ಸಂಗೀತವೇ ರಸಿಕರ ರಸದೌತಣ……

Sandeep Malannavar
ಸಂಗೀತವೇ ರಸಿಕರ ರಸದೌತಣ……
WhatsApp Group Join Now
Telegram Group Join Now
ಬಳ್ಳಾರಿ:-  ಸಂಗೀತವೇ ರಸಿಕರ ರಸದೌತಣ ಸಂಗೀತವೇ ತಪಸ್ಸು ಸಂಗೀತವೇ ಧ್ಯಾನ ಎಂದು   ದಿನಾಂಕ 17 ಎರಡು 2026 ಸಂಜೆ ಬಳ್ಳಾರಿ ನಗರದ ಗೊಗ್ಗರಟ್ಟಿಯಲ್ಲಿರುವ ಶಿವ ದೀಕ್ಷಾ ಮಂದಿರದಲ್ಲಿ ಶ್ರೀ ಹುಲಿಕುಂಟೆರಾಯ ತಗಲಗೊಂಬೆ ಕಲಾತಂಡದವರು ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡ ಹರ ಹರ ಶಂಭೋ ಕಾರ್ಯಕ್ರಮವನ್ನು ಸಂಶೋಧಕ ಕರ್ನಾಟಕ ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಟಿ ಹೆಚ್ ಎಂ ಬಸವರಾಜ್ ರವರು ಕ್ಯಾಸಿಯ ನುಡಿಸಿ ಮಾತನಾಡಿದರು ಇಂದು ಅಮಾವಾಸ್ಯೆ ರಾತ್ರಿ ಶಿವನ ಧ್ಯಾನದಲ್ಲಿ ಮುಳುಗುವುದರಿಂದ ಮನಸೋ ವಿಕಸಿತವಾಗಿ ಚಂಚಲತೆ ದೂರವಾಗಿ ಮನುಷ್ಯತ್ವ ಹುಟ್ಟಿಕೊಳ್ಳುತ್ತದೆ ಶಿವ ಸ್ಮರಣೆ ಅದ್ವಿತೀಯವಾದ ಶಕ್ತಿ ಶಿವನಾಮ ಹೊಂದಿದ್ದರೆ ಸಾಕು ಎಲ್ಲಾ ಕಷ್ಟಗಳು ತಾವಾಗಿಯೇ ದೂರವಾಗುತ್ತವೆ ತ್ರಿಮೂರ್ತಿಗಳಲ್ಲಿ ಶಿವನಿಗೆ ವಿಶಿಷ್ಟವಾದ ಸ್ಥಾನವಿದೆ ಶಿವ ತಾಂಡವ ನೃತ್ಯದಿಂದ ಮೂರು  ಲೋಕಗಳ ನಡುಗುತ್ತವೆ ಶಿವ ಮಂತ್ರ ದೇಹದಲ್ಲಿ ಸ್ನಾಯುಗಳಿಗೆ ಕ್ರಿಯಾಶೀಲತೆಯನ್ನು ಕೊಡುತ್ತವೆ ಸಂಗೀತಕ್ಕೆ ಅಷ್ಟೊಂದು ಶಕ್ತಿ ಇದೆ ಎಂದು ತಿಳಿಸಿದರು ಶಿವ ದೀಕ್ಷಾ ಮಂದಿರದ ಧರ್ಮಾಧಿಕಾರಿ ಏ ರಾಜಶೇಖರ್ ಗೌ ಡಾ ಗೊಗ್ಗರಟ್ಟಿಯ ಮುಖಂಡರಾದ ಹೊನ್ನೂರ್ ಸ್ವಾಮಿ ರಂಗನ ಟಿ ಎಳ್ಳಾರ್ತಿ ಚಾಮುಂಡಿ ಗಾಯಕ ಜಡೇಶ್ ಎಮ್ಮಿಗನೂರ್ ಶಿವಕುಮಾರ್ ಕೀಬೋರ್ಡ್  ದೇವಲಾಪುರ ವಿರೂಪಾಕ್ಷಪ್ಪ ಮುಖಂಡ ವೆಂಕಟೇಶ್ ವೇದಿಕೆ ಮೇಲೆ ಉಪಚುತರಿದ್ದರು ಎಂ ಪುರುಷೋತ್ತಮ್ ಕಾರ್ಯಕ್ರಮ ನಿರೂಪಿಸಿದರು ಸ್ವಾಗತಿಸಿದರು ಎಳ್ಳಾರ್ತಿ ಚಾಮುಂಡಿ ಭಕ್ತಿ ಪ್ರಧಾನವಾದ ರಂಗಗೀತೆಗಳನ್ನು ಹಾಡಿದರು ಜಡೇಶ್  ಎಮ್ಮಿಗನೂರ್ ಇವರ ಜನಪದ ಮತ್ತು ವಚನ ಗಾಯನ ಮಾಡಿದರು ಈ ಕೀ ಬೋರ್ಡ್ ನಲ್ಲಿ  ಶಿವಕುಮಾರ್ ವಿರುಪಾಕ್ಷಪ್ಪ ದೇವಲಾಪುರ ತಬಲಾ ಸಾಬ್ ನೀಡಿದರು ತೊಗಲಗೊಂಬೆಕೆ ಹೊನ್ನೂರ್ ಸ್ವಾಮಿ ಕೊನೆಯಲ್ಲಿ ವಂದಿಸಿ ಎಲ್ಲರನು ಸನ್ಮಾನಿಸಿ ಗೌರವಿಸಿದರು ಶಿವನಿಗೆ ಮಹಾಮಂಗಳಾರತಿ ನಂತರ ಎಲ್ಲರಿಗೂ ಪ್ರಸಾದ ವಿತರಣೆಯಾಯಿತು
WhatsApp Group Join Now
Telegram Group Join Now
Share This Article