ಮೂಡಲಗಿ: ಮೂಡಲಗಿ ಹಾಗೂ ಗೋಕಾಕ ತಾಲೂಕಿನ ಗ್ರಾಮೀಣ ಪ್ರದೇಶಗಳ ಜನರು ಬಸ್ಗಳಲ್ಲಿ ಪ್ರಯಾಣ ಮಾಡುತ್ತಾರೆ. ಬಸ್ಗಾಗಿ ಕಾಯುವ ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗೆ ಬಸ್ಗಾಗಿ ಎಲ್ಲಿ ಕಾಯಬೇಕು, ಎಲ್ಲಿ ಕೂಡಬೇಕು ಅದು ಅನಿಶ್ಚಿತವಾಗಿತ್ತು ಅದು ನನ್ನ ಗಮನಕ್ಕೆ ಬಂದ ಮೇಲೆ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ೧೦೦ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದ್ದು ಅದರಲ್ಲಿ ಶೇ ೫೦ ರ? ಪೂರ್ಣಗೊಂಡಿವೆ ಎಂದು ರಾಜ್ಯಸಭೆ ಸಂಸದ ಈರಣ್ಣ ಕಡಾಡಿ ಹೇಳಿದರು.
ರವಿವಾರ ಅ.೨೬ ರಂದು ಅರಭಾವಿ ವಿಧಾನಸಭಾ ಮತಕ್ಷೇತ್ರದ ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ ಹಾಗೂ ಹುಣಶ್ಯಾಳ ಪಿ.ಜಿ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನದಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೇರವೇರಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲೆಯಾಧ್ಯಂತ ಎಲ್ಲಾ ಕಡೆ ಸಂಸದರ ಅನುದಾನವನ್ನು ಸಾಧ್ಯವಿದ? ಎಲ್ಲ ಕಡೆಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೂ ನಾನು ಅನುದಾನವನ್ನು ನೀಡುತ್ತಿದ್ದು ಕೇವಲ ಸಂಸದರ ನಿಧಿ ಅ? ಅಲ್ಲದೇ ಬೇರೆ ಬೇರೆ ಇಲಾಖೆಗಳಿಂದ, ಬೇರೆ ಬೇರೆ ಸಂಸ್ಥೆಗಳಿಂದ ವಿಶೇ? ಅನುದಾನವನ್ನು ತಂದು ನನ್ನ ಸೇವಾಧಿಯಲ್ಲಿ ಎ? ಸಾಧ್ಯವೊ ಅ? ಜನರಿಗೆ ಮುಟ್ಟಿಸುವಂತಹ ಪ್ರಾಮಾಣಿಕ ಪ್ರಯತ್ನ ಮುಂದುವರೆಯಲಿದೆ ಎಂದರು.
ಸಂಸದರ ನಿಧಿಯು ಗ್ರಾಮೀಣ ಪ್ರದೇಶ ಜನರ ಅಗತ್ಯಗಳನ್ನು ತಕ್ಷಣ ಪೂರೈಸುವ ಒಂದು ಅಕ್ಷಯ ಪಾತ್ರೆಯಾಗಿದ್ದು ಈ ನಿಧಿ ಅಡಿಯಲ್ಲಿ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್ ಕ್ಲಾಸ್, ಆರೋಗ್ಯ ಕ್ಷೇತ್ರದಲ್ಲಿ, ಜಿಮ್, ಆಂಬುಲೆನ್ಸ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮುದಾಯ ಭವನ, ಸಂಗೀತ ಕ್ಷೇತ್ರದಲ್ಲಿ ರಂಗ ಮಂದಿರ, ಪ್ರಯಾಣಿಕರಿಗೆ ಬಸ್ ತಂಗುದಾಣ ಹೀಗೆ ಹಲವಾರು ರೀತಿಯ ಕೆಲಸಗಳನ್ನು ಒದಗಿಸಿ ಕೊಡುವ ಮೂಲಕ ತಾಲೂಕಿನ ಎಲ್ಲ ಗ್ರಾಮಗಳಿಗೂ ಅನುದಾನವನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಇದೇ ಸಂದರ್ಭದಲ್ಲಿ ಹುಣಶ್ಯಾಳ ಪಿ.ಜಿ ಗ್ರಾಮದ ವೀರಭದ್ರೇಶ್ವರ ಹಾಗೂ ಮಾತಾ ಭದ್ರ ಕಾಳಿಕಾದೇವಿಯ ೧೦ನೇ ವ?ದ ಜಾತ್ರಾ ಮಹೋತ್ಸವ ನಿಮಿತ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಕಮೀಟಿ ವತಿಯಿಂದ ನೀಡಿದ ಸನ್ಮಾನವನ್ನು ಸ್ವೀಕರಿಸಿದರು.
ನಲ್ಲಾನಟ್ಟಿ ಗ್ರಾಮದ ಪ್ರಮುಖರಾದ ದಶರಥ ಪಾಟೀಲ, ಶಂಕರ ಜಾಗನೂರ, ಲಗಮಣ್ಣ ಕುಳ್ಳೂರ, ಮಾರುತಿ ಮೆಳವಂಕಿ, ಮಲ್ಲಪ್ಪಾ ಪೂಜೇರಿ, ರಂಗಪ್ಪ ಕುಳ್ಳೂರ, ಪ್ರಕಾಶ ಜಾಗನೂರ, ವಿಠ್ಠಲ ಮಡ್ಡೆಪ್ಪನ್ನವರ, ಸಿದ್ದಪ್ಪ ವಾಲಿಕಾರಿ ಬಳೋಬಾಳ ಗ್ರಾಮದ ಬಲವಂತ ಬೆಳವಿ, ಸುನೀಲ ಈರೇಶನವರ, ಗುರುಸಿದ್ದ ಪೋಟೆ, ವಿಠ್ಠಲ ಸುಣಧೋಳಿ, ಅಡಿವೆಪ್ಪ ಕಂಬಾರ, ಬೀರನಗಡ್ಡಿ ಗ್ರಾಮದ ಬಸವರಾಜ ಕೋಟಗಿ, ಅಲ್ಲಯ್ಯ ಪೂಜೇರಿ, ಗೌಡಪ್ಪ ಕೋಟಗಿ, ಸತ್ತೆಪ್ಪ ಕಳಜಕನ್ನವರ, ಕಲ್ಲಪ್ಪ ಪಾಗಾದ, ಪರಪ್ಪ ಕೋಟಗಿ, ಶಿವಗೊಂಡ ಬೋರಗಲ್, ರಮೇಶ ಸಂಪಗಾಂವ, ಹುಣಶ್ಯಾಳ ಪಿ.ಜಿ ಗ್ರಾಮದ ಮಂಜುಳಾ ಡಬ್ಬನ್ನವರ, ಬಾಳಪ್ಪ ನೇಸರಗಿ, ಸಿದ್ದಾರ್ಥ ಅಥಣಿ, ಮಹಾಂತೇಶ ರೊಡ್ಡನ್ನವರ, ಶಂಕರಯ್ಯ ಗುಡಿ, ಗಂಗಪ್ಪ ಡಬ್ಬನ್ನವರ, ಹಣಮಂತ ಶೆಕ್ಕಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


