ಧಾರವಾಡ: ರಾಜೀವ ಗಾಂಧಿ CBSE ಶಾಲೆಯಲ್ಲಿ ತಂದೆಯಿಂದರ ದಿವಸ ಅಂಗವಾಗಿ ಹಮ್ಮಿಕೊಂಡಂತ ವಿನೂತನ ಕಾರ್ಯಕ್ರಮದಲ್ಲಿ ಮಾಜಿಮಹಾಪೌರರು ಸಭಾನಾಯಕರಾದ ಈರೇಶ ಅಂಚಟಗೇರಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು.
ಮಕ್ಕಳ ತಂದೆಯಂದರು ತಮ್ಮ ಮಕ್ಕಳ ಜತೆ ವೇದಿಕೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು .
ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿಮಹಾಪೌರರು ತಂದೆ ಎಂದರೆ ನಮ್ಮ ಮೊದಲ ಗುರು, ಮೊದಲ ಸ್ನೇಹಿತ ಮತ್ತು ಜೀವನದ ಮೊದಲ ನಾಯಕ.
ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯ ಹಿಂದೆ ಅವರ ಆಶೀರ್ವಾದ ಮತ್ತು ಪ್ರೋತ್ಸಾಹ ಇರುತ್ತದೆ. ತಂದೆಯವರು ನಮಗೆ ಕಠಿಣತೆ ಕಲಿಸುತ್ತಾರೆ, ಏಕೆಂದರೆ ಜೀವನದಲ್ಲಿ ಬಲಿಷ್ಠರಾಗಬೇಕೆಂದು ಅವರಿಗೆ ಗೊತ್ತು.
ಇಂದು ಈ ವಿಶೇಷ ದಿನದಲ್ಲಿ ನಾವು ನಮ್ಮ ತಂದೆಯವರಿಗೆ ಧನ್ಯವಾದ ಹೇಳೋಣ —ನಮ್ಮ ಕನಸುಗಳನ್ನು ಸಫಲಗೊಳಿಸಿದಕ್ಕಾಗಿ, ಪ್ರೀತಿ ಮತ್ತು ಸಹನೆಗಾಗಿ, ಮತ್ತು ಯಾವಾಗಲೂ ನಮ್ಮ ಜೊತೆ ನಿಂತಿದ್ದಕ್ಕಾಗಿ ಅವರನ್ನು ಪ್ರತಿದಿನ ಸ್ಮರಿಸೋಣವೆಂದು ನುಡಿದರು.ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಮಾಜಿಮಹಾಪೌರರು ಹಾಗು ಗಣ್ಯಮಾನ್ಯರು ಬಹುಮಾನ ಹಾಗು ಪ್ರಶಸ್ತಿ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಮಾಜಿಮಹಾಪೌರರೊಂದಿಗೆ ಆಡಳಿತ ಮಂಡಳಿ ಸದಸ್ಯರು ಬಸವರಾಜ ತಾಳಿಕೋಟಿ ಎಸ ರಾಧಾಕೃಷ್ಣನ್ ಪ್ರಾಂಶುಪಾಲರು ಹೇಮಂತ ಅಂಗಡಿ ಮುಮತಾಜ ಬಾಳೆಕುಂದ್ರಿ ಶಿಕ್ಷಕರು ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು