ನೇಸರಗಿ: ಸರದಾರ್ ವಲ್ಲಭಬಾಯಿ ಪಟೇಲ್ ಅವರ ೧೫೦ ನೇ ಜಯಂತಿ ಅಂಗವಾಗಿ ರಾಷ್ಟ್ರೀಯ ಏಕತಾ ದಿವಸವನ್ನು ೩೧ ಅಕ್ಟೋಬರ್ ೨೦೨೫ ರಂದು ಐಸಿಎಆರ್-ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ಆಚರಿಸಲಾಯಿತು. ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ಮಾತನಾಡಿ, ರಾಷ್ಟ್ರೀಯ ಏಕತಾ ದಿವಸದ ಉದ್ದೇಶಗಳು ಹಾಗೂ ಮಹತ್ವ ಕುರಿತು ಮಾತನಾಡಿ, ದೇಶದ ಏಕತೆ, ಅಖಂಡತೆ ಮತ್ತು ದೇಶದಾದ್ಯಂತ ನಡೆಯುತ್ತಿರುವ ಆಚರಣೆಗಳ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಮಣ್ಣು ವಿಜ್ಞಾನಿ ಎಸ್. ಎಮ್. ವಾರದ ಅವರು, ಕೆವಿಕೆ ಸಿಬ್ಬಂದಿ, ಕೃಷಿ ಸಖಿಯರು ಹಾಗೂ ಕೆಎಲ್ಇ ಕೃಷಿ ಮಹಾವಿದ್ಯಾಲಯ ತೆನಿಕೊಳ್ಳ ವಿದ್ಯಾರ್ಥಿಗಳಿಗೆ ಏಕತಾ ಪ್ರತಿಜ್ಞೆ ಬೋಧಿಸಿದರು. ಎಲ್ಲರೂ ರಾ?ದ ಏಕತೆ ಮತ್ತು ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಂಗವಾಗಿ ಏಕತಾ ನಡಿಗೆ ಆಯೋಜಿಸಲಾಯಿತು. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಏಕತೆಯ ಘೋ?ಣೆಗಳೊಂದಿಗೆ ಉತ್ಸಾಹದೊಂದಿಗೆ ಭಾಗವಹಿಸಿದರು. ಇದೇ ವೇಳೆ ಕೇಂದ್ರದ ಕೃಷಿಗೆ ಸಂಬಂಧಪಟ್ಟ ವಸ್ತು ಪ್ರದರ್ಶನ, ನವೀನ ಕೃಷಿ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಪ್ರದರ್ಶಿಸಲಾಯಿತು. ಇದರಿಂದ ಸರದಾರ್ ಪಟೇಲ್ ಅವರ ರಾ? ಏಕತಾ ದೃಷ್ಟಿಕೋನವನ್ನು ಸ್ಮರಿಸಿ, ರಾ?ದ ಪ್ರಗತಿಗಾಗಿ ಎಲ್ಲರ ಸಹಕಾರ ಅಗತ್ಯತೆಯನ್ನು ಪುನರುಚ್ಚರಿಸಲಾಯಿತು.


