ಬೆಳಗಾವಿ ಫೆ., 03- ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ಬೆಂಗಳೂರು ಇದರ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ್ ಅವರು ಮಾರುತಿ ವೀರಪ್ಪ ವಿಜಯನಗರ ಅವರನ್ನು ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಿ ನಿನ್ನೆ ನಡೆದ ರಾಜ್ಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಅಧಿಕೃತ ಘೋಷಣೆ ಮಾಡಿದರು.
ಈ ಮೊದಲು ಯಾದಗಿರಿ ರಾಜ್ಯ ವೈಜ್ಞಾನಿಕ ಸಮ್ಮೇಳನ 2025 ಯಶಸ್ವಿಗೆ ಶ್ರಮಿಸಿದ ಎಲ್ಲರನ್ನು ಆಮಂತ್ರಿಸಿದ ಲೋಕೋಪಯೋಗಿ ಸಚಿವರು ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಆದ ಸತೀಶ ಜಾರಕಿಹೊಳಿ ಅವರು ತಮ್ಮ ಬೆಂಗಳೂರು ಗೃಹ ಕಚೇರಿಯಲ್ಲಿ ಎಲ್ಲರನ್ನೂ ಗೌರವಿಸಲು ಔತಣಕೂಟ ಏರ್ಪಡಿಸಿ ಪ್ರಶಂಶಿಸಿದರು. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬರುವ ಡಿಸೆಂಬರದಲ್ಲಿ ಬೆಳಗಾವಿಯಲ್ಲಿ ನಡೆಯುವ ರಾಜ್ಯ ವೈಜ್ಞಾನಿಕ ಸಮ್ಮೇಳನ 2026 ಯಶಸ್ವಿಗೆ ಸಲಹೆಗಳನ್ನು ನೀಡಿದರು. ಸಚಿವರ ಸೂಚನೆ ಮೇರೆಗೆ ಅಖಂಡ ಬೆಳಗಾವಿ ಜಿಲ್ಲೆಯ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ಗೋಕಾಕ ತಾಲೂಕಿನ ಪಾಮಲದಿನ್ನಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಪಿಕೆಪಿಎಸ್ ಸೊಸೈಟಿ ಮಾಜಿ ಅಧ್ಯಕ್ಷರು, ಲ್ಯಾಂಡ್ ಟ್ರೂಬುನಲ್ ಗೋಕಾಕ ಹಾಲಿ ಸದಸ್ಯರು ಮತ್ತು ಶ್ರೀಮತಿ ನೀಲಮ್ಮ ವೀರಪ್ಪ ವಿಜಯನಗರ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಚೇರಮನ್ನರು ಆದ ಮಾರುತಿ ವೀರಪ್ಪ ವಿಜಯನಗರ ಅವರನ್ನು ನೇಮಕ ಮಾಡಿ ನಿನ್ನೆ ನಡೆದ ರಾಜ್ಯ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಪವಾಡ ಬಯಲು ಪ್ರಖ್ಯಾತಿಯ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜ ಅವರು ಅಧಿಕೃತ ಘೋಷಣೆ ಮಾಡಿದರು. ಎಲ್ಲ ಆಡಳಿತ ಮಂಡಳಿಯವರು ಮತ್ತು ಎಲ್ಲ ಜಿಲ್ಲಾಧ್ಯಕ್ಷರು ಸಹಮತ ಸೂಚಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಡಾ. ಹುಲಿಕಲ್ ನಟರಾಜ, ನೂತನ ಬೆಳಗಾವಿ ಜಿಲ್ಲಾ ಅಧ್ಯಕ್ಷ ಮಾರುತಿ ವಿಜಯನಗರ, ಬಸವರಾಜ ಹಟ್ಟಿಗೌಡರ, ಪ್ರೊ. ನಾಗರತ್ನ ಖನ್ನೆ ನಾಯ್ಕರ, ಸಂಗಮೇಶ ಹಚಡದ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆಯುವ ರಾಜ್ಯ ವೈಜ್ಞಾನಿಕ ಸಮ್ಮೇಳನ ಯಶಸ್ವಿಗೆ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್, ಮಾನವ ಬಂಧುತ್ವ ವೇದಿಕೆ,ಭಾರತ ಸೇವಾದಳ ಸೇರಿ ಉನ್ನತ ಸಂಚಾಲಕ ಸಮಿತಿ ಮಾಡಿ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲು ಸಚಿವರಾದ ಸತೀಶ ಜಾರಕಿಹೊಳಿ ಅವರು ಸೂಚಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ ಬೆಳಗಾವಿ ವಿಭಾಗದ ನಿರ್ದೇಶಕರಾದ ಬಸವರಾಜ ಹಟ್ಟಿಗೌಡರ್ (ಕೊಳವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


