ಅಮರಾವತಿ, ಆಂಧ್ರಪ್ರದೇಶ: ಆಂಧ್ರಪ್ರದೇಶದ ಕರಾವಳಿಯಲ್ಲಿ ಮಂಗಳವಾರ ಸಂಜೆ ಮೊಂಥಾ ಚಂಡಮಾರುತವು ಭೂಕುಸಿತ ಉಂಟುಮಾಡಿದೆ. ನೆರೆಯ ಒಡಿಶಾದಲ್ಲಿಯೂ ಇದರ ಪರಿಣಾಮ ಕಂಡುಬಂದಿದೆ. ಅಲ್ಲಿನ 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ.
ಮಂಗಳವಾರ ಸಂಜೆ 7 ಗಂಟೆಯ ಸುಮಾರಿಗೆ ಭೂಕುಸಿತ ಪ್ರಕ್ರಿಯೆ ಪ್ರಾರಂಭವಾಯಿತು. ಬುಧವಾರ ಬೆಳಗಿನ ಜಾವ 2.30 ರ ಹೊತ್ತಿಗೆ, ಆಂಧ್ರಪ್ರದೇಶದ ಕರಾವಳಿ ಮೇಲೆ ಮೊಂಥಾ ಚಂಡಮಾರುತ ಅಪ್ಪಳಿಸಿದ್ದು, ನಂತರ ಅದು ದುರ್ಬಲಗೊಂಡಿದೆ. ಕಳೆದ ಆರು ಗಂಟೆಗಳಲ್ಲಿ ಚಂಡಮಾರುತವು ಗಂಟೆಗೆ 10 ಕಿ.ಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಚಲಿಸಿತು ಎಂದು ಭಾರತ ಹವಾಮಾನ ಇಲಾಖೆ (IMD) ಇಂದು ಬೆಳಗ್ಗೆ 5 ಗಂಟೆಗೆ ನೀಡಿರುವ ವರದಿಯಲ್ಲಿ ತಿಳಿಸಿದೆ.


