹಾಗೆ ಬಿಟ್ಟಿದ್ದಾರೆ. ಇದರಿಂದ ರಸ್ತೆಯಲ್ಲಿ ಜನರಿಗೆ ತಿರುಗಾಡಲು ತೊಂದರೆಯಾಗುತ್ತದೆ ಕಾರಣ ಎಲ್ಲ ರಸ್ತೆಗಳನ್ನು ಸ್ವಚ್ಚಗೋಳಿಸುವಂತೆ ಸಂಭಂದ ಪಟ್ಟ ಅಧಿಕಾರಿಗೆ ಸೂಚಿಸಿದರು. ಮತ್ತು ನಗರದಲ್ಲಿ ಕುಡಿಯುವ ನೀರು ಮತ್ತು ಗಟಾರ ಸ್ವಚ್ಚವಾಗಿರುವಂತೆ ನೋಡಿಕೊಳ್ಳಲು ಮುಖ್ಯಾಧಿಕಾರಿಯವರಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ನಾಮದೇವ ಲಮಾಣಿ,ಮಾಜಿ ಸದಸ್ಯರಾದ ಶೇಖರ ಅಂಗಡಿ, ಚನ್ನಬಸು ಯರಗಟ್ಟಿ, ಮುಖಂಡರಾದ, ಶಿವಾನಂದ ಅಂಗಡಿ, ಈರಪ್ಪ ದಿನ್ನಿಮನಿ,ಮಲ್ಲು ದಲಾಲ, ಪ್ರಶಾಂತ ಮುಖ್ಯನ್ನವರ, ಮಹೇಶ ಜಿಡ್ಡಿಮನಿ, ರಾಮು ಪಾತ್ರೋಟ, ಪುರಸಭೆ ಸಿಬ್ಬಂದಿ, ಉಪ ಸಿಬ್ಬಂದಿ, ನೀರು ಸರಬುರಾಜ ವಿಭಾಗ, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.
ವಾರ್ಡಗಳ ಪರಿವಿಕ್ಷಣೆ ಮಾಡಿದ ಶಾಸಕ ಸಿದ್ದು ಸವದಿ


