ಬಳ್ಳಾರಿ ಜ., 14: ಮಕ್ಕಳಿಗೆ ಪಠ್ಯ ಜೊತೆ ಸಹಪಠ್ಯ ಕೂಡ ಅವಶ್ಯಕ : ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು
ಸಂಜೀವರಾಯನಕೋಟೆ : ಮಕ್ಕಳು ಕೇವಲ ಪಠ್ಯ ವಿಷಯಗಳ ಕಡೆ ಸೀಮಿತವಾಗದೆ ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿ ತೋರಬೇಕೆಂದು ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ಕರೆ ನೀಡಿದರು.
ಅವರು ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕನ್ನಡ ತಾಯಿ ಭುವನೇಶ್ವರಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೈತಿಕ ಮೌಲ್ಯಗಳು ಕುಸಿಯುತ್ತಿರುವ ಕಾಲ ಘಟ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ನೈತಿಕತೆ ಮೂಡಿಸಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿ ತಿದ್ದಿ ತೀಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ.
ಪೋಷಕರು ಮತ್ತು ಸಮಾಜ ಶಿಕ್ಷಕರಿಗೆ ಬೆನ್ನೆಲುಬಾಗಿ ನಿಲ್ಲಬೇಕು. ಅವರು ತೆಗೆದು ಕೊಳ್ಳುವ ಒಳ್ಳೆಯ ತೀರ್ಮಾನಗಳನ್ನು ಬೆಂಬಲಿಸಬೇಕು ಗೌರವಿಸಬೇಕು.
ಕನ್ನಡ ಪರ ಚಟುವಟಿಕೆಗಳು ಹೆಚ್ಚಾಗಿ ತಾಲ್ಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ನಡೆಯುತ್ತವೆ.ಆ ಸಾಲಿನಲ್ಲಿ ಸಂಜೀವರಾಯನಕೋಟೆ ಸೇರಿಕೊಂಡಿದ್ದು ಪ್ರಶಂಸನೀಯ ಎಂದು ಕೊಂಡಾಡಿದರು.
ಮೆರವಣಿಗೆ:
ಬೆಳಿಗ್ಗೆ10:30 ಗಂಟೆಯಿಂದ ಕನ್ನಡ ತಾಯಿ ಭುವನೇಶ್ವರಿಗೆ ಪೂಜೆ ನೆರೆವೇರಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಸಮ್ಮ ಕನ್ನಡ ಧ್ವಜ ಹಿಡಿದು101 ಪೂರ್ಣಕುಂಬಕ್ಕೆ ಚಾಲನೆ ನೀಡಿದಳು.
ಮೆರವಣಿಗೆ ಗ್ರಾಮದ ಎಲ್ಲಾ ಓಣಿಗಳಲ್ಲಿ ಸಂಚರಿಸಿತು.
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ, ಜಗಜ್ಯೋತಿ ಬಸವಣ್ಣ, ಶಿವಶರಣೆ ಅಕ್ಕಮಹಾದೇವಿ, ದಾಸಶ್ರೇಷ್ಠ ಭಕ್ತ ಕನಕದಾಸ,ಬಾಬಾ ಸಾಹೇಬ್ ಅಂಬೇಡ್ಕರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ರಾಷ್ಟ್ರ ಕವಿಗಳ ಸ್ತಬ್ಧ ಚಿತ್ರಗಳು ನೋಡುಗರ ಕಣ್ಮನ ಸೆಳೆದವು.
ಊರಿನ ಜಗಲಿ ದೇವರಾಜ, ಕಾವಲಿ ಹೊನ್ನೂರಪ್ಪ, ಹೊನ್ನೂರಸ್ವಾಮಿ,ಕೆ.ಪಿ.ಸುಂಕಣ್ಣ,ಗ್ ರಂಥಾಲಯ ಕೆ.ಸಿದ್ದಪ್ಪ,ನಾಗೇಂದ್ರ, ಗಂಗಾಧರ, ಜಿ.ಗಂಗಾಧರ, ನಾಗರಾಜ,ಶ್ರೀಕಾಂತ್, ವಿಜಯ, ಅಮರೇಶ ಗೌಡ,ಸುಂಕಪ್ಪ,ಶಿಕ್ಷಕರಾದ ಬೆಣಕಲ್ ಬಸಪ್ಪ, ಹಲಕುಂದಿ ಕ್ಲಸ್ಟರ್ ಸಿ.ಆರ್. ಪಿ ಶ್ರೀನಿವಾಸ,ಚೆನ್ನಮ್ಮ, ಕೆಂಚಪ್ಪ, ಸುಮತಿ, ನಾಗಪ್ಪ, ವೈಶಾಲಿ, ಉಮ್ಮೆಹಾನಿ,ಶಶಮ್ಮ ಜೀತೇಶ್ವರಿ,ಗುರು ಪ್ರಸಾದ್, ಸುಮ,ಮಹೇಶ್ ಹಾಗೂ ವಿದ್ಯಾರ್ಥಿ ಪ್ರತಿನಿಧಿ ಎನ್. ಪ್ರದೀಪ್ ಆಶಾಕಾರ್ಯಕರ್ತೆಯರು,ವಿವಿಧ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ತಂದರು ಊರಿನ ಹಿರಿಯರು ಮುಖಂಡರು ಉಪಸ್ಥಿತರಿದ್ದರು.
ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ರವಿ ಚೇಳ್ಳಗುರ್ಕಿ ಪ್ರಾಸ್ಥವಿಕವಾಗಿ ಮಾತನಾಡಿದರು ಸ್ವಾಗತ ಭಾಷಣವನ್ನು ಶಿಕ್ಷಕಿ ಶೆಶಮ್ಮ ಮಾಡಿದರೆ,ಶಿಕ್ಷಕರಾದ ಗುರು ಪ್ರಸಾರದ ವಂದಿಸಿದರು.ನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಬೆಳೆದವು


