ರನ್ನ ಬೆಳಗಲಿ:ಜ.೦೫., ಪಟ್ಟಣದ ದತ್ತಾತ್ರೇಯ ದೇವಸ್ಥಾನದ ಹತ್ತಿರವಿರುವ,ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಶನಿವಾರ ದಂದು ೨ನೇ ಪಾಲಕರ,ಶಿಕ್ಷಕರ ಮಹಾಸಭೆ ಜರಗಿತು.
ಮುಖ್ಯಶಿಕ್ಷಕರಾದ ಆರ್ ಡಿ ಗಲಗಲಿ ಪಾಲಕರನ್ನ ಉದ್ದೇಶಿಸಿ ಮಾತನಾಡಿ. ಮಕ್ಕಳಿಗಾಗಿ ಶ್ರಮಿಸುವ ನೀವು, ಮಕ್ಕಳ ಕಡೆ ಗಮನಹರಿಸಬೇಕು. ಶಾಲೆಯಲ್ಲಿ ಕಲಿಯುವ ಮಕ್ಕಳು. ಮನೆಯಲ್ಲಿ ಎ? ಅಭ್ಯಾಸ ಮಾಡುತ್ತಾರೆ. ಎಂಬುದು ನಮಗೆ ನಿಮ್ಮಿಂದ ಮಾತ್ರ ತಿಳಿಯುತ್ತದೆ. ಆದರಿಂದ ಅವರೊಂದಿಗೆ ತಮ್ಮ ಸಮಯವನ್ನು ನೀಡಿ,ಕಲಿಕೆಯ ಲೋಪ ದೋ?ಗಳನ್ನು ಗುರುತಿಸಿ. ವಿ?ಯಕ್ಕೆ ಸಂಬಂಧಿಸಿದ ಶಿಕ್ಷಕರಿಗೆ ಮಾಹಿತಿ ನೀಡಿದರೆ.ಮಗುವಿನ ಕಲಿಕೆ ಉತ್ತಮಗೊಳ್ಳುತ್ತದೆ ಎಂದು ತಿಳಿಸಿದರು.
ಯಮುನಪ್ಪ ಆಲಗೂರ ಎಸ್ ಡಿ ಎಂ ಸಿ ಅಧ್ಯಕ್ಷ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉಪಾಧ್ಯಕ್ಷೆ ಪ್ರೇಮಾ ಲೋಹಾರ ಮಾತನಾಡಿ ಇಂತಾ ಸಭೆಗಳಲ್ಲಿ ಪಾಲಕರು ಪೂರ್ಣ ಪ್ರಮಾಣದಲ್ಲಿ ಹಾಜರಾಗಬೇಕು.ಶಿಕ್ಷಕರು ನೀಡಿದ ನಿಯಮಗಳನ್ನು ಮಕ್ಕಳ ಪ್ರಗತಿಗಾಗಿ ನಾವು ಅನುಸರಿಸಬೇಕು ಎಂದು ಹೇಳಿದರು.
ಎಸ್ ಎಚ್ ಮಾದರ,ಎಸ್ ಪಿ ಜೋಶಿ,ಆರ್ ಡಿ ಬಂಡಿ,ಎಚ್ ಬಿ ಜಮಾದಾರ,ಆರ್ ಟಿ ದಂಡಿನ,ಆರ್ ಎಮ್ ನೀಲಣ್ಣವರ ಶಿಕ್ಷಕರು ತರಗತಿಯವಾರು ಮಕ್ಕಳ ಪ್ರಗತಿಯ ನೋಟವನ್ನು ತಿಳಿಸಿದರು.
ಶಿವಲಿಂಗಪ್ಪ ಹೊಸಪೇಟೆ,ಲಕ್ಕವ್ವ ನಾವಿ,ಮೌನೇಶ ಬಡಿಗೇರ,ರಾಜೇಶ್ವರಿ ಪುರಾಣಿಕ,ಲಕ್ಷ್ಮೀ ನಾವಿ ಹಾಗೂ ಎಸ್ಡಿಎಂಸಿ ಸರ್ವ ಸದಸ್ಯರು, ಪಾಲಕ,ಪೋ?ಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


